
ಹೊಸದಿಲ್ಲಿ:ಎಸ್ಎಡಿ ನಾಯಕ ಸುಖ್ಬೀರ್ ಸಿಂಗ್ ಬಾದಲ್(SAD leader Sukhbir Singh Badal,) ಮೇಲಿನ ದಾಳಿಗೆ ಸಂಬಂಧಿಸಿದಂತೆ ಪಂಜಾಬ್ನ ಮಾನ್ ಸರಕಾರದ ವಿರುದ್ಧ ಬಿಜೆಪಿ( BJP)ಬುಧವಾರ ವಾಗ್ದಾಳಿ ನಡೆಸಿದ್ದು, (AAP)ಆಪ್ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಿದೆ. ಗೋಲ್ಡನ್ ಟೆಂಪಲ್ನ (Golden Temple,)ಹೊರಗೆ ‘ಸೇವಾದರ್’ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಬಾದಲ್ನ ಮೇಲೆ ಮಾಜಿ ಭಯೋತ್ಪಾದಕನು ಸಮೀಪದಿಂದ ಗುಂಡು ಹಾರಿಸಿದನು ಆದರೆ ಸ್ಥಳದಲ್ಲಿದ್ದ ಸಾದಾ ಉಡುಪಿನ ಪೋಲೀಸ್ನಿಂದ ಗುರಿ ತಪ್ಪಿದೆ.

2007 ರಿಂದ 2017 ರವರೆಗೆ ಪಂಜಾಬ್ನಲ್ಲಿ ಎಸ್ಎಡಿ ಸರ್ಕಾರ ಮಾಡಿದ “ತಪ್ಪುಗಳಿಗೆ” ಬಾದಲ್ ಪಶ್ಚಾತ್ತಾಪ ಪಡುವ ಎರಡನೇ ದಿನವನ್ನು ವರದಿ ಮಾಡಲು ಸಿಖ್ ದೇಗುಲದ ಹೊರಗೆ ಜಮಾಯಿಸಿದ ಮಾಧ್ಯಮ ಪ್ರತಿನಿಧಿಗಳ ಕ್ಯಾಮೆರಾಗಳಲ್ಲಿ ಈ ದಿಟ್ಟ ದಾಳಿ ಸೆರೆಯಾಗಿದೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಸಭಾ ಸಂಸದ ಮತ್ತು ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ, “ಇದು ತುಂಬಾ ಗಂಭೀರ ವಿಷಯ” ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಅಧಿಕಾರಕ್ಕೆ ಬಂದಾಗಿನಿಂದ ಪಂಜಾಬ್ನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಅವರು ಆರೋಪಿಸಿದ್ದಾರೆ. “ಇಂದು ಗೋಲ್ಡನ್ ಟೆಂಪಲ್ನಲ್ಲಿ ನಡೆದ ಘಟನೆಯು ಈ ದೇಶದ ಪ್ರತಿಯೊಬ್ಬ ವ್ಯಕ್ತಿಯನ್ನು ಮತ್ತು ಪ್ರತಿಯೊಬ್ಬ ದೇಶಭಕ್ತರನ್ನು ಬೆಚ್ಚಿಬೀಳಿಸಿದೆ. ಪಂಜಾಬ್ ಸರ್ಕಾರ ಇದಕ್ಕೆ ಉತ್ತರ ನೀಡಬೇಕಾಗಿದೆ ಎಂದು ತ್ರಿವೇದಿ ಹೇಳಿದರು.
ಯಾರನ್ನೂ ಹೆಸರಿಸದೆ, ಬಿಜೆಪಿ ನಾಯಕ ಪಂಜಾಬ್ನಲ್ಲಿ ಕಾನೂನು ಸುವ್ಯವಸ್ಥೆ ಮತ್ತು ರಾಜ್ಯದ ಆರ್ಥಿಕತೆಯು ಹದಗೆಡುತ್ತಿದೆ ಎಂದು ಹೇಳಿದ್ದು, ರಾಜ್ಯದ “ಅಧಿಕೃತವಲ್ಲದ ಸಿಎಂ ಮತ್ತು ಅಧಿಕೃತ ಸಿಎಂ” ಕುರಿತು ಎಎಪಿಯೊಳಗಿನ “ಟಗ್ ಆಫ್ ವಾರ್” ನಿಂದಾಗಿ ಆಡಳಿತ ಯಂತ್ರ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದ್ದಾರೆ.