• Home
  • About Us
  • ಕರ್ನಾಟಕ
Friday, June 20, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ದರ್ಶನ್​​ಗೆ ಬೇಲ್​ ಸಿಗಲಿಲ್ಲ ಯಾಕೆ..? ಮುಂದಿನ ದಾರಿ ಯಾವುದು..?

ಕೃಷ್ಣ ಮಣಿ by ಕೃಷ್ಣ ಮಣಿ
October 15, 2024
in Top Story, ಕರ್ನಾಟಕ, ದೇಶ, ರಾಜಕೀಯ, ಸಿನಿಮಾ
0
ದರ್ಶನ್​​ಗೆ ಬೇಲ್​ ಸಿಗಲಿಲ್ಲ ಯಾಕೆ..? ಮುಂದಿನ ದಾರಿ ಯಾವುದು..?
Share on WhatsAppShare on FacebookShare on Telegram

ನಟ ದರ್ಶನ್​ಗೆ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಬಂಧನಕ್ಕೆ ಒಳಗಾಗಿ 127 ದಿನಗಳು ಕಳೆದಿವೆ. ಅಂದರೆ ಬರೋಬ್ಬರಿ 4 ತಿಂಗಳು ಮುಕ್ತಾಯ ಆಗಿದೆ. ಈ ನಡುವೆ ಸೆಷನ್ಸ್​ ಕೋರ್ಟ್​ನಲ್ಲಿ ದರ್ಶನ್​​ ಹಾಗು ಪವಿತ್ರಾಗೌಡ ಜಾಮೀನು ಅರ್ಜಿ ವಜಾ ಆಗಿದೆ. ಚಾರ್ಜ್​ಶೀಟ್​​ ಸಲ್ಲಿಕೆ ಬಳಿಕ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ದರ್ಶನ್​​ ಅಂಡ್​ ಗ್ಯಾಂಗ್​​ ಮತ್ತೆ ನಿರಾಸೆಯ ಕಾರ್ಮೋಡದಲ್ಲಿ ಸಿಲುಕಿಕೊಂಡಿದೆ. ದರ್ಶನ್​​ ರಿಲೀಸ್​​ ಆಗ್ತಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೂ ದರ್ಶನ್​ ಜಾಮೀನು ಅರ್ಜಿ ವಜಾ ಆಗಿದ್ದು ಅರಗಿಸಿಕೊಳ್ಳಲಾರದ ವಿಚಾರವಾಗಿದೆ. ಆದರೆ ಮುಂದಿನ ದಾರಿ ಯಾವುದು..? ದರ್ಶನ್​ಗೆ ಜಾಮೀನು ಸಿಗುವುದೇ ಇಲ್ಲವೇ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ADVERTISEMENT

ಜಾಮೀಣು ಅರ್ಜಿ ವಜಾ ವಿಚಾರ ಮೊದಲೇ ಗೊತ್ತಿತ್ತಾ..?

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​​ ಹಾಗು ಪವಿತ್ರಾಗೌಡ ನೇರಾನೇರ ಸಂಬಂಧ ಇರುವ ಕಾರಣಕ್ಕೆ ಜಾಮೀನು ಅರ್ಜಿ ತಿರಸ್ಕಾರ ಆಗಿದೆ. ಅಂದರೆ ದರ್ಶನ್​ ಪರ ವಕೀಲರು ಹಾಗು ಆಪ್ತ ಬಳಗಕ್ಕೆ ಈ ವಿಚಾರ ಮೊದಲೇ ತಿಳಿದಿರುತ್ತದೆ. ಜೀವಾವಧಿ ಶಿಕ್ಷೆ ವಿಧಿಸಬಹುದಾದ ಆರೋಪಗಳು ಇರುವುದರಿಂದ ಸೆಷನ್ಸ್​ ಕೋರ್ಟ್​ ಜಾಮೀನು ಮಂಜೂರು ಮಾಡಿಲ್ಲ. ಅಲ್ಲದೆ ಸೆಷನ್ಸ್​ ಕೋರ್ಟ್​ಗೆ ಹೋಗದೆ ನೇರವಾಗಿ ಹೈಕೋರ್ಟ್​ನಲ್ಲಿ ಜಾಮೀನು ಕೇಳಿದರೂ ಕೋರ್ಟ್​ ಪರಿಗಣಿಸುವುದಿಲ್ಲ. ಹೀಗಾಗಿ ಸೆಷನ್ಸ್ ಕೋರ್ಟ್​ನಲ್ಲಿ ಅರ್ಜಿ ವಜಾ ಆಗುವುದೇ ಮುಖ್ಯವಾಗಿತ್ತು. ಇದೀಗ ಸೆಷನ್ಸ್​​ ಕೋರ್ಟ್​ ಆದೇಶವನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಿ, ಜಾಮೀನು ಕೋಡುವಂತೆ ಮನವಿ ಮಾಡುವುದಕ್ಕೆ ಬಾಗಿಲು ತೆರೆದುಕೊಂಡಿದೆ.

ದರ್ಶನ್​ಗೆ ಹೈಕೋರ್ಟ್​ನಲ್ಲಿ ಬೇಲ್​ ಸಿಕ್ಕೇ ಸಿಗುತ್ತಾ..?

ಹೈಕೋರ್ಟ್​ ಹಾಗು ಸುಪ್ರೀಂಕೋರ್ಟ್​ ತನ್ನದೇ ಆದ ಅಧಿಕಾರ ಇರುತ್ತದೆ. ಕೇವಲ ಕೇಸ್​​ ಬಗ್ಗೆ ಮಾತ್ರ ನೋಡದೆ ಅದರಿಂದ ಆಚೆಗೆ ಇರುವ ವಿಚಾರಗಳನ್ನೂ ಪರಿಗಣಿಸುವ ಸಾಧ್ಯತೆಗಳು ಇರುತ್ತವೆ. ಹೀಗಾಗಿ ಹೈಕೋರ್ಟ್​ನಲ್ಲಿ ಬೇಲ್​ ಸಿಗುವ ನಿರೀಕ್ಷೆಯಿದೆ. ದರ್ಶನ್​​ಗೆ ಈಗಾಗಲೇ ಬೆನ್ನು ನೋವು ಇರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗ್ತಿದ್ದು, ಆರೋಗ್ಯ ಸಮಸ್ಯೆಯನ್ನೇ ಪ್ರಮುಖ ಅಂಶವಾಗಿ ವಕೀಲರು ವಾದ ಮಾಡುವ ಸಾಧ್ಯತೆಗಳಿವೆ. ಸೆಷನ್ಸ್​ ಕೋರ್ಟ್​ಗೆ ಕೆಲವು ಇತಿಮಿತಿಗಳು ಇರುವ ಕಾರಣಕ್ಕೆ ಆರೋಗ್ಯ ಸಮಸ್ಯೆ ಸೇರಿದಂತೆ ಬೇರೆ ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಹೈಕೋರ್ಟ್​ ಹಾಗು ಸುಪ್ರೀಂಕೋರ್ಟ್​ ವ್ಯಾಪ್ತಿ ವಿಶಾಲವಾಗಿದ್ದು, ಕೇಸ್ ಹಾಗು ಅದರಿಂದಾಚೆಗಿನ ವಿಚಾರಗಳು ಚರ್ಚೆಗೆ ಬರಲಿವೆ.

ಅನಾರೋಗ್ಯ ಕಾರಣಕ್ಕಾಗಿ ಬೇಲ್​ ಸಿಗುವ ನಿರೀಕ್ಷೆ..

ದರ್ಶನ್​ ಸಾಮಾನ್ಯ ಕೇಸ್​ನಲ್ಲಿ ಬಂಧಿಯಾಗಿಲ್ಲ. ಕಿಡ್ನ್ಯಾಪ್​ ಮಾಡಿ ಕೊಲೆ ಮಾಡಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ದರ್ಶನ್​​ ಪಾಲಿಗೆ ಆರೋಗ್ಯ ಸಮಸ್ಯೆಯೇ ದೊಡ್ಡ ವರವಾಗುವ ಎಲ್ಲಾ ಸಾಧ್ಯತೆಗಳು ಇವೆ. ಕೊಲೆ ಮಾಡಿದ ಆರೋಪ ಅಷ್ಟೆ. ಆರೋಪ ಸಾಬೀತಾಗಿಲ್ಲ. ಹಾಗೆ ಅಂದ ಮಾತ್ರಕ್ಕೆ ಆರೋಪಿ ಆದವನು ಅನಾರೋಗ್ಯಕ್ಕೆ ಒಳಗಾದರೂ ಚಿಕಿತ್ಸೆ ಪಡೆಯದೆ ಸಂಕಷ್ಟ ಅನುಭವಿಸಬೇಕು ಎನ್ನುವುದು ಯಾವ ಕಾನೂನಿನಲ್ಲೂ ಇಲ್ಲ. ಜೈಲು ಆಸ್ಪತ್ರೆ ಹಾಗು ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲಿಗೆ ಚಿಕಿತ್ಸೆ ಪಡೆಯಬೇಕು. ಆದರೆ ದರ್ಶನ್​ ಓರ್ವ ಸಿನಿಮಾ ನಟ, ತನ್ನದೇ ಆದ ವೈದ್ಯರಿಂದ ಚಿಕಿತ್ಸೆ ಪಡೆಯುವುದು ತಪ್ಪೇನು ಅಲ್ಲ. ಈಗಾಗಲೇ ವಿಚಾರಣೆ ಪೂರ್ಣಗೊಂಡಿರುವ ಕಾರಣಕ್ಕೆ ಜಾಮೀನು ಕೊಟ್ಟರೆ ಚಿಕಿತ್ಸೆ ಪಡೆಯಲು ಸಹಕಾರಿ ಆಗಲಿದೆ ಎನ್ನುವ ಅಂಶದ ಆಧಾರದಲ್ಲೇ ಹೈಕೋರ್ಟ್​ ಮೊರೆ ಹೋಗುವ ಸಾಧ್ಯತೆ ಹೆಚ್ಚು. ಇದಕ್ಕೆ ಬೇಕಾದ ಸಕಲ ತಯಾರಿಗಳು ನಡೆದಿವೆ ಎನ್ನುವುದು ಸುಳ್ಳೇನು ಅಲ್ಲ. ಒಂದು ವೇಳೆ ಹೈಕೋರ್ಟ್ ಪರಿಗಣಿಸದಿದ್ದರೂ ಸುಪ್ರೀಂಕೋರ್ಟ್​ ಪರಿಗಣಿಸುತ್ತದೆ. ಹೀಗಾಗಿ ಕೆಲವೇ ತಿಂಗಳಲ್ಲಿ ದರ್ಶನ್​ಗೆ ಜಾಮೀನು ಸಿಗುವುದು ನಿಶ್ಚಿತ.

Tags: actor darshan arrestedactor darshan case updatesactor darshan video call from jailDarshanDarshan Arrestdarshan arrested in murder casedarshan baildarshan bail hearing latestdarshan bail pleadarshan bail plea adjournmentdarshan bail plea postponeddarshan bail plea updateDarshan Casedarshan case updatesdarshan in jaildarshan sent to parappana agrahara jailwill darshan get bail?
Previous Post

ಭಾರತ -ಕೆನಡಾ ರಾಜತಾಂತ್ರಿಕ ಬಿಕ್ಕಟ್ಟು ; ದ್ವಿಪಕ್ಷೀಯ ವ್ಯಾಪಾರಕ್ಕೆ ಧಕ್ಕೆ ಆಗಿಲ್ಲ

Next Post

ರಾಜಧಾನಿಯನ್ನು ಮುಂಜಾನೆ ಆವರಿಸಿದ ಹಿಂಗಾರು ಮಳೆ..!

Related Posts

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
Top Story

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

by ಪ್ರತಿಧ್ವನಿ
June 19, 2025
0

ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿಯಿರುವ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರ ಹುದ್ದೆಗೆ ಸಂಜಯ್ ಬಿ.ಭಟ್ ನಿವೃತ್ತ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ...

Read moreDetails
ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

June 19, 2025
ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ

ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ

June 19, 2025
ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

June 19, 2025
ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

June 19, 2025
Next Post
ರಾಜಧಾನಿಯನ್ನು ಮುಂಜಾನೆ ಆವರಿಸಿದ ಹಿಂಗಾರು ಮಳೆ..!

ರಾಜಧಾನಿಯನ್ನು ಮುಂಜಾನೆ ಆವರಿಸಿದ ಹಿಂಗಾರು ಮಳೆ..!

Recent News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
Top Story

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

by ಪ್ರತಿಧ್ವನಿ
June 19, 2025
ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ
Top Story

ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

by ಪ್ರತಿಧ್ವನಿ
June 19, 2025
ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ
Top Story

ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ

by ಪ್ರತಿಧ್ವನಿ
June 19, 2025
ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್
Top Story

ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
June 19, 2025
ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !
Top Story

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

by Chetan
June 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

June 19, 2025
ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

June 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada