ತುಂಗಭದ್ರಾ ಡ್ಯಾಂ (TB dam) ನ 19 ನೇ ಗೇಟ್ನ ಒಳ ಹರಿವು ನಿಲ್ಲಿಸಲು ಜಿಂದಾಲ್ನಿಂದ (Jindal) ಮೂರು ಸ್ಟಾಪ್ ಲಾಗ್ ಗೇಟ್ಗಳನ್ನ ಸಿದ್ದಪಡಿಸಲಾಗಿದೆ .ನೆನ್ನೆ ಮಳೆ ಅಡ್ಡಿಯಾದ ಹಿನ್ನಲೆ, ಇಂದು ಮುಂಜಾನೆ ಜಿಂದಾಲ್ನಿಂದ ಎಸ್ಕಾರ್ಟ್ ಮೂಲಕ ಗೇಟ್ಗಳನ್ನ ತರಲಾಗಿದೆ. ಡ್ಯಾಂ ತಜ್ಞ ಕನ್ನಯ್ಯ ಗೇಟ್ ಕೂರಿಸಲು ಕೊಟ್ಟ ಮೂರು ದಿನದ ಪ್ಲಾನ್ ವರ್ಕೌಟ್ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಒಟ್ಟಾರೆಯಾಗಿ ಮೂರು ಬೇರೆ ಬೇರೆ ಕಂಪನಿಗಳಿಂದ ಗೇಟ್ ಕೂರಿಸುವ ಕೆಲಸ ಮಾಡಲಾಗ್ತಿದೆ. ಡ್ಯಾ ತಜ್ಞ ಕನ್ನಯ್ಯ ಕೊಟ್ಟ ಮೂರು ದಿನ ಪ್ಲಾನ್ ಅನ್ವಯ ನಾರಾಯಣ ಸ್ಟೀಲ್ ವರ್ಕ್ (Narayana steel work), ಹಮೀದ್ ಇಂಜಿನಿಯರ್ ವರ್ಕ್ಸ್ (hameed engineering work) ಹಾಗೂ ಜಿಂದಾಲ್ ಕಂಪನಿಂದಲೂ (Jindal) ಜಂಟಿಯಾಗಿ ಗೇಟ್ ಅಳವಡಿಕೆ ಕಾರ್ಯಚರಣೆ ಮಾಡ್ತಿದೆ.
ಈ ಹಿನ್ನಲೆ ನಿನ್ನೇ ಮಧ್ಯಾಹ್ನದಿಂದ ಗೇಟ್ ಕುರಿಸುವ ಕಾರ್ಯ ಚುರುಕುಕೊಂಡಿದೆ. ಸಧ್ಯ ತಾತ್ಕಾಲಿಕ ಗೇಟ್ ಅಳವಡಿಸಿ ನೀರು ಪೋಲು ತಡಿಯಲು ಅಧಿಕಾರಿಗಳು ಮುಂದಾಗಿದ್ದು, ಮೂರು ದಿನಗಳೊಳಗೆ ಗೇಟ್ ಇನ್ಸ್ಟಾಲ್ ಯಶಸ್ವಿಯಾದ್ರೆ ಡ್ಯಾಂ ಕನಿಷ್ಠ 65 ಟಿಎಮ್ಸಿ ನೀರು ಉಳಿಸಲು ಸಾಧ್ಯವಿದೆ.