
ಸಚಿವ ರಾಜಣ್ಣಗೆ ಹನಿಟ್ರ್ಯಾಪ್ ಮಾಡಿರುವ ಬಗ್ಗೆ ಗೃಹ ಸಚಿವರು ಉನ್ನತ ಮಟ್ಟದ ತನಿಖೆ ಮಾಡಲು ಆದೇಶ ಮಾಡಿದ್ದಾರೆ. ಈ ಬಗ್ಗೆ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನಾಡಿ, ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಬೇಕು. ರಾಜ್ಯದವರಷ್ಟೇ ಅಲ್ಲ ರಾಷ್ಟ್ರ ನಾಯಕರನ್ನ ಟ್ರ್ಯಾಪ್ ಮಾಡಲಾಗಿದೆ ಅಂತ ಹೇಳಿದ್ದಾರೆ. ಹೀಗಾಗಿ ಇದರ ಹಿಂದೆ ಯಾರಿದ್ಧಾರೆ ಅವರ ಮುಖವಾಡ ಕಳಚಬೇಕು. ಇದು ಅಂತ್ಯ ಅಲ್ಲ ಆರಂಭ, ಇದಕ್ಕೆ ಫುಲ್ ಸ್ಟಾಪ್ ಇಡಲೇಬೇಕು ಎಂದು ಒತ್ತಾಯ ಮಾಡಿದ್ದಾರೆ.

ಶಾಸಕ ಸುನೀಲ್ ಕುಮಾರ್ ಮಾತನಾಡಿ, ಸಚಿವರು ಸದನದಲ್ಲಿ ವಿಷಯ ಪ್ರಸ್ತಾಪ ಮಾಡಿದ್ದಾರೆ. ರಾಜಕೀಯ ಬೇದ ಬಾವ ಇಲ್ಲದೆ ಖಂಡಿಸುತ್ತೇವೆ. ವಿರೋಧ ಸಿದ್ದಾಂತ ನಡೆಯಲಿ, ಹನಿಟ್ರ್ಯಾಪ್ ಮೂಲಕ ಕಟ್ಟಿ ಹಾಕುವ ಪ್ರಯತ್ನ ಬೇಡ ಎಂದಿದ್ದಾರೆ. ಸದನದಲ್ಲಿ ಸುಮ್ಮನೆ ಕೂರುವುದು ಬೇಡ. 48 ಜನರ ಮೇಲೆ ಹನಿಟ್ರ್ಯಾಪ್ ಆಗಿದೆ ಅಂದ್ರು. ಗೃಹ ಸಚಿವರು ಇದಕ್ಕೆ ಉತ್ತರ ನೀಡಬೇಕು. ರಾಜಕೀಯಕ್ಕೆ ಏನು ಬೇಕಾದ್ರು ಮಾಡಬಾರದು. ಯಾರ ಜೀವನದಲ್ಲಿ ಈ ತರಹ ಆದ್ರೆ ಅವರ ಪರ ನಾವು ನಿಲ್ಲಬೇಕು. ಗೃಹ ಸಚಿವರು ಇದಕ್ಕೆ ಉತ್ತರ ನೀಡಲೇಬೇಕು ಎಂದಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮಾತನಾಡಿ, ಸದನ ನಡಯುವ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರು, ಸಚಿವ ರಾಜಣ್ಣ ಗಂಭೀರವಾದ ಪ್ರಕರಣದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಅವರು ಈ ಬಗ್ಗೆ ಮಾತಾಡಿದ್ರು. ರಾಜಣ್ಣ ಇದು ಸತ್ಯ ಎಂದಿದ್ದಾರೆ. ಒಬ್ಬಿಬ್ಬರ ಮೇಲಲ್ಲ 48 ಜನರ ಮೇಲೆ ಆಗಿದೆ ಎಂದಿದ್ದಾರೆ. ರಾಜಣ್ಣ ಸ್ವತಃ ಕಂಪ್ಲೇಂಟ್ ಕೊಡೊದಾಗಿಯೂ ಹೇಳಿದ್ದಾರೆ. ಇದರ ಆದಾರದ ಮೇಲೆ ಗೃಹಸಚಿವರು ತನಿಖೆ ನಡೆಸೊದಾಗಿ ಹೇಳಿದ್ದಾರೆ. ಬಿಜೆಪಿ ಇದನ್ನ ಖಂಡಿಸುತ್ತದೆ. ರಾಜ್ಯದ ರಾಜಕೀಯ ಇತಿಹಾಸದಲ್ಲಿ ಸದನದಲ್ಲಿ ಇಂತಹ ಚರ್ಚೆ ಆಗಿರಲಿಲ್ಲ. ಹೈಕೋರ್ಟ್ ರಿಟೈರ್ಡ್ ಜಡ್ಜ್ ಇಂದ ಇದರ ತನಿಖೆ ಸಾಧ್ಯವಿಲ್ಲ. ಎಸ್ಐಟಯಿಂದಲೂ ಸಾದ್ಯವಿಲ್ಲ. ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದಿದ್ದಾರೆ.

ಸಚಿವರೊಬ್ಬರಿಗೆ ಹನಿಟ್ರ್ಯಾಪ್ ಮಾಡಿದ ವಿಚಾರದ ಬಗ್ಗೆ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸರ್ಕಾರದ ಭಾಗವಾಗಿರುವ ಸತೀಶ್ ಜಾರಕಿಹೊಳಿ ಹಾಗು ಕೆ.ಎನ್ ರಾಜಣ್ಣ ಅವರೇ ಹನಿಟ್ರ್ಯಾಪ್ ಆಗಿರುವುದನ್ನ ಒಪ್ಪಿಕೊಂಡಿದ್ದಾರೆ. ಒಬ್ಬರು ಸಚಿವರು ಹೇಳಿದ ಮೇಲೆ ಸರ್ಕಾರ ಅದನ್ನ ಸಾಬೀತು ಮಾಡಬೇಕು. ನಾವು ಇದನ್ನ ಅವರಿಗೇ ಬಿಡುತ್ತೇವೆ, ಅವರೆ ಹೊರತರಲಿ. ಯಾರೆ ಆಗಲಿ ಈ ರೀತಿ ಹಗೆತನ ತೀರಿಸಿಸಿಕೊಳ್ಳಬಾರದು. ಸೇಡನ್ನ ಸೈದ್ಧಾಂತಿಕವಾಗಿ ತೀರಿಸಿಕೊಳ್ಳಬೇಕು. ನಮಗೆ ಸದಸ್ಯರು ಯಾವ ಪಕ್ಷದವರಾದರೂ ಒಂದೇ. ನಮಗೆ ಸತ್ಯಾಸತ್ಯತೆ ಹೊರಬರಬೇಕು. ನಾವು ಅವರಿಗೆ ಸಂಪೂರ್ಣ ಸಹಕಾರ ಕೊಡ್ತೀವಿ. ಈ ರೀತಿ ಹನಿಟ್ರ್ಯಾಪ್ ಮಾಡೋದು ತಪ್ಪು, ಯಾರೆ ಆಗಲಿ ಅವರಿಗೆ ಶಿಕ್ಷೆ ಆಗಬೇಕು ಎಂದಿದ್ದಾರೆ.
ಬಿಜೆಪಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ಸದನದಲ್ಲೇ ರಾಜಣ್ಣನವರು ಒಪ್ಪಿಕೊಂಡಿದ್ದಾರೆ. ಇದರ ತನಿಖೆಯಾಗಬೇಕು. ಹನಿಟ್ರ್ಯಾಪ್ ಕೀಳು ಮಟ್ಟದ ರಾಜಕಾರಣ, ರಾಜಕೀಯವಾಗಿ ಸೈದ್ದಾಂತಿಕವಾಗಿ ಎದುರಿಸಬೇಕು. ಈ ರೀತಿಯಾಗಿ ಮಾಡೋದನ್ನ ಎನ್ನರೂ ಖಂಡಿಸಿದ್ದೇವೆ. ಸದನದಲ್ಲಿ ಬೇಸರವನ್ನ ಅವರು ಹೊರಹಾಕಿದ್ದಾರೆ. ಖುದ್ದಾಗಿ ಕಂಪ್ಲೇಂಟ್ ಕೊಡೋದಾಗಿಯೂ ಹೇಳಿದ್ದಾರೆ. ಉನ್ನತ ಮಟ್ಟದ ತನಿಖೆಯಾಗಲಿ. ಸಂಪೂರ್ಣ ತನಿಖೆಯಾಗಿ ಹೊರಬರಬೇಕು. ಯಾರಿದ್ದಾರೆ ಎನ್ನೋದು ಬಹಿರಂಗವಾಗಬೇಕು ಎಂದು ಒತ್ತಾಯ ಮಾಡಿದ್ದಾರೆ.