ಮಳೆಗಾಲ ಬಂತು ಅಂದ್ರೆ ಕಾಯಿಲೆಗಳು ಹೆಚ್ಚು. ಅದರಲ್ಲೂ ಕೂಡ ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ಭಯಬೀಳ್ತಾಇರೋದು ಡೆಂಗ್ಯೂ ,ಮಲೇರಿಯ ಜ್ವರ, ಚಿಕನ್ ಗುನ್ಯಾ , ಝೀಕ ವೈರಸ್ ಇವುಗಳಿಗೆ..ಈ ಸಮಸ್ಯೆ ಜನಕ್ಕೆ ಕಾಡ್ತಾ ಇದೆ. ಜ್ವರಗಳಿಂದ ಪಾರಾಗಿ ಬಂದವರ ಸಂಖ್ಯೆ ಒಂದೆಡೆಯಾದರೆ ಕೆಲವರು ಪ್ರಾಣವನ್ನ ಕೂಡ ಕಳೆದುಕೊಂಡಿದ್ದಾರೆ. ಈ ಕಾಯಿಲೆಗಳು ಬರುವುದಕ್ಕೆ ಪ್ರಮುಖ ಕಾರಣ ಸೊಳ್ಳೆಗಳು.

ಅಬ್ಬಬ್ಬಾ ಎಲ್ಲಿ ನೋಡಿದರೂ ಸೊಳ್ಳೆ ಕಾಟ ಜಾಸ್ತಿಯಾಗಿದೆ.. ಈ ಮಳೆಗಾಲ ಬಂತು ಅಂದ್ರೆ ಸೊಳ್ಳೆಗಳು ಇನ್ನೂ ಜಾಸ್ತಿ ಆಗ್ತವೆ ಅದರಲ್ಲೂ ಕೂಡ ಮನೆಯ ಅಕ್ಕ-ಪಕ್ಕ ಸ್ವಚ್ಛವಿಲ್ಲದಿದ್ದರೆ ಸೊಳ್ಳೆಗಳು ಖಂಡಿತವಾಗಿಯೂ ಇರುತ್ತವೆ.. ಮನೆಯಲ್ಲಿ ಈ ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಹೆಚ್ಚು ಜನ ಕಾಯ್ಲ್ ಬಳಸುತ್ತಾರೆ. ಆದ್ರೆ ಅತಿಯಾಗಿ ಸೊಳ್ಳೆ ಕಾಯಿಲ್ ಬಳಸುವುದರಿಂದ ಜನರ ಪ್ರಾಣಕ್ಕೆ ಅಪಾಯವಿದೆ ಯಾವ ರೀತಿ ಅನ್ನೋದನ್ನ ಮಾಹಿತಿ ಇಲ್ಲಿದೆ ನೋಡಿ.

ಮಕ್ಕಳಿಗೆ ತೊಂದರೆ
ಮನೆಯಲ್ಲಿ ಮಕ್ಕಳಿದ್ದಾಗ ಸೊಳ್ಳೆ ಬತ್ತಿಯನ್ನು ಹಚ್ಚಿ ಇಡುವುದರಿಂದ ಮಕ್ಕಳ ಆರೋಗ್ಯವನ್ನ ಹದಗಿಸುತ್ತದೆ. ಕಾರಣ ಈ ಸೊಳ್ಳೆ ಬತ್ತಿಗಳಲ್ಲಿ ಬಳಸಿದಂತಹ ಕೆಮಿಕಲ್ಸ್ಗಳು ಉಸಿರಾಡುವಾಗ ಮಕ್ಕಳ ದೇಹ ಸೇರುತ್ತದೆ.ಇದರಿಂದ ನಾನಾ ಆರೋಗ್ಯ ಸಮಸ್ಯೆಗಳು ಎದುರಾಗುತ್ತದೇ.

ಶ್ವಾಸ ಕೋಶಕ್ಕೆ ತೊಂದರೆ
ಇನ್ನು ಸೊಳ್ಳೆ ಬತ್ತಿಯನ್ನು ಹಚ್ಚಿದಾಗ ಅದರಿಂದ ಬರುವ ಹೊಗೆ ಮನೆಯ ತುಂಬಾ ಹರಡುತ್ತದೆ, ಅದರ ಮಧ್ಯವೆ ನಾವುಗಳು ಇರುತ್ತವೆ ಹಾಗೂ ಉಸಿರಾಡುತ್ತೇವೆ ಅದು ಮುಖ್ಯವಾಗಿ ಶ್ವಾಸ ಕೋಶವನ್ನ ಗಂಭೀರವಾಗಿ ಹಾನಿಗೊಳಿಸುತ್ತದೆ.ಹಾಗೂ ಮುಖ್ಯವಾಗಿ ಕಾರ್ಸಿನೋಜ್ಗಳನ್ನು ಹೊಂದಿರುತ್ತದೆ ಇವುಗಳು ಲಂಗ್ಸ್ ಅಲ್ಲಿ ಕ್ಯಾನ್ಸರ್ ಅಪಾಯವನ್ನು ಹೆಚ್ಚು ಮಾಡುತ್ತದೆ.

ಅಸ್ತಮಾ
ಹೆಚ್ಚು ಜನಕ್ಕೆ ಕಾಡ್ತಾ ಇರುವಂತ ಸಮಸ್ಯೆ ಎಂದರೆ ಅಸ್ತಮ ಅದ್ರಲ್ಲೂ ಕೂಡ ಮಳೆಗಾಲದಲ್ಲಿ ಅಸ್ತಮಾ ಜಾಸ್ತಿಯಾಗುತ್ತದೆ. ಅಸ್ತಮದಿಂದಾಗಿ ಕೆಮ್ಮು ,ಉಸಿರಾಡುವ ಸಮಸ್ಯೆ ಕೂಡ ಎದುರಾಗುತ್ತದೆ .ಮಳೆಗಾಲದಲ್ಲಿ ವಾತಾವರಣ ಬದಲಾಗುತ್ತಿದ್ದಂತೆ ಇದು ಜಾಸ್ತಿ ಆಗುತ್ತದೆ. ಇದರ ಜೊತೆಗೆ ಮನೆಯಲ್ಲಿ ಬಳಸುವ ಸೊಳ್ಳೆ ಬತ್ತಿಯಿಂದ ಉಸಿರಾಟದ ಸಮಸ್ಯೆ ಹಾಗೂ ಕೆಮ್ಮು ಜಾಸ್ತಿ ಆಗುತ್ತದೆ.

ಗಂಟಲು ಹಾಗೂ ಮೂಗು ಉರಿ
ಸಂಜೆ ಮನೆಯಲ್ಲಿ ಸೊಳ್ಳೆಗಳ ಕಾಟ ಹೆಚ್ಚಿರುತ್ತದೆ ಹಾಗಾಗಿ ಸೊಳ್ಳೆ ಬತ್ತಿಗಳನ್ನ ಬಳಸುತ್ತಾರೆ ಅಷ್ಟೇಅಲ್ಲದೆ ರಾತ್ರಿ ಮಲಗುವ ವೇಳೆ ಕೂಡ ಸೊಳ್ಳೆ ಬತ್ತಿಗಳನ್ನು ಹಚ್ಚಿ ಮಲಗುತ್ತಾರ. ಅದೇ ಹೊಗೆಯನ್ನು ನಾವು ಉಸಿರಾಡುವುದರಿಂದ ಮೂಗಿನಲ್ಲಿ ಉರಿ ಹಾಗೂ ಗಂಟಲಿನಲ್ಲಿ ಕಿರಿಕಿರಿ ಶುರುವಾಗುತ್ತದೆ. ಕೆಮ್ಮು ಹೆಚ್ಚಾಗುತ್ತದೆ ಗಂಟಲು ನೋವು ಹಾಗೂ ಗಂಟಲಲ್ಲಿ ಕೆರೆತ ಜಾಸ್ತಿ ಆಗುತ್ತದೆ.

ಇಷ್ಟು ಮಾತ್ರವಲ್ಲದೆ ಪೆಟ್ಸ್ ಇದ್ದ ಮನೆಯಲ್ಲಿ ಸೊಳ್ಳೆ ಭತ್ತಿ ಹಚ್ಚುವುದರಿಂದ ಅವುಗಳಿಗೆ ಕೂಡ ಅಪಾಯ ಕಟ್ಟಿಟ್ಟ ಬುತ್ತಿ ಹಾಗೂ ಇತರರಲ್ಲಿ ತಲೆನೋವು ಚರ್ಮದ ಸಮಸ್ಯೆಗಳು ಕೂಡ ಎದುರಾಗುತ್ತದೆ. ಹಾಗಾಗಿ ಮನೆಯಲ್ಲಿ ಸೊಳ್ಳೆಗಳ ಕಾಟವನ್ನು ಕಡಿಮೆ ಮಾಡಲು ಕಿಟಕಿ ಬಾಗಿಲುಗಳನ್ನ ಮುಚ್ಚುವುದು ಅಥವಾ ನೈಸರ್ಗಿಕ ಉಪಾಯವನ್ನು ಹುಡುಕುವುದು ಉತ್ತಮ