ಕೋವಿಡ್ ತನಿಖೆಗೆ ಉಪಸಮಿತಿ ಮಾಡಿರುವ ಬಗ್ಗೆ ಸಂಸದ ಸುಧಾಕರ್ ಮಾತನಾಡಿ, ಮೊದಲು ಒಂದು ನ್ಯಾಯಾಂಗ ಸಮಿತಿ ಮಾಡಿದ್ದರು. ಈಗ ಮತ್ತೊಂದು ಉಪ ಸಮಿತಿ ಮಾಡಿದ್ದಾರೆ. 7 ಜನ ಸಚಿವರು ಇರುವ ಕಮಿಟಿ ಮಾಡಿದ್ದಾರೆ. 55 ಸಾವಿರ ಪುಟಗಳಿರುವ ವರದಿ ಬಂದಿದೆ. ಒಂದೊಂದು ಪುಟಗಳನ್ನೂ ಕೂಡ ಚೆನ್ನಾಗಿ ನೋಡಲಿ ಎಂದು ವ್ಯಂಗ್ಯವಾಡಿದ್ದಾರೆ.
ಸರ್ಕಾರದ ಬಗ್ಗೆಯೂ ಜನರಿಗೆ ಕೂಡ ಅರ್ಥ ಆಗಲಿದೆ. ಯಾವಾಗಲೂ ಕೋವಿಡ್ ಕೋವಿಡ್ ಎನ್ನುತ್ತಾರೆ. ಕೋವಿಡ್ನಲ್ಲಿ ಯಾವ ರೀತಿ ಕೆಲಸ ಮಾಡಿದ್ದೇವೆ. ಹಗಲಿರುಳು ಕೆಲಸ ಮಾಡಿ ರಾಜ್ಯದ ಜನರ ಜೀವ ಉಳಿಸಿದ್ದೇವೆ ಎಂದು ಸಂಸದ ಡಾ. ಕೆ ಸುಧಾಕರ್ ಹೇಳಿದ್ದಾರೆ.
ಕ್ರಷರ್ಗಳನ್ನು ನಿಲ್ಲಿಸುವ ವಿಚಾರವಾಗಿ ಪ್ರದೀಪ್ ಈಶ್ವರ್ಗೆ ಟಾಂಗ್ ಕೊಟ್ಟಿರುವ ಡಾ. ಕೆ ಸುಧಾಕರ್, ಕ್ರಷರ್ಗಳನ್ನು ನಿಲ್ಲಿಸಲು ಆಗದೇ ಇದ್ದರೆ ಬಳೆ ತೊಟ್ಟುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಸೋಮವಾರ ಸಂತೆ ಪೆರೇಸಂದ್ರದಲ್ಲಿ ಆಗುತ್ತದೆ. ಬುಧವಾರ ಶನಿವಾರದಂದು ಚಿಕ್ಕಬಳ್ಳಾಪುರದಲ್ಲಿ ಸಂತೆ ನಡೆಯುತ್ತದೆ. ಸಂತೆಯಲ್ಲಿ ಒಳ್ಳೆ ಬಳೆಗಳು ಸಿಗುತ್ತವೆ ಎಂದಿರುವ ಸುಧಾಕರ್, ಒಂದು ಡಜನ್ ಬಳೆ ಕೊಡಿಸುತ್ತೇನೆ, ಹಾಕಿಕೊಳ್ಳಲು ಹೇಳಿ ಎಂದು ವಾಗ್ದಾಳಿ ಮಾಡಿದ್ದಾರೆ.