ಮೊನ್ನೆಯಷ್ಟೇ ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್ ಟಾಟಾ (Vijay tata) ತಮ್ಮ ಬಳಿ ಹಣಕ್ಕೆ ಬೇಡಿಕೆ ಆರೋಪ ವಿಚಾರವಾಗಿ, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (H D kumaraswamy) ವಿರುದ್ಧ ದೂರು ನೀಡಿದ್ದರು. ಹೀಗಾಗಿ ಎಫ್ಐಆರ್ (FIR) ದಾಖಲಾಗಿತ್ತು.
ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಸುಲಿಗೆ, ಕ್ರಿಮಿನಲ್ ಬೆದರಿಕೆ (Criminal case), ಸಮಾನ ಉದ್ದೇಶ ಹೊಂದಿರುವ ಇಬ್ಬರು ಆರೋಪಿಗಳಿಂದ ಬೆದರಿಕೆ ಅನ್ನೋ ಆರೋಪಗಳ ಅಡಿ ಎಫ್ಐಆರ್ ದಾಖಲಾಗಿದ್ದು,ಇದು ನಾನ್ ಬೆಲಬಲ್ ಸೆಕ್ಷನ್ ಆಗಿರೋದ್ರಿಂದ ಬಂಧನ ಮಾಡುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ.
ಆದ್ರೇ ಸದ್ಯ ಬಿಎನ್ಎಸ್ (BNS) ಅಡಿ ಪ್ರಕರಣ ದಾಖಲಾದ ಹಿನ್ನಲೆ,ನೇರವಾಗಿ ಬಂಧಿಸಲು ಪೊಲೀಸ್ತಿಗೆ ಸಾಧ್ಯವಿಲ್ಲ.ಮೊದಲು 7 ದಿನಗಳಲ್ಲಿ ವಿಚಾರಣೆಗೆ ನೊಟೀಸ್ ನೀಡಬೇಕು.ವಿಚಾರಣೆಗೆ ಬರದಿದ್ದಾಗ ಬಂಧನ ಮಾಡುವ ಸಾಧ್ಯತೆ ಇದೆ ಅನ್ನೋ ಮಾಹಿತಿ ಲಭ್ಯವಾಗಿದೆ.