ರಾಜ್ಯ ಸರ್ಕಾರದ ವಿರುದ್ಧ ಎಚ್.ಡಿ ಕುಮಾರಸ್ವಾಮಿ (HD Kumaraswamy) ಮಾಡಿರುವ 60% ಕಮಿಷನ್ ಆರೋಪದ ವಿಚಾರಕ್ಕೆ ಸಂಬಂಧಪಟ್ಟಂತೆ ಮದ್ದೂರಿನಲ್ಲಿ ಶಾಸಕ ಕದಲೂರು ಉದಯ್ (Kadaluru uday) ಪ್ರತಿಕ್ರಿಯಿಸಿದ್ದಾರೆ. ಬಹುಶಃ ಅವರಿಗೆ ಕಮಿಷನ್ ತಕೊಂಡು ಅಭ್ಯಾಸ ಇರಬೇಕು ಅನ್ಸುತ್ತೆ ಅದಕ್ಕೆ ಆ ರೀತಿ ಹೇಳಿದ್ದಾರೆ ಎಂದು ಕೌಂಟರ್ ಕೊಟ್ಟಿದ್ದಾರೆ.

ಕೇಂದ್ರ ಸಚಿವರು ಯುವಕರಿಗೆ ಉದ್ಯೋಗ ಕೊಡಲಿ, ಇಂಡಸ್ಟ್ರೀಸ್ ಡೆವಲಪ್ಮೆಂಟ್ ಮಾಡಲಿ ಅಂತ ಮೋದಿ (Modi) ಅವರು ಹುದ್ದೆ ಕೊಟ್ಟವರೆ.ಆದ್ರೆ ಅದನ್ನ ಬಿಟ್ಟು ಟೀಕೆ ಮಾಡೋದ್ರಲ್ಲೆ ಕುಮಾರಸ್ವಾಮಿ ಕಾಲಾಹರಣ ಮಾಡ್ತಿದ್ದಾರೆ. ಮಾತನಾಡಿದ್ರೆ ಮಾತಿನಲ್ಲಿ ತೂಕ ಇರಬೇಕು, ಅದಕ್ಕೊಂದು ಬೆಲೆ ಇರಬೇಕು.5% ಸುಳ್ಳು ಇರಬೇಕು ಅದ ಬಿಟ್ಟು ನೂರಕ್ಕೆ ನೂರು ಸುಳ್ಳಾದ್ರೆ ಎನು ಅರ್ಥ? ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನು ಬಸ್ ದರ ಏರಿಕೆ (Bus ticket price) ವಿಚಾರಕ್ಕೆ ಸಂಬಂಧಪಟ್ಟಂತೆ,ಹಿಂದೆ ಇವರೆಲ್ಲರೂ ಮಾಡಿ ಇವಾಗ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ.15 ವರ್ಷಗಳ ಹಿಂದೆ ಬೆಲೆ ಏರಿಕೆ ಮಾಡಿದ್ದಾರೆ.ಇವಾಗ ಎಲ್ಲದರ ಬೆಲೆ ಹೆಚ್ಚಾಗಿದೆ.ಡೀಸೆಲ್ ಬೆಲೆ ಏರಿಕೆಯಾಗಿದೆ. ಅದಕ್ಕೆ ದರ ಏರಿಕೆ ಯಾಗಿದೆ ಅಷ್ಟೆ. ಇಲ್ಲವಾದ್ರೆ ಸಂಸ್ಥೆ ನಡೆಸಲು ಹೇಗೆ ಸಾಧ್ಯ? ಅನಿವಾರ್ಯವಾಗಿ ಬೆಲೆ ಏರಿಕೆ ಮಾಡಬೇಕಿದೆ ಅಷ್ಟೆ ಎಂದು ಬಸ್ ಟಿಕ್ ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.