
ಮಂಡ್ಯ :ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ (Union Minister HD Kumaraswamy) ಅವರು ಮೈಸೂರಿನಲ್ಲಿ (Mysore) ಮಾತನಾಡುವ ವೇಳೆ ಕಾಂಗ್ರೆಸ್ (Congress) ಅವಧಿಯಲ್ಲಿ ಲಂಚ ಶೇ.60 ತಲುಪಿದೆ. ಇದನ್ನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಒಪ್ಪಿಕೊಂಡಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದರು.ಅವರ ಹೇಳಿಕೆಗೆ ಸಚಿವ ಎನ್. ಚಲುವರಾಯಸ್ವಾಮಿ (Minister N. Chaluvarayaswamy) ಟಾಂಗ್ ಕೊಟ್ಟಿದ್ದಾರೆ.

ಜನರ ತೀರ್ಮಾನ ಅಂತಿಮ ಅನ್ನುವುದನ್ನ ಹೆಚ್.ಡಿ ಕುಮಾರಸ್ವಾಮಿ ನಂಬ್ತಾರಾ..? ಎಂದು ಪ್ರಶ್ನಿಸಿದ್ದು, ಕಳೆದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಎಲ್ಲಾ ಸರ್ವೆಗಳನ್ನು ಮೀರಿ ಜನರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ಈ ಫಲಿತಾಂಶ ಸರ್ಕಾರದ ಮೇಲಿನ ಜನರಿಗಿರುವ ವಿಶ್ವಾಸ ತೋರಿಸುತ್ತದೆ. ಕೇಂದ್ರ ಸಚಿವರು ಅವರ ಗೌರವಕ್ಕೆ ತಕ್ಕಂತೆ ಮಾತನಾಡಬೇಕು. ಟೀಕೆ ಮಾಡುವುದೇ ನಾಯಕತ್ವ ಎನ್ನುವ ರೀತಿ ಮಾತನಾಡಬಾರದು ಎಂದಿದ್ದಾರೆ.
ಕುಮಾರಸ್ವಾಮಿಯ ಇಂತಹ ಮಾತುಗಳಿಗೆ ನಾವು ಉತ್ತರ ಕೊಡುವ ಅವಶ್ಯಕತೆ ಇಲ್ಲ. ಹರಿಶ್ಚಂದ್ರ ಸತ್ತ ಬಳಿಕ ಕುಮಾರಸ್ವಾಮಿಯವರೇ ಸತ್ಯಹರಿಶ್ಚಂದ್ರ. ಲಂಚ ಮುಟ್ಟದೆ, ಭ್ರಷ್ಟಾಚಾರ ಮಾಡದೆ ಇರುವವರು ಇವರೊಬ್ಬರೆ ಅನ್ಸುತ್ತೆ. ಬಸ್ ದರ ಏರಿಕೆ ವಿಚಾರ. 15 ವರ್ಷದ ಬಳಿಕ ಬಸ್ ದರ ಪರಿಷ್ಕರಣೆ ಆಗಿದೆ. ಪೆಟ್ರೋಲ್, ಡಿಸೇಲ್ ದರ ಹೆಚ್ಚಾಗಿದೆ. ಬಸ್ ದರ ಜಾಸ್ತಿ ಮಾಡದಿದ್ರೆ ನಿಗಮ ನಡೆಸುವುದು ಹೇಗೆ..? ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಬಸ್ ದರ ಕಡಿಮೆ ಇದೆ ಎಂದಿದ್ದಾರೆ.
ಗ್ಯಾರಂಟಿಗಳಿಗೂ ಬಸ್ ದರ ಹೆಚ್ಚಳಕ್ಕೂ ಸಂಬಂಧ ಇಲ್ಲ. ಗ್ಯಾರಂಟಿ ನಿಲ್ಲಿಸಿ, ನಡೆಸಿ ಎನ್ನಲು ಇವಱರು..? ವಿರೋಧ ಪಕ್ಷದವರನ್ನ ಕೇಳಿ ಗ್ಯಾರಂಟಿ ನಿಲ್ಲಿಸಲು ಆಗಲ್ಲ ಎಂದಿದ್ದಾರೆ. ಜನಸಾಮಾನ್ಯರು ಗ್ಯಾರಂಟಿ ಬೇಡ, ಅಭಿವೃದ್ಧಿ ಬೇಕು ಎಂದಾಗ ಸರ್ಕಾರ ಯೋಚಿಸಲಿದೆ ಅಂತಾನೂ ಹೇಳಿದ್ದಾರೆ.











