
ಪುಲ್ವಾಮಾ ದಾಳಿ ನಡೆದ ವೇಳೆಯಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಎಂದು ದೇಶಾದ್ಯಂತ ಕೂಗು ಎದ್ದಿತ್ತು. ಅದಕ್ಕೆ ಸಾಥ್ ಕೊಟ್ಟಂತೆ ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲ್ಲಿಕ್ ಮಾಧ್ಯಮಗಳ ಮೂಲಕ ಹೇಳಿಕೆ ನೀಡಿದ್ರು. ಪುಲ್ವಾಮಾ ಮಾರ್ಗ ಸೇನೆಯ ಕಾನ್ವೆ ಹೋಗಲು ವ್ಯವಸ್ಥೆ ಸರಿಯಾಗಿಲ್ಲ. ಇಂಟೆಲಿಜೆನ್ಸ್ ಕೂಡ ಈ ಬಗ್ಗೆ ಮಾಹಿತಿ ನೀಡಿತ್ತು. ಅದೇ ಕಾರಣಕ್ಕೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡುವಂತೆ ಸ್ವತಃ ನಾನೇ ರಕ್ಷಣಾ ಸಚಿವರನ್ನು ಕೇಳಿಕೊಂಡೆ. ಆದರೆ ಕೇಂದ್ರ ಸರ್ಕಾರ ನನ್ನ ಮನವಿಗೆ ಒಪ್ಪಿಗೆ ಕೊಡಲಿಲ್ಲ. ಆ ಬಳಿಕ ಉಗ್ರರ ದಾಳಿಗೆ 48 ಸೈನಿಕರು ಪ್ರಾಣ ಬಿಡಬೇಕಾದ ಸ್ಥಿತಿ ಎದುರಾಯ್ತು ಎಂದು ದೂರಿದ್ದರು. ದಿ ವೈರ್ಗೆ ಪತ್ರಕರ್ತರ ಕರಣ್ ತಾಪರ್ ನಡೆಸಿದ ಸಂದರ್ಶನದಲ್ಲಿ ಈ ಹೇಳಿಕೆ ಕೊಟ್ಟಿದ್ದರು. ಇದೀಗ ಮತ್ತೆ ಅದೇ ವಿಡಿಯೋ ವೈರಲ್ ಆಗ್ತಿದೆ.
ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದ ಬಳಿಕ ಸೇನೆಯನ್ನು ನಿಯೋಜನೆ ಮಾಡಲಾಗಿತ್ತು. ಆದರೆ ಇತ್ತೀಚಿಗೆ ಸೇನೆಯನ್ನು ಕ್ರಮೇಣ ಕಡಿಮೆ ಮಾಡಿತ್ತು ಅನ್ನೋ ಸುದ್ದಿ ಹರಿದಾಡ್ತಿದೆ. ನಾಗರಿಕರ ಮೇಲೆ ಮುಂಬೈನಲ್ಲಿ ನಡೆದಿದ್ದ ದಾಳಿಯನ್ನು ಹೊರತುಪಡಿಸಿದ್ರೆ ಪಹಲ್ಗಾಮ್ನಲ್ಲಿ ನಡೆದಿರುವ ದಾಳಿ ಅತಿ ದೊಡ್ಡ 2ನೇ ದಾಳಿ ಆಗಿದೆ. ಪಾಕಿಸ್ತಾನದ ಕುತಂತ್ರದಿಂದ ಈ ರೀತಿಯ ದಾಳಿಗಳು ನಡೆಯಹುತ್ತವೆ. ಈ ಸಮಯದಲ್ಲಿ ನಾವೆಲ್ಲರೂ ಒಟ್ಟಾಗಿ ಈ ಪರಿಸ್ಥಿತಿಯನ್ನು ಎದುರಿಸಬೇಕು ಅನ್ನೋದು ಸತ್ಯ. ಆದರೆ ಈ ರೀತಿಯ ಘಟನೆಗಳ ನಡೆಯದ ಹಾಗೆ ನಮ್ಮನ್ನು ಆಳುವ ರಾಜಕೀಯ ಪಕ್ಷಗಳು ಹಾಗೂ ಅಧಿಕಾರಿಗಳು ನೋಡಿಕೊಳ್ಳಬೇಕು ಅಲ್ಲವೇ..?

ಕೇಂದ್ರ ಸರ್ಕಾರದ ಅಡಿಯಲ್ಲಿ ಗುಪ್ತಚರ ಇಲಾಖೆ ಕೆಲಸ ಮಾಡುತ್ತದೆ. ದೇಶದ ಯಾವುದೇ ರಾಜ್ಯದಲ್ಲಿ ದೇಶದ್ರೋಹ ಕೆಲಸ ಸೇರಿದಂತೆ ಮಾದಕ ವಸ್ತುಗಳ ವಿಚಾರ ಸೇರಿದಂತೆ ದೊಡ್ಡ ಮಟ್ಟದ ಅಪರಾಧ ಕೃತ್ಯ ನಡೆಯುವುದು ಇದ್ದರೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಿಸಬೇಕಾಗುತ್ತದೆ. ಎಲ್ಲೋ ಒಂದು ಸಣ್ಣ ಬಾಂಬ್ ಸಿಡಿದರೂ ಅದು ಕೇಂದ್ರ ಗುಪ್ತಚರ ಇಲಾಖೆಗೆ ಮಾಹಿತಿ ಇರಬೇಕಾಗುತ್ತದೆ. ಆ ರೀತಿ ಗುಪ್ತಚರ ಇಲಾಖೆ ಜಾಲ ದೇಶದ ಗಲ್ಲಿ ಗಲ್ಲಿಯಲ್ಲೂ ಹರಡಿಕೊಂಡು ಇರಬೇಕಾಗುತ್ತದೆ. ಆದರೆ ಈ ರೀತಿಯ ದೊಡ್ಡ ಮಟ್ಟದಲ್ಲಿ ಉಗ್ರರ ದಾಳಿ ನಡೆಯುವ ಪರಿಸ್ಥಿತಿಯಲ್ಲೂ ಕೇಂದ್ರ ಸರ್ಕಾರಕ್ಕೆ ಮಾಹಿತಿ ಇರಲಿಲ್ಲ ಎಂದಾಗ ಸರ್ಕಾರವನ್ನು ಪ್ರಶ್ನೆ ಮಾಡುವುದು ತಪ್ಪೇನು ಅಲ್ಲ.

ಕಳೆದ ಬಾರಿ ಪುಲ್ವಾಮಾ ದಾಳಿ ನಡೆದಾಗ ಚುನಾವಣೆ ಗೆಲ್ಲುವ ಉದ್ದೇಶದಿಂದ ಕೇಂದ್ರ ಸರ್ಕಾರವೇ ನಿರ್ಲಕ್ಷ್ಯ ಮಾಡಿತ್ತು. ಆ ಬಳಿಕ ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಹೆಸರಲ್ಲಿ ಚುನಾವಣಾ ಪ್ರಚಾರ ಮಾಡಿದ್ರು. ಸರ್ಜಿಕಲ್ ಸ್ಟೈಕ್ನಲ್ಲಿ ನೂರಾರು ಭಯೋತ್ಪಾಧಕರನ್ನು ಕೊಂದು ಹಾಕಿದ್ದೇವೆ ಎಂದು ಚುನಾವಣಾ ಱಲಿಗಳಲ್ಲಿ ಪ್ರಚಾರ ಮಾಡಿದ್ರು. ಆದರೆ ಆ ಕಡೆ ಪಾಕಿಸ್ತಾನ ಅಂತಾರಾಷ್ಟ್ರೀಯ ಪತ್ರಕರ್ತರನ್ನು ಕರೆದುಕೊಂಡು ಬಂದು ತೋರಿಸಿ ಇಲ್ಲಿ ನಾಲ್ಕಾರು ಮರಗಿಡಗಳು ಮಾತ್ರ ಹಾನಿಯಾಗಿವೆ. ನಿರ್ಜನ ಪ್ರದೇಶಕ್ಕೆ ಬಂದು ಭಾರತೀಯ ಸೇನೆ ಬಾಂಬ್ ಹಾಕಿ ಹೋಗಿದೆ. ಇಲ್ಲಿ ಯಾವುದೇ ಸಾವು ನೋವು ಆಗಿಲ್ಲ ಎಂದು ಜಗತ್ತಿಗೆ ತೋರಿಸುವ ಕೆಲಸ ಮಾಡಿತ್ತು. ಆದರೆ ದೇಶದಲ್ಲಿ ಪಾಕಿಸ್ತಾನದ ಮೇಲೆ ಭಾರತ ದಾಳಿ ಮಾಡಿದೆ ಅನ್ನೋದು ಬೇರೆಲ್ಲಾ ಸುದ್ದಿಗಳು ನಗಣ್ಯ ಆಗುವಂತೆ ಮಾಡಿತ್ತು. ಇದೀಗ ಮತ್ತೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡಿತೇ ಅನ್ನೋ ಅನುಮಾನ ಕಾಡುವಂತಾಗಿದೆ. ಆದರೆ ಅಮಾಯಕ ಜೀವ ಹೋಗಿದ್ದು, ಕುಟುಂಬಸ್ಥರು ಕಣ್ಣೀರಿಡುವಂ
