ರಾಜ್ಯದ ಮೂರು ಕ್ಷೇತ್ರದ ಉಪಚುನಾವಣೆಯ ಫಲಿತಾಂಶಗಳು ಹೊರಬಿದ್ದಿದ್ದು, ಮೂರಕ್ಕೆ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಗೆದ್ದು ಬೀಗಿದೆ. ಸಂಡೂರು, ಶಿಗ್ಗಾವಿಯ ಜೊತೆಗೆ ಚನ್ನಪಟ್ಟಣವನ್ನು ಕೈ ವಶ ಮಾಡಿಕೊಳ್ಳುವ ಮೂಲಕ ಜೆಡಿಎಸ್ ಗೆ ಗೇಟ್ ಪಾಸ್ ನೀಡಿದೆ .
ಇದೀಗ ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸೋಲು ಅನುಭವಿಸಿದ್ದು, ಆ ಮೂಲಕ ಜೆಡಿಎಸ್ (Jds) ರಾಮನಗರ ಜಿಲ್ಲೆಯಲ್ಲಿ (Ramnagar district) ಸಂಪೂರ್ಣ ಪ್ರಾಬಲ್ಯ ಕಳೆದುಕೊಂಡಿದೆ. ಜೆಡಿಎಸ್ ಭದ್ರ ಕೋಟೆ ಛಿದ್ರವಾಗಿದೆ.

ಕುಮಾರಸ್ವಾಮಿ ಹಾಸನ ಜಿಲ್ಲೆಯಲ್ಲಿ (Hassan) ಜನಿಸಿದ್ರೂ, ರಾಮನಗರ ಜಿಲ್ಲೆಯನ್ನ (Ramanagar district) ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ (HD Kumaraswamy) ತಮ್ಮ ಕರ್ಮಭೂಮಿಯಾಗಿ ಅಂತಾನೆ ಹೇಳಿಕೊಂಡು ಬಂದಿದ್ರು. ಅಲ್ಲದೇ ಇದೇ ಜಿಲ್ಲೆಯಿಂದ ಎರಡು ಬಾರಿ ಮುಖ್ಯಮಂತ್ರಿ ಕೂಡ ಆಗಿದ್ರು. ಆದ್ರೆ ಕಳೆದ ಲೋಕಸಭೆಗೆ ಮಂಡ್ಯ (Mandya) ಜಿಲ್ಲೆಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ರು.
ಈ ಕಾರಣಕ್ಕಾಗಿ ತೆರವಾಗಿದ್ದ ಚನ್ನಪಟ್ಟಣ ಕ್ಷೇತ್ರಕ್ಕೆ ತಮ್ಮ ಪುತ್ರ ನಿಖಿಲ್ನ ಕಣಕ್ಕಿಳಿಸಿದ್ದರು. ಆದ್ರೆ ಈಗ ಉಪಚುನಾವಣೆಯಲ್ಲಿ ನಿಖಿಲ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ (Cp Yogeshwar) ಭರ್ಜರಿ ಜಯಭೇರಿ ಬಾರಿಸಿದ್ದು, ರಾಮನಗರದಲ್ಲಿ ಇದ್ದ ಒಂದು ಕ್ಷೇತ್ರವನ್ನೂ ಜೆಡಿಎಸ್ ಕಳೆದುಕೊಂಡಿದೆ.ರಾಮನಗರ ಜಿಲ್ಲೆ ಇದೀಗ ಕಾಂಗ್ರೆಸ್ ಕೋಟೆಯಾಗಿದ್ದು, ಜೆಡಿಎಸ್ ಸಂಪೂರ್ಣ ವಾಶ್ ಔಟ್ ಆಗಿದೆ.