• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಸಿನಿಮಾ

ಅಣ್ಣನಿಲ್ಲದೆ ನಡೆಯುತ್ತಿರುವ ತರುಣ್​ – ಸೋನಲ್​ ವಿವಾಹ..

ಕೃಷ್ಣ ಮಣಿ by ಕೃಷ್ಣ ಮಣಿ
August 11, 2024
in ಸಿನಿಮಾ
0
ಅಣ್ಣನಿಲ್ಲದೆ ನಡೆಯುತ್ತಿರುವ ತರುಣ್​ – ಸೋನಲ್​ ವಿವಾಹ..
Share on WhatsAppShare on FacebookShare on Telegram

ಸ್ಯಾಂಡಲ್​ವುಡ್​ನ ಹಿಟ್​ ನಿರ್ದೇಶಕ ತರುಣ್ ಸುಧೀರ್ ಹಾಗು ರಾಬರ್ಟ್​​ ಸುಂದರಿ ಸೋನಲ್ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದ್ದು, ಬೆಳಗ್ಗೆ 10:50 ರಿಂದ 11:35ರ ತುಲಾ ಲಗ್ನದಲ್ಲಿ ಹಿಂದೂ ಸಂಪ್ರದಾಯದಂತೆ ಧಾರಾ ಮುಹೂರ್ತ ನಡೆಸಲಾಗುತ್ತಿದೆ. ಅದಕ್ಕೂ ಮೊದಲು ಮಾಂಗಲ್ಯ ಧಾರಣೆ ನಡೆಯಲಿದೆ. ಈಗಾಗಲೇ ದಿವಂಗತ ನಟ ಸುಧೀರ್​​ ಕುಟುಂಬ ಸಕಲ ಸಿದ್ದತೆ ಮಾಡಿಕೊಂಡಿದೆ.

ADVERTISEMENT

ಪೂರ್ಣಿಮ ಕನ್ವೆನ್ಷನ್ ಹಾಲ್​ನಲ್ಲಿ ಕಮಲದ ಹೂವಿನ ಆಕಾರದ ಮಂಟಪ ಸಿದ್ಧ ಮಾಡಿದ್ದು, ನಿರ್ದೇಶಕ ತರುಣ್ ಸುಧೀರ್​ ಹಾಗು ನಟಿ ಸೋನಲ್ ಮದುವೆಗೆ ಇಂದು ಹಿರಿಯ ನಟ ಶಿವಣ್ಣ, ರಾಕಿಂಗ್​ ಸ್ಟಾರ್​​ ಯಶ್, ಕಿಚ್ಚ ಸುದೀಪ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯಾತಿಗಣ್ಯರು ಆಗಮಿಸುವ ಸಾಧ್ಯತೆಯಿದೆ.

ತರುಣ್ – ಸೋನಲ್ ಮದುವೆಗೆ ಅದ್ದೂರಿ ಧಾರೆ ಮಂಟಪದ ಸೆಟ್ ಹಾಕಲಾಗಿದ್ದು, ದಕ್ಷಿಣ ಭಾರತ ಶೈಲಿಯಲ್ಲಿ ಕಲ್ಯಾಣ ಮಂಟಪಕ್ಕೆ ಅಲಂಕಾರ ಮಾಡಲಾಗಿದೆ. ಪ್ರವೇಶ ದ್ವಾರದಲ್ಲಿ ಮಹಾದ್ವಾರದ ಮಾದರಿ ಅಲಂಕಾರ ಮಾಡಿದ್ದು, ವಿಷ್ಣುವಿನ ದಶಾವತಾರಗಳ ಮಧ್ಯೆ ಕಮಲ ಮಂಟಪದ ಅಲಂಕಾರ ಕಣ್ಮನ ಸೆಳೆಯುವಂತಿದೆ. ಕಲಾಂಜನಿ ವೆಡ್ಡಿಂಗ್ಸ್​​ನ ಕಿರಣ್ ನೇತೃತ್ವದಲ್ಲಿ ಧಾರೆ ಮುಹೂರ್ತದ ಸೆಟ್ ನಿರ್ಮಾಣ ಮಾಡಲಾಗಿದೆ.

ಚಿತ್ರರಂಗದಲ್ಲಿ ಇರುವ ಕಾರಣದಿಂದ ಮದುವೆಯ ಎಲ್ಲಾ ಚಟುವಟಿಕೆಗಳು ಸಿನಿಮಾ ಕಾನ್ಸೆಪ್ಟ್​ನಲ್ಲೇ ಸಿದ್ದವಾಗಿವೆ. ನಿನ್ನೆ ರಾತ್ರಿ ತರುಣ್ – ಸೋನಲ್ ಆರತಕ್ಷತೆ ವೇದಿಕೆ ಕೂಡ ಇದಕ್ಕೆ ಹೊರತಾಗಿ ಇರಲಿಲ್ಲ. ಸೈಮಾ, ಫಿಲ್ಮ್ ಫೇರ್ ಅವಾರ್ಡ್​ನ ರೆಡ್ ಕಾರ್ಪೆಟ್ ಇವೆಂಟ್ ಕಾನ್ಸೆಪ್ಟ್​ನಲ್ಲಿ ಆರತಕ್ಷತೆ ಸೆಟ್​ ರೆಡಿ ಮಾಡಲಾಗಿತ್ತು. ರೆಡ್ ಅಂಡ್ ಬ್ಲಾಕ್ ಕಾಂಬಿನೇಶನ್​ನಲ್ಲಿ ಇಡೀ ಕಲ್ಯಾಣ ಮಂಟಪ ಸಿಂಗಾರ ಮಾಡಲಾಗಿತ್ತು. ಕಲ್ಯಾಣ ಮಂಟಪದ ಎಂಟ್ರಿಯಲ್ಲಿ ಬಂದವರನ್ನು ದಿವಂಗತ ನಟ ಸುಧೀರ್ ಫೊಟೊಗಳು ಸ್ವಾಗತಿಸುತ್ತಿದ್ದವು. ಕಣ್ಮನ ಸೆಳೆಯುತ್ತಿತ್ತು ರೆಟ್ರೋ ಶೈಲಿಯ ಪ್ರಾಪರ್ಟಿಗಳು.

ನಿರ್ದೇಶಕ ತರುಣ್​ ಸುಧೀರ್​​ ಸಹೋದರ ನಟ, ನಿರ್ದೇಶಕ ನಂದಕಿಶೋರ್​ ಮಾತನಾಡಿ, ನಮ್ಮ ಕುಟುಂಬದಲ್ಲಿ ಸಾಕಷ್ಟು ವರ್ಷಗಳ ಬಳಿಕ ಈ ರೀತಿಯ ಅದ್ಧೂರಿ ಕಾರ್ಯಕ್ರಮ ನಡೆಯುತ್ತಿದೆ. ತರುಣ್​ಗೆ ಮದುವೆ ತಡವಾದ ವಿಚಾರದ ಬಗ್ಗೆ ಅಮ್ಮ ಸಾಕಷ್ಟು ಬಾರಿ ನೊಂದುಕೊಂಡು ಮಾತನಾಡಿದ್ದರು. ಆದರೆ ಇದೀಗ ಎಲ್ಲವೂ ಒಳ್ಳೆಯದಾಗುತ್ತಿದೆ. ಸಾರ್​ (ದರ್ಶನ್​) ಇಲ್ಲದೆ ಇರುವುದು ನೋವು ತರಿಸಿದೆ. ಅವರೊಂದಿಗೆ ನಾನು ಕರಿಯಾ ಸಿನಿಮಾಗೂ ಮೊದಲಿನಿಂದಲೂ ಒಡನಾಡಿ ಆಗಿದ್ದೇನೆ. ಅವರು ನಮ್ಮ ತಾಯಿಯನ್ನು ಮದರ್​ ಇಂಡಿಯಾ ಎನ್ನುತ್ತಿದ್ದರು. ಚಿತ್ರವನ್ನು ಮೀರಿದ ಸಂಬಂಧ ನಮ್ಮದು ಎಂದಿದ್ದಾರೆ.

ತರುಣ್​ ಹಾಗು ಸೋನಲ್​ ದರ್ಶನ್​ಗಾಗಿ ಮದುವೆಯನ್ನೇ ಮುಂದೂಡಿಕೆ ಮಾಡಲು ನಿರ್ಧಾರ ಮಾಡಿದ್ದರು. ಆದರೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ಕೊಟ್ಟು ಚರ್ಚೆ ನಡೆಸಿದ ವೇಳೆ, ಯಾವುದೇ ಕಾರಣಕ್ಕೂ ಮದುವೆ ಮುಂದೂಡಬೇಡ ಎಂದು ದರ್ಶನ್​ ತಾಕೀತು ಮಾಡಿದ್ದರು. ಹಾಗಾಗಿ ಮದುವೆ ಮುಂದೂಡುವ ನಿರ್ಧಾರ ಕೈಬಿಡಲಾಗಿತ್ತು. ಇಂದು ಅದ್ಧೂರಿಯಾಗಿ ಮದುವೆ ನಡೆಯುತ್ತಿದೆ. ಹಿಂದೂ ಸಂಪ್ರದಾಯದಂತೆ ಮದುವೆ ನಡೆಯುತ್ತಿದ್ದು, ಮಂಗಳೂರಿನಲ್ಲಿ ಮತ್ತೊಮ್ಮೆ ಕ್ರೈಸ್ತ ಸಮುದಾಯದಂತೆ ಮದುವೆ ರಿಸೆಪ್ಷನ್​​ ನಡೆಸಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ.

ಕೃಷ್ಣಮಣಿ

Tags: darshan and gangDarshan ArrestDarshan CaseSonal Monteirotharunsudhir
Previous Post

ಮಹಿಳೆಯರ ಟಾಯ್ಲೆಟ್ʼನಲ್ಲಿ ಕ್ಯಾಮೆರಾ ಇಟ್ಟಿದ್ದ ಕೀಚಕ: ಹೇಗೆ ತಗಲಾಕ್ಕೊಂಡ ನೋಡಿ

Next Post

ಬೆಂಗಳೂರಿಗೆ ಬಂದಿದ್ದ ಅನುಮಾನದ ಮಾಂಸ.ವರದಿ ರಿಲೀಸ್​.

Related Posts

Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
0

ಮೈಸೂರಿನ ಬಾಬುನಾಯಕ್ ಅವರು ಮಲೈ ಮಹಾದೇಶ್ವರ (Male Madeshwara) ಎಂಟರ್ ಪ್ರೈಸಸ್ ಸಂಸ್ಥೆಯಿಂದ ನಿರ್ಮಿಸಿರುವ, ಪ್ರೊ.ಬರಗೂರು ರಾಮಚಂದ್ರಪ್ಪನವರು ನಿರ್ದೇಶಿಸಿರುವ ‘ಸ್ವಪ್ನಮಂಟಪ’ ಕನ್ನಡ ಚಿತ್ರವು ಇದೇ ಜುಲೈ ತಿಂಗಳ...

Read moreDetails
ರಾಜೀವ್‌ ಹತ್ಯೆ ಯ ʻThe Hunt ́ ಪ್ರೇಕ್ಷಕರ ಮುಂದೆ/ಮುಂದೇನು?

ರಾಜೀವ್‌ ಹತ್ಯೆ ಯ ʻThe Hunt ́ ಪ್ರೇಕ್ಷಕರ ಮುಂದೆ/ಮುಂದೇನು?

July 5, 2025
SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

July 5, 2025

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

July 5, 2025

Ranya Rao: ಅಕ್ರಮ ಚಿನ್ನ ಸಾಗಾಟಣೆಯ ನಟಿ ರನ್ಯಾ ರಾವ್ ಗೆ ಸೇರಿದ 34 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

July 5, 2025
Next Post

ಬೆಂಗಳೂರಿಗೆ ಬಂದಿದ್ದ ಅನುಮಾನದ ಮಾಂಸ.ವರದಿ ರಿಲೀಸ್​.

Recent News

Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
Top Story

Mallikarjuna Kharge: ರಾಜ್ಯದಲ್ಲಿ ಅರಣ್ಯ ಪ್ರದೇಶ ಬೆಳಸಿ ಪರಿಸರ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ.

by ಪ್ರತಿಧ್ವನಿ
July 5, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಯಾದಗಿರಿ..!

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

July 5, 2025

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada