ಶ್ರೀನಗರ: ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ(Farooq Abdullah) ಅವರು ಸೋಮವಾರ ಜಮ್ಮು ಮತ್ತು ಕಾಶ್ಮೀರದ ಗಗಾಂಗೀರ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ.ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆಗಳನ್ನು ನಿಲ್ಲಿಸುವಂತೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
ಭಾರತದೊಂದಿಗೆ ಉತ್ತಮ ಬಾಂಧವ್ಯ ಬೇಕಾದರೆ ಪಾಕಿಸ್ತಾನ(Pakistana) ಈ ಚಟುವಟಿಕೆಗಳನ್ನು ನಿಲ್ಲಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. “ಭಾರತದೊಂದಿಗೆ ಉತ್ತಮ ಬಾಂಧವ್ಯ ಬೇಕಾದರೆ ಪಾಕಿಸ್ತಾನ ಅನಣವಶ್ಯಕವಾಗಿ ಕಾಶ್ಮೀರದ ತಂಟೆಗೆ ಬರಬಾರದು.ಅವರು ಇದನ್ನು ಕೊನೆಗಾಣಿಸಬೇಕು ಎಂದು ಪಾಕಿಸ್ತಾನದ ನಾಯಕತ್ವಕ್ಕೆ ನಾನು ಹೇಳಲು ಬಯಸುತ್ತೇನೆ.ಕಾಶ್ಮೀರ ಪಾಕಿಸ್ತಾನ ಏನೇ ಮಾಡಿದರೂ ಕೂಡ ಕಾಶ್ಮೀರ ಎಂದಿಗೂ ಪಾಕಿಸ್ತಾನವಾಗುವುದಿಲ್ಲ.ನಾವು ಘನತೆಯಿಂದ ಬದುಕೋಣ ಮತ್ತು ಯಶಸ್ವಿಯಾಗೋಣ ಎಂದು ಹೇಳಿದ್ದಾರೆ.
ಪಾಕಿಸ್ತಾನವು ಭಾರತದ ನೆಲದಲ್ಲಿ ಭಯೋತ್ಪಾದನೆ ನಿಲ್ಲಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.ನೀವು ಎಷ್ಟು ದಿನಗಳವರೆಗೆ ನಿಮ್ಮ ಪ್ರಯತ್ನವನ್ನು ಮುಂದುವರಿಸುತ್ತೀರಿ.1947ರಿಂದ ಕಾಶ್ಮೀರವನ್ನು ಪಡೆಯಲು ಯತ್ನಿಸುತ್ತಲೇ ಇದ್ದೀರಿ. 75 ವರ್ಷಗಳಾದವು ಇನ್ನೂ ಪಾಕಿಸ್ತಾನದವರಿಗೆ ಕಾಶ್ಮೀರ ವಶಪಡಿಸಿಕೊಳ್ಳಲಾಗಲಿಲ್ಲ.ಇನ್ನು ಮುಂದೆ ಸಾಧ್ಯವೇ? ಇದು ಭಯೋತ್ಪಾದನೆಯನ್ನು ಕೊನೆಗೊಳಿಸುವ ಸಮಯ. ಇಲ್ಲದಿದ್ದರೆ ಫಲಿತಾಂಶವು ತುಂಬಾ ಗಂಭೀರವಾಗಿರುತ್ತದೆ. ಅವರು ನಮ್ಮ ಅಮಾಯಕರನ್ನು ಕೊಂದರೆ ಹೇಗೆ ಸುಮ್ಮನಿರಲು ಸಾಧ್ಯ, ಅವರ ಜೊತೆ ಮಾತುಕತೆ ನಡೆಸುವುದು ಹೇಗೆ ಎಂದು ಹೇಳಿದ್ದಾರೆ.