ರಾಜ್ಯ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ (Ranya rao gold smuggling case) ಇಬ್ಬರು ಸಚಿವರು ಹೆಸರು ಕೇಳಿಬರುತ್ತಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಆರ್.ಆರ್.ನಗರ ಶಾಸಕ ಮುನಿರತ್ನ (MLA muniratna) ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಚುನಾವಣೆಯಲ್ಲಿ ಯೋಗಿಶ್ವರ್ ಅವರ ಸೆಟಲ್ಮೆಂಟ್ ಆಗಿದೆ.ಇನ್ನು ಅದೇ ರೀತಿ ನಂದು ಸೆಟಲ್ಮೆಂಟ್ ಆಯ್ತು.ಈಗ ಇನ್ನು ಯಾರದ್ದೂ ಸೆಟಲ್ಮೆಂಟ್ ಆಗಿದೆ ಅಂತ ನನಗೆ ಮಾಹಿತಿ ಬಂದಿದೆ ಎಂದು ಶಾಸಕ ಮುನಿರತ್ನ ಹೇಳಿದ್ದಾರೆ.ಆದ್ರೆ ಯಾವ ರೀತಿ ಸೆಟಲ್ಮೆಂಟ್ ಆಗಿದೆ ಗೊತ್ತಿಲ್ಲ.ಇನ್ನು ಮುಂದಿನ ದಿನಗಳಲ್ಲಿ ಈ ಬಗ್ಗೆ ಗೊತ್ತಾಗುತ್ತೆ.
ಈಗಾಗಲೇ ಸಿಪಿ ಯೋಗಿಶ್ವರ್, ಹೆಚ್.ಡಿ ರೇವಣ್ಣ ಅವರದ್ದು ಸೆಟಲ್ಮೆಂಟ್ ಆಗಿದೆ.ರಮೇಶ್ ಜಾರಕಿಹೊಳಿದು ಸೆಟಲ್ಮೆಂಟ್ ಆಯ್ತಾ..? ಈಗ ಯಾರು ಇದ್ದಾರೆ ಅವರದ್ದು ಸೆಟಲ್ಮೆಂಟ್ ಆಗಿದೆ.ಅದು ಅದು ಮೇಲೆ ಗೊತ್ತಾಗುತ್ತೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಆ ಇಬ್ಬರು ಸಚಿವರ ಸೆಟಲ್ಮೆಂಟ್ ಆಗಿದೆ ಅಮೇಲೆ ಗೊತ್ತಾಗುತ್ತೆ ಎಂದು ಹೇಳಿದ್ದಾರೆ. ಒಟ್ನಲ್ಲಿ ಯಾರದ್ದೂ ಸೆಟಲ್ಮೆಂಟ್ ಆಗಿದೆ ಅನ್ನೋದು ನಾನು ಕಾದು ನೋಡ್ತೀನಿ ಎಂದು ಪರೋಕ್ಷವಾಗಿ ಡಿಕೆಶಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.