ಬೆಂಗಳೂರು ದಕ್ಷಿಣ (Bangalore south) ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejaswi surya) ವಿರುದ್ಧ ಹಾವೇರಿ ಪೊಲೀಸ್ ಸ್ಟೇಷನ್ ನಲ್ಲಿ FIR ದಾಖಲಾಗಿದೆ. ಸಂಸದ ತೇಜಸ್ವಿ ಸೂರ್ಯ ಸಾಮಾಜಿಕ ಮಾಧ್ಯಮದಲ್ಲಿ ಹಾವೇರಿಯ ರೈತನ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ ಎಂಬ ಕಾರಣಕ್ಕೆ ಮತ್ತು ಇದನ್ನು ಪಾರಾಮರ್ಶಿಸದೆ ಕನ್ನಡ ದನಿಯ(Kannada duniya) ಎಂಬ ಡಿಜಿಟಲ್ ಸುದ್ದಿ ಮಾಧ್ಯಮ ಅದನ್ನು ಬಿತ್ತರಿಸಿದ್ದು, ಇವರ ಮೇಲೂ ಕೇಸ್ ದಾಖಲಾಗಿದೆ.
ಸುನೀಲ ಹುಚ್ಚಣ್ಣವರ (Sunil hucchannanavara) ಎಂಬ ವ್ಯಕ್ತಿ ಈ ಆಪಾದನೆ ಮಾಡಿದ್ದು, ಸಂಸದ ತೇಜಸ್ವಿ ಸೂರ್ಯ, ಕನ್ನಡ ದನಿಯ ಸಂಪಾದಕರು ಮತ್ತು ಕನ್ನಡ ಈ ನ್ಯೂಸ್ ಪೇಪರ್ ಸಂಪಾದಕರ ವಿರುದ್ಧ ದೂರು ದಾಕಲಿಸಿದ್ದಾರೆ.

ರಾಜ್ಯದಲ್ಲಿ ವಕ್ಫ್ ಬೋರ್ಡ್ ನ (Waqf board) ಆಸ್ತಿ ವಿವಾದಕ್ಕೆ ಮನನೊಂದು ಯುವ ರೈತನೋರ್ವ ಹಾವೇರಿ ಜಿಲ್ಲೆಯ ಹರನಗಿ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಶರಾಣಾಗಿದ್ದಾರೆ ಎಂದು ಎರಡು ವರ್ಷದ ಹಿಂದಿನ ಘಟನೆಯ ಬಗ್ಗೆ ಸುಳ್ಳು ಸುದ್ದಿ ನೀಡಿದ್ದಾರೆ ಎಂದು ಮೊಕದ್ದಮೆ ದಾಖಲಿಸಲಾಗಿದೆ.
ರೈತ ರುದ್ರಪ್ಪ ಅವರ ಮಗ ಚೆನ್ನಪ್ಪ, ಹಾನಗಲ್ ತಾಲ್ಲೂಕಿನ ಅಲ್ಲಾಪುರ ಗ್ರಾಮದಲ್ಲಿ 1964ರಲ್ಲಿ 4 ಎಕರೆ 36 ಗುಂಟೆ ಜಮೀನು ಖರೀದಿ ಮಾಡಿದ್ದರು. ಅಲ್ಲಿಂದ 2015 ರವರೆಗೂ ಚೆನ್ನಪ್ಪ ಮತ್ತು ಮಗ ರುದ್ರಪ್ಪ ಉಳುಮೆ ಮಾಡಿಕೊಂಡು ಬರುತ್ತಿದ್ದರು. ಆದರೆ 2015ರಲ್ಲಿ ಇದ್ದಕ್ಕಿದ್ದಂತೆ ಜಮೀನು ವಕ್ಫ್ ಬೋರ್ಡ್ಗೆ ಹೆಸರಿಗೆ ಸೇರ್ಪಡೆಯಾಗಿದೆ. ಈ ಕಾರಣಕ್ಕಾಗಿ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಎಂದು ಕನ್ನಡ ದುನಿಯ ಈ ಪೇಪರ್ ನಲ್ಲಿ ಪ್ರಕಟಿಸಲಾಗಿದ್ದು, ಇದರ ಸತ್ಯಾಸತ್ಯತೆ ತಿಳಿಯದೆ ಸಂಸದ ತೇಜಸ್ವಿ ಸೂರ್ಯ ಕೂಡ ಈ ಪೋಸ್ಟ್ ಷೇರ್ ಮಾಡಿದ್ದಾರೆ.

ಆದ್ರೆ ಇದನ್ನು ಪರಿಶೀಲಿಸಿದಾಗ, ಹಾವೇರಿಯಲ್ಲಿ ವಕ್ಫ್ ಜಮೀನು ಕಬಳಿಕೆಗೆ ಸಂಬಂಧಪಟ್ಟಂತೆ ಯಾವುದೇ ರೈತರ ಆತ್ಮಹತ್ಯೆ ನಡೆದಿಲ್ಲ ಎಂದು ತಿಳಿದು ಬಂದಿದ್ದು, ಈ ರೀತಿ ಸುಳ್ಳು ಸುದ್ದಿ ಬಿತ್ತರಿಸಲಾಗಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದಾರೆ. ಈ ದೂರು ದಾಖಲಿಸಿಕೊಂಡಿರುವ ಹಾವೇರಿ ಪೊಲೀಸರು ಸಂಸದ ತೇಜಸ್ವಿ ಸೂರ್ಯ ಮತ್ತು ಸುದ್ದಿ ಸಂಸ್ಥೆ ವೀರಿದ್ದ FIR ದಾಖಲಿಸಿದ್ದಾರೆ.