
ಕೊಪ್ಪಳದ ಹನುಮಸಾಗರದಲ್ಲಿರುವ ಅನ್ನದಾನೇಶ್ವರ ಮಠ, ವಸತಿ ಪ್ರದೇಶಕ್ಕೂ ಸಹ ವಕ್ಫ್ ಎಂದು ನಮೂದು ಆಗಿದೆ. 2021 ರಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ. ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದ ಸರ್ವೇ ನಂಬರ್ 17 ರಲ್ಲಿ 6.37 ಗುಂಟೆ ಖಬರಸ್ತಾನ, ವಕ್ಫ್ ಆಸ್ತಿ ಎಂದು ನಮೂದು ಮಾಡಲಾಗಿದೆ. ಹಾಳಕೇರಿ ಅನ್ನದಾನೇಶ್ವರ ಮಠ ಇರುವ ಜಾಗ ಹಾಗು ರಸ್ತೆ ಎಂದು ಈ ಮೊದಲು ದಾಖಲೆಗಳಲ್ಲಿವೆ.ಇದೀಗ ನ್ಯಾಯಲಯದ ಆದೇಶವೆಂದು ಪಹಣಿಯಲ್ಲಿ ದಾಖಲು ಮಾಡಲಾಗಿದೆ ಎಂದು ದೂರಿದ್ದಾರೆ.
ವಕ್ಫ್ ಬೋಡ್೯ ನಿಂದ ರೈತರಿಗೆ ನೋಟಿಸ್ ನೀಡುತ್ತಿರುವ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಪ್ರತಿಭಟನೆ ಮಾಡಲಾಗಿದೆ. ವಿವಿಧ ಮಠಾಧೀಶರಿಂದ ಹಾಗೂ ರೈತ ಸಂಘಟನೆಗಳಿಂದ ಬಿದಿಗಿಳಿದು ಹೋರಾಟ ಮಾಡುತ್ತಿವೆ. ಕಲಬುರಗಿ ನಗರದ ನಗರೇಶ್ವರ ಶಾಲೆಯಿಂದ ಜಗತ್ ವೃತದವರೆಗೆ ಪಾದಯಾತ್ರೆ ಮಾಡಲಾಗಿದೆ. ಶ್ರೀರಾಮಸೇನೆ ಅಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ಜಿಲ್ಲೆಯ ವಿವಿಧ ಮಠಾಧೀಶರು ಹೋರಾಟದಲ್ಲಿ ಭಾಗಿಯಾಗಿದ್ದಾರೆ. ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ನಾಯಕರು ಹೋರಾಟಕ್ಕೆ ಸಾಥ್ ನೀಡಿದ್ದಾರೆ.

ವಕ್ಫ್ ಬೋರ್ಡ್ ಆಸ್ತಿ ವಿವಾದ ಹಿನ್ನೆಲೆ ಬಿಜೆಪಿ ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ಬಳಿ ಅಹೋರಾತ್ರಿ ಧರಣಿ ನಡೆಸಲಾಗ್ತಿದೆ.. ಬಿಜೆಪಿ MLC ಸಿ.ಟಿ ರವಿ, ಮಾಜಿ ಶಾಸಕ ಜೀವರಾಜ್, MLC ಪ್ರಾಣೇಶ್ ಸೇರಿ ಹಲವರು ಭಾಗಿಯಾಗಿದ್ದು ಅಹೋರಾತ್ರಿ ಧರಣಿ ಮೂಲಕ ಜನಜಾಗೃತಿಗೆ ಕರೆ ನೀಡಿದ್ದಾರೆ.. ಸುಮೋಟೋ ಆಧಾರದ ಮೇಲೆ ಜಿಲ್ಲೆಯ ಸಾವಿರಾರು ಕೋಟಿ ಆಸ್ತಿ ನೋಟಿಫಿಕೇಶನ್ ಮಾಡಿರುವ ಆರೋಪ ಕೇಳಿ ಬಂದಿದೆ.. ನಮ್ಮ ಭೂಮಿ ನಮ್ಮ ಹಕ್ಕು ಎಂದು ಘೋಷಣೆ ಕೂಗುತ್ತಾ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.
ಸಂವಿಧಾನ, ಭಾರತ, ಮಠ – ಮಂದಿರ ಉಳಿಸಿಕೊಳ್ಳೊದಕ್ಕೆ ಹೋರಾಟ ಮಾಡಬೇಕಾಗಿದೆ ಎಂದು ಚಿಕ್ಕಮಗಳೂರಿನಲ್ಲಿ MLC ಸಿ.ಟಿ ರವಿ ಹೇಳಿಕೆ ನೀಡಿದ್ದಾರೆ. 1500 ವರ್ಷಗಳ ಹಿಂದೆ ಜಗತ್ತಲ್ಲಿ ಇಸ್ಲಾಂ ಇರಲೇ ಇಲ್ಲ. ಕುರುಬ ಸಮಾಜಕ್ಕೆ ಸೇರಿದ ಬೀರೇಶ್ವರ ದೇವಾಲಯವನ್ನೂ ನಮ್ಮದು ಅಂತಿದ್ದಾರೆ. ಭಕಾಸುರ ಮತ್ತೆ ಭಸ್ಮಾಸುರ ಸೇರಿದ್ರೆ ಏನಾಗುತ್ತೋ ಅದು ಈ ವಕ್ಫ್ ಬೋರ್ಡ್ ಆಗಿದೆ. ವಕ್ಫ್ ಬೋರ್ಡ್ ಜಾಗದಲ್ಲೇ ಪಾರ್ಲಿಮೆಂಟ್ ಕಟ್ಟಿದ್ದಾರೆ ಅಂತಾರೆ. ವಿಧಾನ ಸೌಧ ಕಟ್ಟಿರೋದೂ ವಕ್ಫ್ಜಾಗದಲ್ಲೇ ಅಂತಾರೆ. ಇಸ್ಲಾಂ ರಾಷ್ಟಗಳಲ್ಲೇ ಇಲ್ಲದ ವಕ್ಫ್ ಬೋರ್ಡ್ ಭಾರದಲ್ಲಿದೆ ಎಂದು ವ್ಯಂಗ್ಯವಾಡಿದ್ದಾರೆ.

ವಕ್ಫ್ ಬೋರ್ಡ್ ವಿವಾದ ಸಂಬಂಧ ಕಾರವಾರದಲ್ಲೂ ಬಿಜೆಪಿ ನಾಯಕರು ಪ್ರತಿಭಟನೆ ನಡೆಸ್ತಿದ್ದಾರೆ.. ನಮ್ಮ ಭೂಮಿ ನಮ್ಮ ಹಕ್ಕು ಘೋಷಣೆಯೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯುತ್ತಿದೆ.. ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿ ಕಿಡಿಕಾರಿದ್ದಾರೆ.