ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾಣೆಯ ದಿನಾಂಕ ಘೋಷಣೆಯಾಗಿದ್ದು, ಚನ್ನಪಟ್ಟಣದ (Channapatna) ಮೈತ್ರಿ ಟಿಕೆಟ್ ಬಹುತೇಕ ಜೆಡಿಎಸ್ (Jds) ಪಾಲಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಚನ್ನಪಟ್ಟಣದ ಮೈತ್ರಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಸಿ.ಪಿ.ಯೋಗೇಶ್ವರ್ಗೆ (Cp Yogeshwar) ಈ ಮೂಲಕ ನಿರಾಸೆ ಎದುರಾಗಲಿದೆ ಎನ್ನಲಾಗಿದೆ. ಮೂರು ಕ್ಷೇತ್ರಗಳ ಪೈಕಿ 2 ಕ್ಷೇತ್ರ ಬಿಜೆಪಿ ಗೆ ,1 ಕ್ಷೇತ್ರ ಜೆಡಿಎಸ್ ಗೆ ಎಂಬ ಅನುಪಾತದಲ್ಲಿ ಮೈತ್ರಿ ಕ್ಷೇತ್ರ ಹಂಚಿಕೆಯ ಲೆಕ್ಕಾಚಾರ ಮಾಡಿದ್ದು, ಹೈಕಮಾಂಡ್ ಒಪ್ಪಿಗೆ ಬಳಿಕ ಅಭ್ಯರ್ಥಿ ಘೋಷಣೆ ಮಾಡಲಾಗುತ್ತೆ.
ಸಂಡೂರು (Sanduru), ಶಿಗ್ಗಾಂವಿ (Shiggavi) ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದು, ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಚಿಹ್ನೆಯಡಿಯಲ್ಲಿ ಅಭ್ಯರ್ಥಿ ಕಣಕ್ಕೆ ಇಳಿಯಲಿದ್ದಾರೆ. ಬಿಜೆಪಿ ಅಭ್ಯರ್ಥಿಯನ್ನ ರಾಜ್ಯದ ಕೋರ್ ಕಮಿಟಿ ಸದಸ್ಯರು ಫೈನಲ್ ಮಾಡಿದ್ದು, ಅದೇ ಪಟ್ಟಿಯೊಂದಿಗೆ ಹೈಕಮಾಂಡ್ ಭೇಟಿಗೆ ವಿಜಯೇಂದ್ರ (Vijayendra) ತೆರಳಲಿದ್ದಾರೆ.