
ಮನೆ ಹಾನಿ ಸಮೀಕ್ಷೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನದ ಬಗ್ಗೆ ಮಾಜಿ ಸಚಿವ ಬಿ ಸಿ ಪಾಟೀಲ್ ಕಿಡಿಕಾರಿದ್ದಾರೆ. ಹಾವೇರಿ ಜಿಲ್ಲೆಯ ಹಿರೆಕೇರೂರು ನಿವಾಸದಲ್ಲಿ ಮಾತನಾಡಿ, ನೆರೆ ಸಂತ್ರಸ್ಥರ ವಸತಿ ಯೋಜನೆಯಡಿ ತಾಲೂಕಿನಲ್ಲಿ ಹಾಳಾದ ಮನೆಗಳ ಸಮೀಕ್ಷೆಯಲ್ಲಿ ತಾರತಮ್ಯ ಮಾಡಲಾಗಿದೆ. ಅಧಿಕಾರಿಗಳು ಮುತುವರ್ಜಿ ವಹಿಸದೇ ಬೇಜವಾಬ್ದಾರಿತನ ಮಾಡಿದ್ದಾರೆಂದು ದೂರಿದ್ದಾರೆ.

2019 ರಿಂದ 2023ರ ವರೆಗೆ ತಾಲೂಕಿನಲ್ಲಿ ಒಟ್ಟು 1,822 ಮನೆಗಳಿಗೆ ಈ ₹45,69,8304 ನೀಡಲಾಗಿತ್ತು. ಆದರೆ, 2024 ರಲ್ಲಿ ಕೇವಲ 28 ಮನೆಗಳಿಗೆ ₹30,80,000 ನೀಡಲಾಗಿದೆ. ಇದರಲ್ಲೂ ಸದ್ಯ ನೀಡಿರುವ ಹಣ ಕೇಂದ್ರ ಸರಕಾರದ ಎನ್ಡಿಆರ್ಎಫ್ ಫಂಡ್ ಆಗಿದೆ. ರಾಜ್ಯ ಸರಕಾರದಿಂದ ನೆರೆ ಸಂತ್ರಸ್ತರ ವಸತಿ ಯೋಜನೆಗೆ ಹಣ ನೀಡಿಲ್ಲ ಎಂದು ಕಿಡಿಕಾರಿದ್ದಾರೆ.

ಪ್ರಸಕ್ತ ಹೆಚ್ಚು ಮೆಳಯಿಂದ ಜಾಸ್ತಿ ಹಾನಿಯಾಗಿದ್ದರೂ ಅಧಿಕಾರಿಗಳು ಸಮೀಕ್ಷೆ ನಡೆಸದೆ ನೊಂದ ಜನರಿಗೆ ಅನ್ಯಾಯ ಎಸಗಿದ್ದಾರೆ. ಸದ್ಯ ಭೀಕರ ಮಳೆ ಸುರಿಯುತ್ತಿದೆ, ಈಗಲಾದರೂ ಅಧಿಕಾರಿಗಳು ಸರಿಯಾದ ಸಮೀಕ್ಷೆ ನಡೆಸಿ ಮಳೆಯಿಂದ ಆಗಿರುವ ಹಾನಿಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.





