ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಜಿ.ಟಿ ದೇವೇಗೌಡರಿಗೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ನೀಡದ್ದಕ್ಕೆ ಆಕ್ರೋಶಗೊಂಡಿದ್ದರು. ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಇದೀಗ ಎಲ್ಲಾ ಮನಸ್ಥಾಪಗಳನ್ನು ಕುಮಾರಸ್ವಾಮಿ ಬಗೆಹರಿಸಿದ್ದಾರೆ ಎನ್ನಲಾಗಿದೆ.
ಜೆಡಿಎಲ್ಪಿ ನಾಯಕ ಸ್ಥಾನ ನೀಡದ JDS ವರಿಷ್ಠರ ವಿರುದ್ದ ಅಸಮಧಾನ ಹೊಂದಿದ್ದ ಶಾಸಕ ಜಿ.ಟಿ.ದೇವೆಗೌಡ ಅಸಮಧಾನ ಶಮನಗೊಳಿಸಲಾಗಿದೆ. ಖುದ್ದು ದೂರವಾಣಿ ಮೂಲಕ ಮನವೊಲಿಸಿದ ಹೆಚ್.ಡಿ ಕುಮಾರಸ್ವಾಮಿ ಹಾಗು ನಿಖಿಲ್ ಕುಮಾರಸ್ವಾಮಿ.
ಮಂಡ್ಯ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಮೂಲಕ ಜಿ.ಟಿ ದೇವೇಗೌಡರನ್ನು ಸಂಪರ್ಕಿಸಿದ ದಳಪತಿಗಳು, ಹಿಂದುಳಿದ ವರ್ಗಕ್ಕೆ ಕೊಡಲೇಬೇಕೆಂದು ಸಿ.ಬಿ ಸುರೇಶ್ಬಾಬುಗೆ ಜೆಡಿಎಲ್ಪಿ ಸ್ಥಾನ ಕೊಟ್ಟಿದ್ದೇವೆ ಅಷ್ಟೇ. ನಾವೆಲ್ಲಾ ಒಂದು ಕುಟುಂಬದವರು. ಕೇಂದ್ರದಲ್ಲಿ ನಮ್ಮದೆ ಸರ್ಕಾರ ಇದೆ. ಪಕ್ಷದಲ್ಲಿ ನಿಮಗೆ ಆದಂತಹ ಗೌರವ ಇದೆ ಎಂದು ಸಮಾಧಾನ ಮಾಡಿದ್ದಾರೆ.
ಈ ಸಮಯದಲ್ಲಿ ನೀವು ದೂರ ಆದ್ರೆ ಹೇಗೆ..? ಎಂದು ಭಾವನಾತ್ಮಕ ಅಸ್ತ್ರ ಪ್ರಯೋಗ ಮಾಡಿದ್ದಾರೆ. ದಯಮಾಡಿ ಕೋರ್ಕಮಿಟಿ ಮೀಟಿಂಗ್ ಕರೆಯಿರಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈಗ ಅಸಮಾಧಾನ ತಣಿದಿದ್ದುಇಂದು ಜೆಡಿಎಸ್ ಕೋರ್ಕಮಿಟಿ ಸಭೆ ಕರೆದಿದ್ದಾರೆ ಜಿಟಿ ದೇವೇಗೌಡ.
ಇಂದು ಮಧ್ಯಾಹ್ನ 3 ಗಂಟೆಗೆ ಕೋರ್ಕಮಿಟಿ ಸಭೆ ನಡೆಯಲಿದ್ದು, ಮೈಸೂರು ಪಾದಯಾತ್ರೆ ಸಂಬಂಧ ಸಭೆ ನಡೆಯಲಿದೆ. ಹೋರಾಟದ ರೂಪುರೇಷೆ ಕೋರ್ಕಮಿಟಿಯಲ್ಲಿ ಚರ್ಚೆ ನಡೆಸಲಿದ್ದಾರೆ.