• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಬೆಂಗಳೂರು ಮಳೆಗೆ ಜನ ತತ್ತರ.. ಡಿಕೆಶಿ ಸಿಟಿ ರೌಂಡ್ಸ್‌ ಶಾಸಕರು ಗರಂ..

ಕೃಷ್ಣ ಮಣಿ by ಕೃಷ್ಣ ಮಣಿ
October 21, 2024
in ಕರ್ನಾಟಕ, ರಾಜಕೀಯ
0
ಬೆಂಗಳೂರು ಮಳೆಗೆ ಜನ ತತ್ತರ.. ಡಿಕೆಶಿ ಸಿಟಿ ರೌಂಡ್ಸ್‌ ಶಾಸಕರು ಗರಂ..
Share on WhatsAppShare on FacebookShare on Telegram

ಬೆಂಗಳೂರಿಗರು ಧಾರಾಕಾರ ಮಳೆಗೆ ತತ್ತರಿಸಿ ಹೋಗಿದ್ದು, ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್‌ ಮಳೆ ಅವಾಂತರದ ಬಗ್ಗೆ ಮಾತನಾಡಿದ್ದಾರೆ. ರಾಜ್ಯದಲ್ಲಿ‌ ಹೆಚ್ಚು ಮಳೆ ಆಗುತ್ತಿದೆ. ಕೆಲವರು ಮಳೆ ಬೇಡ ಅಂತ ಹೇಳಬಹುದು. ಆದರೆ ನಾನು ಮಳೆ ಬರೋದು ಬೇಡ ಅಂತ ಹೇಳಲ್ಲ. ಮಳೆ ಬರಲಿ, ಭೂಮಿ ಕುಡಿಯಲಿ, ಕೆರೆಗಳು ತುಂಬಲಿ. ಕಾವೇರಿ ನೀರು ತಮಿಳುನಾಡಿಗೆ ಆದಷ್ಟು ಬೇಗ ಹೋಗಲಿ, ಮೇಕೆದಾಟು ಯೋಜನೆ ಬರಲಿ. ಬೆಂಗಳೂರಲ್ಲಿ ಮಳೆ ಅವಾಂತರ ಆಗಿದೆ, ಅದೆಲ್ಲ ಸರಿ ಮಾಡೋಣ ಎಂದಿದ್ದಾರೆ.

ADVERTISEMENT

ಮಳೆ ಕಡಿಮೆ ಆದಮೇಲೆ ಸಮಸ್ಯೆಗೆ ಏನು ಪರಿಹಾರ ಹುಡುಕಬೇಕು ಹುಡುಕಿ ಮಾಡ್ತೇವೆ. ಮೊದಲು ಮಳೆ ಬರಲಿ, ಆಮೇಲೆ ಎಲ್ಲವನ್ನ ಯೋಚನೆ ಮಾಡೋಣ. ಬೆಳೆ ಹಾನಿ ಮುಖ್ಯವಲ್ಲ, ಅದೆಲ್ಲ ಪರಿಹಾರ ಕೊಡೋದು ಕೇಂದ್ರ ಸರ್ಕಾರ. ತಗ್ಗು ಪ್ರದೇಶಗಳಲ್ಲಿ ಎಲ್ಲೆಲ್ಲಿ ನೀರು ತುಂಬಿಕೊಂಡಿದೆ ಅಲ್ಲೆಲ್ಲಾ ಬೇಗ ಕ್ಲಿಯರ್ ‌ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಾನು ಇಂದು ಸಂಜೆ ಬಳಿಕ ಸಿಟಿ ರೌಂಡ್ಸ್ ಹೋಗುವ ತೀರ್ಮಾನ ಮಾಡಿದ್ದೇನೆ ಎಂದಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ಬೆಂಗಳೂರಲ್ಲಿ ಲೊ ಪ್ರೆಶರ್‌ನಿಂದ ಕೆಲವು ಏರಿಯಾಗಳು ಜಲಾವೃತ ಆಗಿವೆ. ನಿನ್ನೆಯಿಂದ ಮಳೆ ಅಲರ್ಟ್ ಶುರುವಾಗಿದೆ. ಅಕ್ಟೋಬರ್‌ 23ರವರೆಗೆ ಯೆಲ್ಲೊ ಅಲರ್ಟ್ ಇದೆ. ಕಳೆದ‌ ಎರಡು ದಿನಗಳಲ್ಲಿ ವಿಪರೀತ ಮಳೆ ಆಗ್ತಿದ್ದು, ಆರ್ ಆರ್ ನಗರ, ಯಶವಂತಪುರ ಎರಡು ಕಡೆ ಮಳೆ ಹೆಚ್ಚಾಗಿದೆ. 97 ಕಡೆ ರಸ್ತೆ ಮೇಲೆ ನೀರು ನಿಂತಿತ್ತು, ಕೆಲವು ಮನೆಗಳಿಗೆ ನೀರು ತುಂಬಿದೆ, ತೆರವು ಮಾಡ್ತಿದ್ದೇವೆ. ಕೆಂಗೇರಿ‌ ಭಾಗದಲ್ಲೂ‌ ಹೆಚ್ಚಿನ ಮಳೆಯಾಗಿದೆ. 7 ಮರಗಳು 13 ಕೊಂಬೆಗಳು ಬಿದ್ದಿವೆ. ಬೃಹತ್ ನೀರುಗಾಲುವೆಗಳಲ್ಲಿ ದೊಡ್ಡ ಜೆಸಿಬಿಗಳ ಮೂಲಕ ಕ್ಲೀನಿಂಗ್ ಮಾಡ್ತಿದ್ದೇವೆ ಎಂದಿದ್ದಾರೆ.

ಮಳೆ ಬಂದ್ರೆ.. ನೀರು ಬರುತ್ತದೆ.. ಹೋಗುತ್ತೆ. ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ರಾಜಕಾಲುವೆ ಪಕ್ಕದಲ್ಲಿ ಇದೆ. ಹಾಗಾಗಿ ನೀರು ನಿಲ್ಲುತ್ತದೆ.. ನಿಮ್ಮನ್ನ ಯಾರೋ ದುಡ್ಡೋ ಕಾಸೋ ಕೊಟ್ಟು ಇಲ್ಲಿಗೆ ಕರೆಸಿರಬೇಕು.. ನಿಮಗೆ ಹೇಗೆ ಬೇಕೋ ಹಾಗೆ ನ್ಯೂಸ್ ಮಾಡಿಕೊಳ್ಳಿ ಅಂತ ಶಾಸಕ ಹ್ಯಾರಿಸ್‌ ಗರಂ ಆಗಿದ್ದಾರೆ. ಮಳೆ ಬಗ್ಗೆ ಕಾಂಗ್ರೆಸ್‌ ಶಾಸಕರು ಉಢಾಪೆ ಉತ್ತರ ಕೊಟ್ಟಿದ್ರೆ, ಸಿಎಂ ಸಿದ್ದರಾಮಯ್ಯ ಮಾತ್ರ ಮಳೆಯಿಂದ ಬೆಳೆಗಳು ನಾಶ ಆಗಿಲ್ಲ.. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗಿರೋದ್ರಿಂದ ಮಳೆಯಾಗ್ತಿದೆ ಅಂದಿದ್ದಾರೆ.

Tags: BJPCongress PartyDCM DK Shivakumardcm dk shivakumar city roundsDK Shivakumardk shivakumar bangalore roundsdk shivakumar bengaluru roundsdk shivakumar city roundsdk shivakumar cmdk shivakumar congressdk shivakumar daughterdk shivakumar interviewdk shivakumar latest newsdk shivakumar meetingdk shivakumar newsdk shivakumar speechdk shivakumar today newsdk shivakumar vs siddaramaiahdk shivkumarsiddaramaiah vs dk shivakumarಎಚ್ ಡಿ ಕುಮಾರಸ್ವಾಮಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಇವತ್ತು ನಾಳೆ ನಾಡಿದ್ದು ಎಲ್ಲೆಲ್ಲಿ ಭಾರೀ ಮಳೆ ಆಗುತ್ತೆ..? ತಜ್ಞರು ಏನಂತಾರೆ..?

Next Post

ಮೆಕ್‌ಡೊನಾಲ್ಡ್​​ನಲ್ಲಿ ಡೊನಾಲ್ಡ್​ ಟ್ರಂಪ್​​​​​; ಕೆಲಸ ಮಾಡುತ್ತಿರುವ ವಿಡಿಯೋ ವೈರಲ್​

Related Posts

80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..
Top Story

80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

by ಪ್ರತಿಧ್ವನಿ
May 23, 2026
0

ಬೆಂಗಳೂರು : ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವ ಮೂಲಕ ಕ್ರೀಡೆ, ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆ ಸೇರಿ ಎಲ್ಲಾ ದೃಷ್ಟಿಯಿಂದ ಈ ಭಾಗದ...

Read moreDetails
ದೇಶ ಕಟ್ಟುವ ಕಾರ್ಮಿಕರ ಬದುಕಿಗೆ ಸಹಾಯ ಮಾಡಿದ ಸಮಾಧಾನ ನಮ್ಮ ಸರ್ಕಾರದ್ದು :‌ ಸಚಿವ ಸಂತೋಷ್‌ ಲಾಡ್..

ದೇಶ ಕಟ್ಟುವ ಕಾರ್ಮಿಕರ ಬದುಕಿಗೆ ಸಹಾಯ ಮಾಡಿದ ಸಮಾಧಾನ ನಮ್ಮ ಸರ್ಕಾರದ್ದು :‌ ಸಚಿವ ಸಂತೋಷ್‌ ಲಾಡ್..

May 23, 2026
ಸಾಮಾಜಿಕ ಜಾಲತಾಣದಲ್ಲಿ ಕಾಕ್ರೋಚ್‌ ಓಟಕ್ಕೆ ಬ್ರೇಕ್..?‌ : ಯುವಕರ ಹೋರಾಟ ತುಳಿಯುವ ಷಡ್ಯಂತ್ರವಾ..?

ಸಾಮಾಜಿಕ ಜಾಲತಾಣದಲ್ಲಿ ಕಾಕ್ರೋಚ್‌ ಓಟಕ್ಕೆ ಬ್ರೇಕ್..?‌ : ಯುವಕರ ಹೋರಾಟ ತುಳಿಯುವ ಷಡ್ಯಂತ್ರವಾ..?

May 23, 2026
“ಕರ್ನಾಟಕದ ಜನತೆ ಎಂದಿಗೂ ಕ್ಷಮಿಸುವುದಿಲ್ಲ, ಇತಿಹಾಸವೂ ನಿಮ್ಮ ಕೊಳಕು ಮನಸ್ಥಿತಿಯನ್ನು ದಾಖಲಿಸದೆ ಬಿಡುವುದಿಲ್ಲ”

“ಕರ್ನಾಟಕದ ಜನತೆ ಎಂದಿಗೂ ಕ್ಷಮಿಸುವುದಿಲ್ಲ, ಇತಿಹಾಸವೂ ನಿಮ್ಮ ಕೊಳಕು ಮನಸ್ಥಿತಿಯನ್ನು ದಾಖಲಿಸದೆ ಬಿಡುವುದಿಲ್ಲ”

May 23, 2026
ಗ್ರಾಹಕರ ಜೇಬು ಸುಡುತ್ತಿದೆ ಇಂಧನ ದರ ಏರಿಕೆ : ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಎಷ್ಟು ಹೆಚ್ಚಳ ಗೊತ್ತಾ..?

ಗ್ರಾಹಕರ ಜೇಬು ಸುಡುತ್ತಿದೆ ಇಂಧನ ದರ ಏರಿಕೆ : ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಎಷ್ಟು ಹೆಚ್ಚಳ ಗೊತ್ತಾ..?

May 23, 2026
Next Post

ಮೆಕ್‌ಡೊನಾಲ್ಡ್​​ನಲ್ಲಿ ಡೊನಾಲ್ಡ್​ ಟ್ರಂಪ್​​​​​; ಕೆಲಸ ಮಾಡುತ್ತಿರುವ ವಿಡಿಯೋ ವೈರಲ್​

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada