ಬೆಂಗಳೂರು: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ನಡೆದ ರಸ್ತೆ, ಚರಂಡಿ, ಫುಟ್ ಪಾತ್ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಅವರು ಭಾಗವಹಿಸಿದರು.
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಎಚ್ಬಿಆರ್ ಲೇಔಟ್, ಹೆಣ್ಣೂರು ಗ್ರಾಮ, ಬೈರನಕುಂಟೆ, ಹೆಣ್ಣೂರು ಗಾರ್ಡನ್, ಪೂರ್ಣಾಂಜನೇಯ ಲೇಔಟ್, ರಾಮಚಂದ್ರಪ್ಪ ಲೇಔಟ್, ಮತ್ತು ಎಚ್ಬಿಆರ್ ವಾರ್ಡ್ನ ಕರಿಯಣ್ಣನಪಾಳ್ಯದಲ್ಲಿ 4 ಮತ್ತು 5 ನೇ ಹಂತದಲ್ಲಿ ರಸ್ತೆಗಳು ಮತ್ತು ಚರಂಡಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಇನ್ನು, ಬೈರಪ್ಪ ಲೇಔಟ್, ರಶಾದ್ ನಗರ, ವೈಯಾಲಿಕಾವಲ್ ಎಚ್ಬಿಸಿಎಸ್ ಲೇಔಟ್, ರಾಜು ಕಾಲೋನಿ, ಸೆಂಟ್ ಫ್ರೇಜರ್ ಶಾಲೆ, ಗಾಂಧಿನಗರದ 1ನೇ ಮತ್ತು 2ನೇ ಹಂತ, ಹಿದಾಯತ್ ನಗರ, ಪಿಳ್ಳಣ್ಣ ಗಾರ್ಡನ್ ಮತ್ತು ನಾಗವಾರ ವಾರ್ಡ್ ಮತ್ತು ಕೆ.ಜಿ.ಹಳ್ಳಿ ವಾರ್ಡ್ನಲ್ಲಿರುವ ಬಿಎಂ ಲೇಔಟ್ನಲ್ಲಿ ರಸ್ತೆಗಳು ಮತ್ತು ಚರಂಡಿಗಳ ಅಭಿವೃದ್ಧಿ ಕಾಮಗಾರಿಗಳನ್ನು ಸಚಿವರಾದ ಕೆ.ಜೆ.ಜಾರ್ಜ್ ಉದ್ಘಾಟಿಸಿದರು.
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಕರಿಯಣ್ಣ ಪಾಳ್ಯ, ಜೀವನಹಳ್ಳಿ, ನಾಗಯ್ಯನ ಪಾಳ್ಯ, ಐಟಿಸಿ ಕಾಲೋನಿ, ಬೀರಪ್ಪ ರಸ್ತೆ, ಅರಳಿಮರ ರಸ್ತೆ, ಸುಬ್ಬಯ್ಯನ ಪಾಳ್ಯ, ಸದಾಶಿವ ದೇವಸ್ಥಾನ ಮುಖ್ಯರಸ್ತೆ, ಕನಕದಾಸ ಲೇಔಟ್ ಮತ್ತು ಸತ್ಯನಗರ, ಲಿಂಗರಾಜಪುರಂ ಮತ್ತು ಎಂ.ಎಸ್.ನಗರ ವಾರ್ಡ್ ನಲ್ಲಿ ರಸ್ತೆಗಳು, ಚರಂಡಿಗಳು ಮತ್ತು ಕಾಲುದಾರಿಗಳ ಸಮಗ್ರ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಿದರು.
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನಾ ಸಮಾರಂಭದಲ್ಲಿ ಸ್ಥಳೀಯರು, ಸ್ಥಳೀಯ ನಿವಾಸಿಗಳ ಸಂಘದ ಸದಸ್ಯರು, ಸ್ಥಳೀಯ ಮುಖಂಡರು ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.