ಸುಮಾರು 150 ದಿನಗಳ ಜೈಲು ವಾಸದ ನಂತರ ಜಾಮೀನಿನ ಮೇಲೆ ಹೊರಬಂದಿರುವ ನಟ ದರ್ಶನ್ ಇನ್ನು ರೆಸ್ಟ್ ಮೋಡ್ ನಲ್ಲಿದ್ದಾರೆ. ತಮ್ಮ ತೋಟದ ಮನೆಯಾಯ್ತು, ಆಸ್ಪತ್ರೆಯಾಯ್ತು ಅಂತ ಕಾಲ ಕಳೆಯುತ್ತಿದ್ದಾರೆ. ಅದಕ್ಕೆ ಕಾರಣ ಅವರ ಬಿಮ್ಮು ನೋವು. ಹೀಗಾಗಿ ದರ್ಶನ್ ಇನ್ನೂ ಯಾವುದೇ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿಲ್ಲ.

ಆದ್ರೆ ಈ ಎಲ್ಲಾ ಘಟನಾವಳಿಗೂ ಮುನ್ನ ನಟ ದರ್ಶನ್ ಅಭಿನಯದ ಕಾಟೇರಾ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ದರ್ಶನ್ ಅಭಿಮಾನಿಗಳು ಈ ಸಿನಿಮಾ ನೋಡಿ ದಿಲ್ ಖುಷ್ ಆಗಿದ್ದರು. ಈಗ ಇದೆ ಸಿನಿಮಾ ಬಗ್ಗೆ ನಿರ್ದೇಶಕ ತರುಣ್ ಸುಧೀರ್ ಸಂತಸದ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಹೌದು, ತಮ್ಮ ನಿರ್ದೇಶನದ ಕಾಟೇರ ಸಿನಿಮಾಗೆ ಇವತ್ತಿಗೆ ಭರ್ತಿ ಒಂದು ವರ್ಷ ತುಂಬಿದೆ. ಈ ಸಿನಿಮಾವನ್ನು ದೊಡ್ಡ ಯಶಸ್ಸು ಮಾಡಿದ ಪ್ರೇಕ್ಷಕರಿಗೆ, ನಟ ದರ್ಶನ್ ರಿಗೆ ಮತ್ತು ನಿರ್ಮಾಪಕರಿಗೆ ಈ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸಲು ಬಯಸುತ್ತೇನೆ ಎಂದು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಟ ದರ್ಶನ್ ರನ್ನ ಸದ್ಯ ಯಾವುದೇ ಸಿನಿಮಾಗಳಲ್ಲಿ ಬೆಳ್ಳಿ ತೆರೆಯ ಮೇಲೆ ನೋಡು ಇನ್ನು ಬಹಳ ಸಮಯ ಬೇಕು. ಈ ಹಿಂದೆ ದರ್ಶನ್ ಜೈಲಿನಲ್ಲಿದ್ದಾಗ ಅವರ ಹಾಕೆಯ ಸಿಬೆಮ ಗಳನ್ನುನ್ರೆ ರಿಲೀಸ್ ಮಾಡಲಾಗಿತ್ತು ಕೂಡ. ಹೀಗಾಗಿ ಸದ್ಯ ದರ್ಶನ್ ಅವರ ಹಿಂದಿನ ಸಿನಿಮಾಗಳ ನೆನಪಿನಲ್ಲಿಯೇ ಅವರ ಅಭಿಮಾನಿಗಳು ಕಾಲ ದೂಡಬೇಕಿದೆ.
ಹೀಗಾಗಿ ಕಾಟೇರಗೆ ಒಂದು ವರ್ಷದ ಸಂಭ್ರಮವನ್ನು ನೆನಪಿಸುವ ಸಲುವಾಗಿ ನಿರ್ದೇಶಕ ತರುಣ್ ಸುಧೀರ್ ಮಾಡಿರುವ ಈ ಪೋಸ್ಟ್ ಗೆ ಡಿ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.






