ಈ ವರ್ಷದ ದೀಪಾವಳಿ (Diwali festival) ಹಬ್ಬದ ಒಳಗೆ ಸಿದ್ದರಾಮಯ್ಯ (Siddaramiah) ನೇತೃತ್ವದ ಸರ್ಕಾರ ಪತನವಾಗಲಿದೆ ಅಂತ ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಸಿಟಿ ರವಿ (Ct ravi) ಹೊಸ ಬಾಂಬ್ ಸಿಡಿಸಿದ್ದಾರೆ. ಈಗಾಗಲೇ ಸರ್ಕಾರಕ್ಕೆ ಟೈಮ್ ಬಾಂಬ್ (Time bomb) ಫಿಕ್ಸ್ ಆಗಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಮುಂದಿವ ವರ್ಷದ ಸಂಕ್ರಾಂತಿ ಹಬ್ಬ (Sankranti festival) ಬಹಳ ದೂರ ಆಯ್ತು, ಈ ವರ್ಷದ ದೀಪಾವಳಿ ಒಳಗೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರಸ್ ಸರ್ಕಾರ ಢಮಾರ್ ಆಗಲಿದೆ ಎಂದು ಸಿಟಿ ರವಿ ಸ್ಪೋಟಕ ಹೇಳಿಕೆ ಕೊಟ್ಟಿದ್ದಾರೆ.
ಈಗಾಗಲೇ ಕಾಂಗ್ರೆಸ್ (Congress) ಪಕ್ಷದಲ್ಲಿ ಸಿಎಂ ಖುರ್ಚಿಗಾಗಿ ಪೈಪೋಟಿ ಶುರುವಾಗಿದೆ. ಮುಂದಿನ ದಿನಗಳಲ್ಲಿ ಹೊಸ ಸಿಎಂ ಬರ್ತಾರಾ ಅಥವಾ ಹೊಸ ಸರ್ಕಾರವೇ ಬರುತ್ತಾ ಎಂಬುದನ್ನ ಕಾಲನೇ ನಿರ್ಣಯ ಮಾಡತ್ತೆ. ಆದ್ರೆ ಸಿದ್ದರಾಮಯ್ಯ ಖುರ್ಚಿಯಿಂದ ಇಳಿಯೋದು ಮಾತ್ರ ಫಿಕ್ಸ್.ಹೀಗಾಗಿ ಕಾಂಪಿಟೇಶನ್ ಶುರುವಾಗಿದೆ ಅಂತ ಸಿಟಿ ರವಿ ಹೇಳಿದ್ದಾರೆ.