
ಕೋವಿಡ್ ಹಗರಣಗಳ ಸಂಬಂಧ ಮೈಕೆಲ್ ಡಿ ಕುನ್ಹಾ ನೇತೃತ್ವದ ಆಯೋಗ ಮಧ್ಯಂತರ ವರದಿ ಸಲ್ಲಿಕೆ ಮಾಡಿರುವ ವಿಚಾರದ ಬಗ್ಗೆ ಸಂಸದ ಹಾಗು ಮಾಜಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ. ಶನಿವಾರ ರಾತ್ರಿ ಸರ್ಕಾರ ವರದಿ ಪಡೆದಿದೆ. ಎಲ್ಲಾ ಸೇರಿ ಗುಣಾಕಾರ ಭಾಗಾಕಾರ ಎಲ್ಲಾ ಮಾಡಿದ್ದಾರೆ. ನಾನು ಕೋವಿಡ್ ಕಾಲದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಆಗಿದ್ದೆ. ಆ ವೇಳೆ ನಾನು ಅತ:ಕರಣದಿಂದ ಕೆಲಸ ಮಾಡಿದ್ದೇನೆ. ನಾನು ಯಾವುದೇ ಕಾನೂನು ಬಾಹಿರ ಕೆಲಸ ಮಾಡಿಲ್ಲ ಎಂದಿದ್ದಾರೆ.
ಯಡಿಯೂರಪ್ಪ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿತ್ತು. ಯಾವುದೇ ತೀರ್ಮಾನ ಇದ್ದರೂ ಟಾಸ್ಕ್ ಮೂಲಕವೇ ತೆಗೆದುಕೊಳ್ತಿದ್ದೆವು. ಹಿರಿಯ ಅಧಿಕಾರಿಗಳು, ತಜ್ಞರು ಕೂಡ ಅದರಲ್ಲಿ ಇದ್ದರು. ಆಗ ವೈದ್ಯಕೀಯ ತುರ್ತು ಪರಿಸ್ಥಿತಿ ಇತ್ತು. ಈಗ ಇವರು ಇವತ್ತಿನ ದರ ಆಧರಿಸಿ ಲೆಕ್ಕ ಹಾಕಿದ್ದಾರಂತೆ. ಮಧ್ಯಂತರ ವರದಿಯನ್ನು ಸ್ವೀಕಾರ ಮಾಡಿದ್ದಾರೆ. ವರದಿ ಬಗ್ಗೆ ಸರ್ಕಾರದ ಹೇಳಿಕೆ ಹೊರ ಬರಲಿ. ಊಹಾಪೋಹಗಳಿಗೆ ನಾನು ಉತ್ತರ ಕೊಡಲ್ಲ. ಈಗ ವರದಿಯಲ್ಲಿ ಅಕ್ರಮ ಬಗ್ಗೆ ಇದೆ ಅಂತಿದ್ದಾರೆ. ವರದಿಯನ್ನು ಲೀಕ್ ಮಾಡಿದ್ದಾರಾ..? ವರದಿ ಯಾರು ಓದಿದ್ದಾರೆ..?ನಾನು ಅಧಿಕೃತ ವರದಿ ನೋಡುವವರೆಗೂ ಮಾತಾಡಲ್ಲ. ನಾನು ಇದನ್ನು ಎದುರಿಸ್ತೇನೆ ಎಂದಿದ್ದಾರೆ.

ನಾನು ಆತ್ಮವಂಚನೆ ಮಾಡಿಕೊಳ್ಳದೇ ನನ್ನ ಪ್ರಾಣ ಒತ್ತೆ ಇಟ್ಟು ಊಟ ತಿಂಡಿ ಮರೆತು ಹಗಲಿರುಳು ರೋಗಿಗಳ ಸೇವೆ ಮಾಡಿದ್ದೇನೆ. ಇವರೆಲ್ಲ ಸತ್ಯ ಹರಿಶ್ಚಂದ್ರರಾ..? ಇವರ ಸರ್ಕಾರ ದರೋಡೆಕೋರರ ಸರ್ಕಾರ. ಎಲ್ಲ ಇಲಾಖೆಗಳಲ್ಲೂ ಅಕ್ರಮ ಮಾಡ್ತಿದ್ದಾರೆ. ಕೋವಿಡ್ ಕಾಲದಲ್ಲಿ ಖರೀದಿ ಆಗಿರೋದೇ 7 ಸಾವಿರ ಕೋಟಿ ಮೌಲ್ಯದಷ್ಟು. ಅಕ್ರಮವೂ ಅಷ್ಟೇ ಪ್ರಮಾಣ ಆಗಿದೆ ಅಂದ್ರೆ ನಂಬಲು ಸಾಧ್ಯನಾ..? ಊಹಾಪೋಹಗಳಿಗೆ ಉತ್ತರ ಕೊಡೋದು ಬೇಡ. ಅವರು ರಾಜಕೀಯ ದಿವಾಳಿತನ ತೋರಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಮಧ್ಯಂತರ ವರದಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಬೇಕು ಅಂತ ಶಿಫಾರಸು ಮಾಡಿದ್ದಾರಂತೆ. ಮಾಡಲಿ, ಎದುರಿಸ್ತೇನೆ, ರಾಜಕೀಯವಾಗಿ, ಕಾನೂನಾತ್ಮಕವಾಗಿ ಎದುರಿಸ್ತೇನೆ. ಕೋವಿಡ್ ವಿಚಾರದಲ್ಲಿ ಸರ್ಕಾರದ ತನಿಖೆಯನ್ನು ಸ್ವಾಗತಿಸುತ್ತೇನೆ. ನ್ಯಾ. ಕುನ್ಹಾ ಅವರು ಅಂತಿಮ ವರದಿಯನ್ನೂ ಕೊಡಲಿ. ಇನ್ನೂ ಆರು ತಿಂಗಳು ಕಾಲಾವಕಾಶ ತಗೊಂಡಿದ್ದಾರಂತೆ. ಈ ಸವಾಲನ್ನು ನಾನು ಸ್ವೀಕಾರ ಮಾಡ್ತೇನೆ, ಎದುರಿಸ್ತೇನೆ, ಸವಾಲನ್ನು ಎಂಜಾಯ್ ಮಾಡ್ತೇನೆ. ಹೊಸ ಪರಂಪರೆ ಶುರು ಮಾಡಿದ್ದಾರೆ ಅವರು ಮಾಡಲಿ. ಇದು ದರೋಡೆಕೋರರ ಸರ್ಕಾರ. ಈ ಸರ್ಕಾರದಲ್ಲಿ ಪರ್ಸಂಟೇಜ್ ಅಲ್ಲ. ಇದೊಂದು ಪಾರ್ಟನರ್ಶಿಫ್ ಸರ್ಕಾರ, ನಿವೃತ್ತ ನ್ಯಾಯಾಧೀಶರ ಮೇಲೆ ಒತ್ತಡ ಹಾಕಿದ್ದಾರೆ. ಒತ್ತಡ ಹಾಕಿ ಮಧ್ಯಂತರ ವರದಿ ಪಡೆದಿದ್ದಾರೆ. ಜಸ್ಟಿಸ್ ಕುನ್ನಾ ಈಗಲೂ ಸರಿಯಾದ ವರದಿ ಕೊಡುತ್ತಾರೆ ಎಂದು ನಾನು ನಂಬಿದ್ದೇನೆ ಎಂದಿದ್ದಾರೆ. ಯಡಿಯೂರಪ್ಪ, ಬೊಮ್ಮಾಯಿ ನಾವು ರಾಜಕೀಯ ದ್ವೇಷ ಮಾಡಿಲ್ಲ. ನಾವು ಹಾಗೆ ಮಾಡಿದ್ದರೆ, ಕಾಂಗ್ರೆಸ್ನವರು ಅರ್ಧ ಜನ ಜೈಲಿಗೆ ಹೋಗ್ತಿದ್ರು ಎನ್ನುವ ಸರ್ಕಾರದ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೃಷ್ಣಮಣಿ





