ರೇಣಕಾಸ್ವಾಮಿ ಕೊಲೆ ಕೇಸಲ್ಲಿ (Renuka swamy murder case) ಬಳ್ಳಾರಿ ಜೈಲಿನಲ್ಲಿರುವ (Bellary jail) ನಟ ದರ್ಶನ್ ಈ ಬಾರಿ ಜೈಲಲ್ಲೇ ಕಳೆಯುವಂತಾಗಿದೆ. ಕೊಲೆ ಕೇಸ್ನಲ್ಲಿ ಎಲ್ಲಾ ವಾದ, ಪ್ರತಿವಾದ ಮುಕ್ತಾಯವಾಗಿದ್ದು, ಜಾಮೀನು ಅರ್ಜಿ ವಿಚಾರಣೆ ನಿನ್ನೆ ಅಂತ್ಯವಾಗಿದೆ.
ಈ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ 57ನೇ ಸಿಟಿ ಸಿವಿಲ್ ಕೋರ್ಟ್ ಆಕ್ಟೋಬರ್ 14ಕ್ಕೆ ಜಾಮೀನಿನ ತೀರ್ಪು ಕಾಯ್ದಿರಿಸಿದೆ. ಈ ಮಧ್ಯೆ ಮೂರು ದಿನ ಸರ್ಕಾರಿ ರಜೆ ಇದ್ದು, ಕುಟುಂಬಸ್ಥರ ಭೇಟಿಗೂ ಅವಕಾಶ ಇಲ್ಲದಂತಾಗಿದ್ದು, ದರ್ಶನ್ ಬೇಸರಗೊಂಡಿದ್ದಾರೆ.
ಇನ್ನು ಈ ಮಧ್ಯೆ ಬೇಲ್ ಅರ್ಜಿ (Bail application) ವಿಚಾರಣೆ ಏನಾಯ್ತು. ಜಾಮೀಣು ಸಿಗಬಹುದಾ, ಇಲ್ವಾ ಎಂಬ ಮಾಹಿತಿ ಸಿಗದೆ ಜೈಲಿನ ಕೋಣೆಯಲ್ಲಿ ದರ್ಶನ್ ಚಡಪಡಿಸ್ತಿದ್ದಾರಂತೆ. ಜಾಮೀನು ಅರ್ಜಿ ಮಾಹಿತಿಗಾಗಿ ಜೈಲಾಧಿಕಾರಿಗಳ ಬಳಿ ಮಾಹಿತಿ ಕೇಳಿದ್ದಾರೆ ಎನ್ನಲಾಗಿದೆ.