ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case) ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ (Actor darshan) ರನ್ನ ಇತ್ತೀಚೆಗಷ್ಟೇ ರಚಿತಾ ರಾಂ ಭೇಟಿ ಮಾಡಿದ್ದರು. ಅದೇ ದಿನವೇ ಜೈಲಿನಲ್ಲಿ ಈ ಟೀ ಪಾರ್ಟಿ ನಡೆದಿರೋದು ತನಿಖೆತಿಂದ ಖಚಿತವಾಗಿದೆ.
ಇದೀಗ ಈ ಫೋಟೋಸ್ ಹಿಂದೆ ಬಿದ್ದಿರುವ ಅಧಿಕಾರಿಗಳು,ದರ್ಶನ್ ಹಾಗೂ ನಾಗನ ಟೀ ಪಾರ್ಟಿ ಆಗಿರೋದು 22 ನೇ ತಾರೀಕು ಸಂಜೆ ಎಂಬುದನ್ನು ಈಗಾಗಲೇ ಪತ್ತೆಹಚ್ಚಿದು,ರಚಿತಾ ರಾಮ್ (Rachitha ram) ಸಹ ಭೇಟಿ ಮಾಡಿರೋದು 22ನೇ ತಾರೀಕಿನಂದೇ ಆಗಿದೆ.

ದರ್ಶನ್ ರನ್ನ ಭೇಟಿ ಮಾಡಿ ಹೊರ ಬಂದ ರಚಿತಾ ರಾಮ್, ಬಾಸ್ ಎಲ್ಲಿದ್ದರೂ ಸಹ ಬಾಸ್ ಎಂದೆಲ್ಲಾ ಮಾತಾಡಿದ್ರು.ಅದಕ್ಕೆ ಪೂರಕವಾಗಿ ದರ್ಶನ್ ಟೀ ಪಾರ್ಟಿ ಪೋಟೋಸ್ ವೈರಲ್ ಕೂಡ ವೈರಲ್ ಆಯ್ತು.ಇನ್ನೂ ಪೋಟೋ22 ನೇ ತಾರೀಕ್ ಕ್ಲೀಕ್ ಮಾಡಿರೋದು ಕನ್ಫರ್ಮ್ ಆಗಿದೆ.
ಹೀಗಾಗಿ ಸ್ವತಃ ಬಂಧಿಖಾನೆ ಅಧಿಕಾರಿ ಮಾಲಿನಿ ಕೃಷ್ಣ ಮೂರ್ತಿಯ (Malini krishna Moorthy) ಈ ಹೇಳಿಕೆ ಕೊಟ್ಟಿದ್ದು, ಜೈಲಿನಲ್ಲಿ ದರ್ಶನ್ ರ ಬಿಂದಾಸ್ ಲೈಫ್ ನೋಡಿದ್ರಾ ರಚಿತಾ ರಾಮ್ ಎಂಬ ಸಂಶಯ ಮೂಡಿದ್ದು, ಆ ಮೂಲಕ ಮುಂದಿನ ದಿನಗಳಲ್ಲಿ ಈ ಕೇಸ್ ನಲ್ಲಿ ರಚಿತಾ ವಿಚಾರಣೆ ನಡೆಯತ್ತಾ ಎಂಬ ಸಂದೇಹ ಶುರುವಾಗಿದೆ.