ತಿರುಪತಿ Thirupathi ತಿಮ್ಮಪ್ಪನ ದರ್ಶನಕ್ಕೆ ಹೋಗಿದ್ದ ಮಹಿಳೆ ಮೇಲೆ ಮರದಿಂದ ಒಣಗಿದ ಕೊಂಬೆ ಬಿದ್ದು ಕುಸಿದು ಬಿದ್ದಿದ್ದಾರೆ. ನೇರವಾಗಿ ತಲೆಯ ಮೇಲಯೇ ಒಣ ಕೊಂಬೆ ಬಿದ್ದಿದ್ದು ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಮರದ ಕೊಂಬೆ ಬಿದ್ದ ಮಹಿಳೆಯನ್ನು 54 ವರ್ಷದ ಉಮಾರಾಣಿ UmaRani ಎಂದು ಗುರುತಿಸಲಾಗಿದೆ. ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು TTD ಪದ್ಮಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲು ಮಾಡಲಾಗಿದೆ. ತಿಮ್ಮಪ್ಪನ Thimmappa ದರ್ಶನಕ್ಕೆ ಹೋದವರಿಗೆ ಸಂಕಷ್ಟ ಎದುರಾಗಿದೆ. ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಜಿಗಣಿ ಸಮೀಪದ ಹಾರಗದ್ದೆ ನಿವಾಸಿ ಆಗಿರುವ ಉಮಾರಾಣಿ ಇದೇ ತಿಂಗಳ 10ರಂದು ತಿರುಪತಿಗೆ ತೆರಳಿದ್ದರು.
ಜುಲೈ 10ರ ಸಂಜೆ ಘಟನೆ ನಡೆದಿದೆ. ತಿರುಪತಿ ತಿಮ್ಮಪ್ಪನ ದರ್ಶನ ಮುಗಿಸಿ ಆಂಜನೇಯ ಸ್ವಾಮಿ ದರ್ಶನಕ್ಕೆ ತೆರುಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.ಮರದ ಕೊಂಬೆ ಬಿದ್ದ ರಭಸಕ್ಕೆ ಮಹಿಳೆ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಜೊತೆಯಲ್ಲೇ ಇದ್ದ ಸಂಬಂಧಿಕರು ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವ ಕೆಲಸ ಮಾಡಿದ್ದಾರೆ. ಅದೃಷ್ಟವಷಾತ್ ಯಾವುದೇ ಜೀವ ಹಾನಿ ಆಗಿಲ್ಲ. ICUನಲ್ಲಿ ಚಿಕಿತ್ಸೆ ಕೊಡಲಾಗ್ತಿದೆ.