ಮಹಿಳೆ ಮೇಲೆ ಅತ್ಯಾಚಾರ (Rape case) ಪ್ರಕರಣದಲ್ಲಿ ನೆನ್ನೆ ಬಾಡಿ ವಾರೆಂಟ್ (Body warrant) ಮೇಲೆ ಪರಪ್ಪನ ಅಗ್ರಹಾರದಿಂದ (Parappana agrahara) ಕಗ್ಗಲಿಪುರ ಪೊಲೀಸರು ಶಾಸಕ ಮುನಿರತ್ನ (MLA muniratna) ರನ್ನ ವಶಕ್ಕೆ ಪಡೆದಿದ್ದು, ಇಂದು ಪೊಲೀಸರು ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ.
ಅತ್ಯಾಚಾರ ಪ್ರಕರಣದ A1 ಆರೋಪಿಯಾಗಿರುವುದರಿಂದ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಪೊಲೀಸ್ ಕಸ್ಟಡಿಗೆ(Police custody) ಮನವಿ ಮಾಡಲಿದ್ದಾರೆ. ಅತ್ಯಾಚಾರ ಆರೋಪ ಪ್ರಕರಣ ಹಿನ್ನಲೆ ತೀವ್ರ ವಿಚಾರಣೆ ನಡೆಸಲು ಪಿಸಿ ಕಸ್ಟಡಿಗೆ ಪೊಲೀಸರು ಮನವಿ ಮಾಡಲಿದ್ದಾರೆ. ಹೀಗಾಗಿ ನ್ಯಾಯಾಲಯ ಆರೋಪಿ ಶಾಸಕ ಮುನಿರತ್ನ ಬಹುತೇಕ ಪೊಲೀಸ್ ಕಸ್ಟಡಿಗೆ ನೀಡುವ ಸಾಧ್ಯತೆಯಿದೆ.
ಅತ್ಯಾಚಾರದ ಪ್ರಕರಣ ಆಗಿರೋದ್ರಿಂದ, ಆರೋಪಿಯನ್ನು ಕರೆದೊಯ್ದು ಮಹಜರು ಪ್ರಕ್ರಿಯೆ ನಡೆಸಬೇಕಿದೆ,ಕೃತ್ಯ ದ ಕುರಿತು ಆರೋಪಿ ಹೇಳಿಕೆ ದಾಖಲಿಸಿಕೊಳ್ಳಬೇಕಿದೆ.ಈ ಎಲ್ಲಾ ಪ್ರಕ್ರಿಯೆಗಳನ್ನು ಮಾಡಬೇಕಿರುವ ಹಿನ್ನಲೆ ಕಸ್ಟಡಿ ಅಗತ್ಯವಿದೆ.
ಹೀಗಾಗಿ ಕೋರ್ಟ್ ಮುಂದೆ ಕಸ್ಟಡಿ ಗೆ ನೀಡುವಂತೆ ಮನವಿ ಮಾಡಲು ,ಈಗಾಗಲೇ ರಿಮ್ಯಾಂಡ್ ಅರ್ಜಿ (Remand application) ಸಿದ್ದಪಡಿಸಿಕೊಂಡಿರುವ ಕಗ್ಗಲಿಪುರ ಪೊಲೀಸರು, ಕಾರಣಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ.