
ಸ್ನೇಹಿತರ ಜೊತೆ ಆಗಮಿಸಿರುವ ನಟ ವಿನೋದ್ ರಾಜ್, ಹಣ್ಣುಗಳನ್ನು ತಂದಿರುವ ನಟ, ದರ್ಶನ್ ಭೇಟಿಗೆ ಜೈಲಿನ ಚೆಕ್ ಪೋಸ್ಟ್ ಮೂಲಕ ಹೊರಟ ವಿನೋದ್ ಮತ್ತು ಸ್ನೇಹಿತರು.
ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಜೈಲಿನ ಬಳಿ ವಿನೋದ್ ರಾಜ್ ಹೇಳಿಕೆ ಎರಡು ಒಳ್ಳೆ ಮಾತು ಹೇಳಬೇಕು ಅನಿಸಿತು ಹಾಗಾಗಿ ಬಂದಿದ್ದೇನೆ ನಮ್ಮ ತಾಯಿ ಜೊತೆ ದರ್ಶನ್ ತಂದೆ ತೂಗುದೀಪ್ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ ನಮ್ಮ ತಾಯಿ ಆರೋಗ್ಯ ಸರಿ ಇಲ್ಲದಾಗ ಬಂದು ನನ್ನ ತಾಯಿಯನ್ನು ದರ್ಶನ್ ಮಾತನಾಡಿಸಿದ್ದರು. ನಮ್ಮ ಕಲಾವಿದನ ಮಗ ದರ್ಶನ್ ನ ಬಿಟ್ಟು ಕೊಡಬೇಡ ಕಂದ ಎಂದು ತಾಯಿ ಹೇಳಿದ್ರು ಕಷ್ಟ ಸುಖ ಎಲ್ಲಾ ಸೇರಿ ಬಂದಿರುತ್ತದೆ ಕೆಲವು ಸಮಯ ಕೆಟ್ಟಗಳಿಗೆ ನಮಗೆ ಆಶ್ಚರ್ಯ ಆಗಿದೆ. ಒಂದು ಕಡೆ ಪ್ರಾಣ ಕಳೆದುಕೊಂಡ ಕುಟುಂಬದವರ ನೋವು ಇನ್ನೊಂದೆಡೆ ಅಭಿಮಾನಿಗಳ ಜೊತೆ ನಿರ್ಮಾಪಕರ ಜೊತೆ ಸಂತೋಷವಾಗಿದ್ದರು ಹೇಗಿದ್ದವರು ಯಾವ ರೀತಿ ಬದಲಾವಣೆ ಆಗಿದೆ ಈ ರೀತಿ ಆಗಬಾರದಿತ್ತು.

ಕಳೆದ ಬಾರಿ ನನಗೆ ಸರ್ಜರಿಗೆ ಮುನ್ನ 5 ನೇ ತಾರೀಕು ಮೀಟ್ ಮಾಡಿದ್ವಿ ದರ್ಶನ್ ತೋಟದ ಮನೆಗೆ ಹೋಗಿ ಕೆಲ ಗಿಡಗಳನ್ನು ಹಾಕಿ ಬರೋಣ ಅಂತ ಅನ್ಕೊಂಡಿದ್ದೆ, ಅಷ್ಟರಲ್ಲಿ ನಾನು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದೆ ನಾನು ಅಡ್ಮಿಟ್ ಆಗಿದ್ದೆ ಹಾಗಾಗಿ ಮೀಟ್ ಮಾಡೋಕೆ ಆಗಿರಲಿಲ್ಲ. ಎರಡನೆ ಬಾರಿ ಜೈಲಿಗೆ ಹೋಗಿರೋದು ಈಗ ಮತ್ತೆ ಯಾಕಾಯಿತು ಎಂದು ನಮಗೆ ಜೀರ್ಣಿಸಿಕೊಳ್ಳೋಕೆ ಆಗ್ತಿಲ್ಲ ಎಂದು ಪರಪ್ಪನ ಅಗ್ರಹಾರ ಜೈಲು ಬಳಿ ಹಿರಿಯ ನಟ ವಿನೋದ್ ರಾಜ್ ಹೇಳಿದರು.