ಸಿಎಂ ಸಿದ್ದರಾಮಯ್ಯ (Cm Siddaramaiah) ರಾಜೀನಾಮೆಗಾಗಿ ಬಿಜೆಪಿ-ಜೆಡಿಎಸ್ (Bjp-Jds) ನಾಯಕರಿಂದ ಆರಂಭವಾಗಿರುವ ಮೈಸೂರು ಚಲೋ (Mysore chalo) ಪಾದಯಾತ್ರೆ ಇಂದು 5ನೇ ದಿನಕ್ಕೆ ಕಾಲಿಟ್ಟಿದೆ. ಮುಡಾ ಅಕ್ರಮದಲ್ಲಿ (MUDA) ಸಿಎಂ ಸಿದ್ದರಾಮಯ್ಯರ ವಿರುದ್ಧ ಪಾದಯಾತ್ರೆ ಮಾಡುತ್ತಿರುವ ಮೈತ್ರಿ ನಾಯಕರು ಇಂದು ಮಂಡ್ಯದಿಂದ (Mandya) ಪಾದಯಾತ್ರೆ ಆರಂಭಿಸಿದ್ದಾರೆ.

ನಿನ್ನೆ ಸಂಜೆ ಮಂಡ್ಯ ನಗರದ ಹೊರವಲಯಕ್ಕೆ ಪಾದಯಾತ್ರೆ ಎಂಟ್ರಿಯಾಗಿತ್ತು. ಇಂದು ಬೆಳಗ್ಗೆ ಮತ್ತೆ ಪಾದಯಾತ್ರೆ ಆರಂಭಿಸಿದ್ದು, ನಗರದ ಶಶಿಕಿರಣ್ ಕನ್ವೆನ್ಸನ್ ಸೆಂಟರ್ನಿಂದ ಮಂಡ್ಯದ ತೂಬನಕೆರೆ ಕೈಗಾರಿಕಾ ಪ್ರದೇಶದವರೆಗೂ ಪಾದಯಾತ್ರೆ ಸಾಗಿದೆ.
ಇಂದಿನ ಪಾದಯಾತ್ರೆಯಲ್ಲಿ ಕೇಂದ್ರ ಸಚಿವ ಹೆಚ್ ಡಿಕೆ ಭಾಗಿಯಾಗಿದ್ದಾರೆ (HDK), ಭಾರೀ ಜೋಷ್ನಲ್ಲಿ ಕಾರ್ಯಕರ್ತರು ಮುನ್ನುಗ್ಗಿದ್ದು, ಭರ್ಜರಿಯಾಗಿ ಡ್ಯಾನ್ಸ್ ಮಾಡುತ್ತಾ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಘೋಷನೆಗಳನ್ನ ಕೂಗುತ್ತಾ ಮುಂದೆ ಸಾಗುತ್ತಿದ್ದಾರೆ.