ಚಿತ್ರದುರ್ಗ (Chitradurga) ತಾಲ್ಲೂಕಿನ ದಂಡಾಧಿಕಾರಿಗಳ ವಾಹನಕ್ಕೆ ಹಾಡಹಗಲೇ ಯುವಕನೋರ್ವ ಬೆಂಕಿ ಹಚ್ಚಿ ಹುಚ್ಚಾಟ ಮೆರೆದ ಘಟನೆ ಚಳ್ಳಕೆರೆಯಲ್ಲಿ ನಡೆದಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ವಿಧಾನಸೌಧದ (vidhana soudha) ಮುಂದೆ ತನ್ನ ಬೈಕ್ಗೆ ತಾನೇ ಬೆಂಕಿ ಹಚ್ಚಿದ್ದ ಪೃಥ್ವಿರಾಜ್ ಚಳ್ಳಕೆರೆಯಲ್ಲೂ ಹುಚ್ಚಾಟ ಮೆರೆದಿದ್ದ.

ಇದೀಗ ತಹಶೀಲ್ದಾರ್ ಸರ್ಕಾರಿ ವಾಹನದ ಮೇಲೆ ಪೆಟ್ರೋಲ್ (Petrol) ಸುರಿದು ಬೆಂಕಿ ಹಚ್ಚಿದ್ದ ಪರಿಣಾಮ ಸದ್ಯ ಜೈಲು ಸೇರಿದ್ದಾನೆ. ಪೊಲೀಸರು ಪೃಥ್ವಿಯನ್ನ ಬಂಧಿಸಿ ತಾಲೂಕು ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿದ್ದಾರೆ. ಇದೇ ವೇಳೆ ಪೃಥ್ವಿರಾಜ್ನನ್ನು (Pruthvi raj) ನ್ಯಾಯಾಂಗ ಬಂಧನಕ್ಕೆ ನೀಡಿ ಮ್ಯಾಜಿಸ್ಟ್ರೇಟ್ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕ ಆಸ್ತಿ ಹಾನಿ ಹಿನ್ನೆಲೆ ಕೇಸ್ ದಾಖಲಾಗಿದ್ದು, ಚಳ್ಳಕೆರೆ ಪೊಲೀಸರು ಪೃಥ್ವಿಯನ್ನ ಚಿತ್ರದುರ್ಗ ಕಾರಾಗೃಹಕ್ಕೆ ಕಳುಹಿಸಿದ್ದಾರೆ. ತಪ್ಪು ಮಾಡಿದವರು ಪೊಲೀಸರು, ಆದ್ರೆ ಶಿಕ್ಷೆ ಮಾತ್ರ ನನಗೆ ಅಂತ ಜೈಲು ಆವರಣದಲ್ಲೂ ಪೊಲೀಸರ ವಿರುದ್ಧ ಪೃಥ್ವಿರಾಜ್ ಆಕ್ರೋಶ ಹೊರಹಾಕಿದ್ದಾನೆ.