ಸಿಎಂ ಸಿದ್ರಾಮಯ್ಯ ವಿರುದ್ಧ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ವಾಗ್ದಾಳಿ ನಡೆಸಿದ್ದು, ಸಂವಿಧಾನದ ಬಗ್ಗೆ, ಮೌಲ್ಯಗಳ ಬಗ್ಗೆ ಮಾತನಾಡುತ್ತಿದ್ದರು. ಆದ್ರೆ ಅವರೇ ಸಂವಿಧಾನಕ್ಕೆ ಅಪಮಾನ ಮಾಡುತ್ತಿದ್ದಾರೆ. ಆತ್ಮ ಸಾಕ್ಷಿ ಬಗ್ಗೆ ಮಾತನಾಡುವ ಸಿಎಂಗೆ ಆತ್ಮಸಾಕ್ಷಿ ಇದೆಯಾ ಎಂದು ಕಿಡಿಕಾರಿದ್ದಾರೆ.
ಮುಡಾದಿಂದ 2 ಸೈಟ್ ತೆಗೆದುಕೊಳ್ಳುವ ಅವಕಾಶ ಇದ್ದಾಗ ತನ್ನ ಪತ್ನಿ ಹೆಸರಲ್ಲಿ 14 ಸೈಟ್ ಪಡೆದುಕೊಂಡಿದ್ದಾರೆ. ನನ್ನ ಮೇಲೆ ಆರೋಪ ಇದ್ದಿದ್ರೆ ರಾಜೀನಾಮೆ ಕೊಡ್ತಿದ್ದೆ. ಆದ್ರೆ ಸಿದ್ದರಾಮಯ್ಯ ವಿರುದ್ಧ FIR ದಾಖಲಾದರೂ ರಾಜೀನಾಮೆ ಕೊಡ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ MLC ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದು, ಸಿಎಂ ಸಿಎಂ ನೈತಿಕತೆ ಹಾಗು ಆತ್ಮಸಾಕ್ಷಿ ಬಗ್ಗೆ ಮಾತನಾಡಿದ್ದಾರೆ. ಸಮಾಜವಾದಿಗಳಿಗೆ ಆತ್ಮಸಾಕ್ಷಿ ಇಲ್ಲ ಅಂದುಕೊಂಡಿದ್ದೆ. ಆದ್ರೆ ಸಿದ್ದರಾಮಯ್ಯಗೆ ಆತ್ಮ, ಆತ್ಮಸಾಕ್ಷಿ ಎರಡೂ ಇದೆ ಅಂತ ಗೊತ್ತಾಯ್ತು. ಆತ್ಮ, ಪರಮಾತ್ಮನಿಗೆ ಯಾರೂ ಸುಳ್ಳು ಹೇಳೋಕೆ ಆಗಲ್ಲ ಎಂದು ಕುಟುಕಿದ್ದಾರೆ.
ಸಿದ್ದರಾಮಯ್ಯ ನಿಜವಾಗಲೂ ಪರಮಾತ್ಮನಿದ್ದಾನೆ ಅಂದಿದ್ರೆ ಸುಳ್ಳು ಹೇಳುತ್ತಿರಲಿಲ್ಲ. ಆರೋಪ ಬಂದ ಕೂಡಲೇ ರಾಜೀನಾಮೆ ಕೊಡುತ್ತಿದ್ರು. ಸಮಾಜವಾದಿಗಳು ಆತ್ಮ, ಪರಮಾತ್ಮ ಎರಡನ್ನೂ ನಂಬಲ್ಲ. ತಮ್ಮನ್ನ ತಾವು ಜಡ್ಜ್ ಅಂದುಕೊಳ್ಳುವ ಮನಸ್ಥಿತಿಯಿಂದ ಹೊರಬಂದು ರಾಜೀನಾಮೆ ನೀಡಿ ಎಂದು ವ್ಯಂಗ್ಯವಾಡಿದ್ದಾರೆ.