ಜನವರಿ 13 ರಂದು ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ಆರಂಭಗೊಂಡಿದ್ದ ಮಹಾ ಕುಂಭಮೇಳಕ್ಕೆ ಫೆಬ್ರವರಿ 26 ರ ಮಹಾ ಶಿವರಾತ್ರಿಯಂದು ಅಧಿಕೃತವಾಗಿ ತೆರೆಬಿದ್ದಿದೆ. ಇದೀಗ ಮಹಾಕುಂಭಮೇಳ ಮುಕ್ತಾಯದ ಬಳಿಕ ಸ್ವಚ್ಛತಾ ಅಭಿಯಾನ ಆರಂಭವಾಗಿದೆ.

ಇಂದಿನಿಂದ ಪ್ರಯಾಗರಾಜ್ (Prayag Raj)ನಲ್ಲಿ ಸಿಎಂ ಯೋಗಿ ಆದಿತ್ಯನಾಥ್ (CM Adithya Nath) ಸ್ವಚ್ಛತಾ ಅಭಿಯಾನ ನಡೆಸಲು ಮುಂದಾಗಿದ್ದಾರೆ.ಪ್ರಯಾಗರಾಜ್ನ ಅರೈಲ್ ಘಾಟ್ ನಲ್ಲಿ ಸ್ವಚ್ಛತಾ ಅಭಿಯಾನ ಆರಂಭಿಸಿದ್ದು ಸಿಎಂ ಯೋಗಿ ಆದಿತ್ಯನಾಥ್ , ಸಚಿವರು, ಅಧಿಕಾರಿಗಳಿಂದ ಗಂಗಾ ನದಿಯ (Ganga River) ಘಾಟ್ ಗಳಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಈ ಬಾರಿಯ ಮಹಾ ಕುಂಭಮೇಳಕ್ಕೆ ಸುಮಾರು 60 ಕೋಟಿಗೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ತೆರಳಿದ್ದಾರೆ. ಹೀಗಾಗಿ ಕುಂಭಮೇಳ ಮುಕ್ತಾಯಗೊಂಡ ನಂತರ ನೈರ್ಮಲ್ಯ, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಈ ಅಭಿಯಾನ ಆರಂಭಿಸಿದ್ದಾರೆ. ಈ ಮಧ್ಯೆ ಸಿಎಂ ಯೋಗಿ ಆದಿತ್ಯನಾಥ್ ಗಂಗಾ ನದಿಗೆ ಪೂಜೆ ನೆರವೇರಿಸಿದ್ದಾರೆ.