ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case) A1 ಪವಿತ್ರ ಗೌಡ (Pavitra Gowda) ಮತ್ತು A2 ನಟ ದರ್ಶನ್ (Actor darshan) ಬೇಲ್ ಅಪ್ಲಿಕೇಶನ್ ಹಾಕಿದ್ದು, ನ್ಯಾಯಾಲಯಕ್ಕೆ ಸಲ್ಲಿಸಿರುವ ಜಾಮೀನು ಅರ್ಜಿಯ ಸಂಬಂಧ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಕೊಲೆ ಪ್ರಕರಣದ ಈ ಇಬ್ಬರು ಆರೋಪಿಗಳ ಅರ್ಜಿಗೆ ಸಂಬಂಧಿಸಿದಂತೆ ವಿಶೇಷ ಸರ್ಕಾರಿ ಅಭಿಯೋಜಕರಿಗೆ (ಎಸ್ಪಿಪಿ) 57ನೇ ಹೆಚ್ಚುವರಿ ಸಿಟಿ ಸಿವಿಲ್ & ಸೆಷನ್ಸ್ ನ್ಯಾಯಾಧೀಶ ಜೈಶಂಕರ್ ನೋಟಿಸ್ ನೀಡಿದ್ದಾರೆ.
ಈ ಆರೋಪಿಗಳ ಜಾಮೀನು ಅರ್ಜಿಯ ಬಗ್ಗೆ ಏನಾದರೂ ಆಕ್ಷೇಪಣೆಗಳಿದ್ದರೆ ಅದನ್ನು ಸಲ್ಲಿಸಲು ಎಸ್ ಪಿಪಿ ಪ್ರಸನ್ನ ಕುಮಾರ್ (SPP prasanna kumar ) ಸಮಯಾವಕಾಶ ಕೇಳಿದ್ದು, ವಿಚಾರಣೆ ಇಂದು ನಡೆಯಲಿದೆ.