ಮೊನ್ನೆಯಷ್ಟೇ ನಡೆದ ಕೆಪಿಎಸ್ಸಿ (KPSC EAMS) ಪರೀಕ್ಷೆ ಬಗ್ಗೆ ವಿರೋಧ ಪಕ್ಷದ ನಾಯಕ ಆರ್ ಆಶೋಕ್ (R Ashok) ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಪಿಎಸ್ಸಿ ಪ್ರಶ್ನೆಪತ್ರಿಕೆಯಲ್ಲಿ ಲೋಪದೋಷವಿದೆ ಎಂದು ಆರೋಪಿಸಿ ಪರೀಕ್ಷೆ ಬರೆದ ನಂತರ ಸಾಕಷ್ಟು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ರು.

ಇದೀಗ ಈ ಬೆನ್ನಲ್ಲೇ ಆರ್ ಅಶೋಕ್ ತಮ್ಮ ಎಕ್ಸ್ ಖಾತೆಯಲ್ಲಿ ಪ್ರಶ್ನೆಪತ್ರಿಕೆ ಲೋಪದೋಷದಿಂದ ಇಡಿ ವ್ಯವಸ್ಥೆ ನಗೆಪಾಟಲೀಡಾಗಿದೆ .ನಾಲಾಯಕ್ ಸರ್ಕಾರದ ದುರಾಡಳಿತದಲ್ಲಿ ಯಾವುದು ಸರಿಯಾಗಿ ನಡೆಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಆಗಸ್ಟ್ 28ಕ್ಕೆ ಕೆಪಿಎಸ್ಸಿ ಪರೀಕ್ಷೆ ನಡೆದಿತ್ತು. ಈ ಮೊದಲಿಂದಲೂ ಈ ಪರೀಕ್ಷೆ ಮೇಲೆ ಆಕಾಂಕ್ಷಿಗಳು ಅನುಮಾನ ವ್ಯಕ್ತಪಡಿಸ್ತಾನೆ ಇದ್ದರು.ಗೊಂದಲ, ವಿವಾದದ ನಡುವೆಯೂ ಪರೀಕ್ಷೆ ನೆರವೇರಿತ್ತು .ಆದ್ರೀಗ ಪರೀಕ್ಷೆ ಮುಗಿದ ನಂತರ ಪ್ರಶ್ನೆಪತ್ರಿಕೆ ವಿಚಾರಕ್ಕೆ ಮತ್ತೆ ಕೆಪಿಎಸ್ಸಿ ಎಕ್ಸಾಂ ಚರ್ಚೆ ಅತ್ತಿದೆ ಎಂದು ಎಕ್ಸ್ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.