ಬಾಂಗ್ಲಾದೇಶದಲ್ಲಿ ಸರ್ಕಾರ ಪತನಗೊಂಡ ಬೆನ್ನಲ್ಲೇ ಸಾಕಷ್ಟು ಹಿಂಸಾಚಾರಗಳು ನಡೆದಿದ್ದು, ಇದೀಗ ದೇಶದ ರಾಜಧಾನಿ ಢಾಕಾದಲ್ಲಿರುವ ಬೈತುಲ್ ಮುಕರ್ರಂ ರಾಷ್ಟ್ರೀಯ ಮಸೀದಿಯ ಮಾಜಿ ಖತೀಬ್ ಹಾಗೂ ಹಾಲಿ ಖತೀಬ್ ಬೆಂಬಲಿಗರ ಎರಡು ಗುಂಪು ಮಸೀದಿಯೊಳಗೆಯೆ ಕೈಕೈ ಮಿಲಾಯಿಸಿದ್ದು, ಸುಮಾರು 50 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ..
ವರದಿಯ ಪ್ರಕಾರ, ಮಸೀದಿಯ ಪ್ರಸ್ತುತ ಖತೀಬ್ (ಜುಮ್ಮಾ ಪ್ರಾರ್ಥನೆ ಪ್ರವಚನ ನೀಡುವ ವ್ಯಕ್ತಿ) ಮುಫ್ತಿ ವಲಿಯುರ್ ರೆಹಮಾನ್ ಖಾನ್ ಅವರು ಪ್ರವಚನ ನೀಡುತ್ತಿದ್ದಾಗ, ಮಾಜಿ ಖತೀಬ್, ಮುಫ್ತಿ ರುಹುಲ್ ಅಮೀನ್ ಅವರು ತಮ್ಮ ಅನುಯಾಯಿಗಳೊಂದಿಗೆ ಮಸೀದಿಗೆ ಆಗಮಿಸಿ ಮೈಕ್ ತೆಗೆದುಕೊಳ್ಳಲು ಪ್ರಯತ್ನಿಸಿದರು.
ಈ ವೇಳೆ ಸಿಡಿದೆದ್ದ ಮುಫ್ತಿ ರೆಹಮಾನ್ ಅನುಯಾಯಿಗಳು ಇದನ್ನು ಖಂಡಿಸಿದ್ದಾರೆ, ಬಳಿಕ ಮಾತಿಗೆ ಮಾತು ಬೆಳೆದು ಹಿಂಸಾಚಾರಕ್ಕೆ ತಿರುಗಿದ್ದು, ಎರಡು ಗುಂಪುಗಳ ನಡುವೆ ದೊಡ್ಡ ಘರ್ಷಣೆಗೆ ಕಾರಣವಾಗಿದೆ. ಈ ವೇಳೆ ಕೇವಲರು ಮಸೀದಿಯಿಂದ ಹೊರ ಬರಲು ಪ್ರಯತ್ನಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಸೇನೆ, ಪೊಲೀಸರು ಮತ್ತು RAB ಸಿಬ್ಬಂದಿ ಆಗಮಿಸಿ ಅನುಯಾಯಿಗಳ ಗುಂಪನ್ನು ಚದುರಿಸಿದ್ದು, ಸದ್ಯ ಬೈತುಲ್ ಮುಕರ್ರಂ ಪ್ರದೇಶದಲ್ಲಿ ನಿಯಂತ್ರಣವನ್ನು ಕಾಯ್ದುಕೊಳ್ಳಲು ಸೇನೆ ಸೇರಿದಂತೆ ಪಲ್ಟಾನ್ ಛೇದಕದಲ್ಲಿ ಜಲಫಿರಂಗಿಗಳು ಮತ್ತು ನೂರಾರು ಪೊಲೀಸ್ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ.
Bangladesh: Now fighting errupts between different sects of majority muslim community in the National Mosque Baitul Mokarram in Dhaka for supremacy pic.twitter.com/TziJ5vAVM7
— Megh Updates 🚨™ (@MeghUpdates) September 20, 2024
ವರದಿಯ ಪ್ರಕಾರ, ಶುಕ್ರವಾರದ ಪ್ರಾರ್ಥನೆಗೂ ಮುನ್ನ ಮಸೀದಿಯೊಳಗೆ ಖತೀಬ್ ಸ್ಥಾನಕ್ಕೆ ಸಂಬಂಧಿಸಿದಂತೆ ಘರ್ಷಣೆ ಏರ್ಪಟ್ಟಿತ್ತು. ಹಾಗೂ ಈ ಘಟನೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಅನುಯಾಯಿಗಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.