ನಾಡಹಬ್ಬ ದಸರಾ (Dasara) ಬಳಿಕ ಮುಖ್ಯಮಂತ್ರಿಗಳು (Cm) ಅವರ ಸ್ಥಾನಕ್ಕೆ ನೂರಕ್ಕೆ ನೂರು ರಾಜೀನಾಮೆ ನೀಡಲಿದ್ದಾರೆ ಎಂದು ಮೈಸೂರಿನಲ್ಲಿ (Mysuru) ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B y vijayendra) ರಾಜ್ಯ ರಾಜಕಾರಣದ ಭವಿಷ್ಯ ನುಡಿದಿದ್ದಾರೆ.
ಮುಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣ (MUDA scam) ಸಿದ್ದರಾಮಯ್ಯಗೆ ಸಂಕಷ್ಟ ತಂದಿಟ್ಟಿದ್ದು, ಈ ನವರಾತ್ರಿಯ ವಿಜಯದಶಮಿಯ (Vijayadashami) ನಂತರ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ.ಹೀಗಾಗಿಯೇ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ,ಸಚಿವರು ಇದೇ ಟೆನ್ಶನ್ ನಲ್ಲಿ ಓಡಾಡುತ್ತಿದ್ದಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಇದೇ ವೇಳೆ ಚನ್ನಪಟ್ಟಣದ ಉಪಚುನಾವಣೆಯ ಟಿಕೆಟ್ (Channapattana bi election ticket) ಬಗ್ಗೆ ಮಾತನಾಡಿದ ವಿಜಯೇಂದ್ರ, ಸಿಪಿ ಯೋಗೇಶ್ವರ್ (Cp Yogeshwar) ಪರವಾಗಿ ಉತ್ತಮ ಮಾತುಗಳನ್ನಾಡಿದ್ದಾರೆ. ಸಿಪಿವೈ ಗೆ ಅವರ ಕ್ಷೇತ್ರದಲ್ಲಿ ತಮ್ಮದೇ ಆದ ಶಕ್ತಿಯಿದೆ. ಆದ್ರೆ ಟಿಕೆಟ್ ಯಾರಿಗೆ ನೀಡಬೇಕು ಅಂತ ಹೈಕಮಾಂಡ್ (Highcommand) ನಿರ್ಧಾರ ಮಾಡುತ್ತದೆ. ಸಿಪಿ ಯೋಗೇಶ್ವರ್ ಟಿಕೆಟ್ ಕೇಳುವ ಎಲ್ಲಾ ಅರ್ಹತೆಯನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.