ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy murder case) ಆರೋಪಿಯಾಗಿ ಪರಪ್ಪನ ಅಗ್ರಹಾರದಲ್ಲಿರೋ ನಟ ದರ್ಶನ್ (Actor darshan) ಸಂಪೂರ್ಣ ಮೌನಕ್ಕೆ ಜಾರಿದ್ದಾರೆ. ಸದ್ಯ ಜೈಲಿನಲ್ಲಿ ದಿನ ದೂಡುತ್ತಿರುವ ದರ್ಶನ್, ಚಿಂತೆಗೆ ಒಳಗಾಗಿದ್ದು ಯಾರೊಂದಿಗೂ ಬೆರೆಯುತ್ತಿಲ್ಲ, ಹೆಚ್ಚೇನು ಮಾತನಾಡುತ್ತಿಲ್ಲ ಎಂಬ ಮಾಗಿತಿ ಲಭ್ಯವಾಗಿದೆ.
ಇತ್ತ ಹೊರಗೆ ದರ್ಶನ್ ಅಭಿಮಾನಿಗಳು ಕೈದಿ ನಂಬರ್ 6106 ಅಂತ ತಮ್ಮ ವಾಹನಗಳ ಮೇಲೆ ಸ್ಟಿಕ್ಕರ್ ಹಾಕಿಸುತ್ತಿದ್ದಾರೆ. ಸದ್ಯ ಹೀಗೆ ಸ್ಟಿಕ್ಕರ್ ಹಾಕಿಸುವ ಅಭಿಮಾನಿಗಳಿಗೆ ಕಾನೂನಿನ ಸಂಕಷ್ಟ ಎದುರಾಗಿದೆ. ನಂಬರ್ ಪ್ಲೇಟ್ (number plate) ಮರೆಮಾಚಿ ಸ್ಟಿಕ್ಕರ್ ಅಂಟಿಸಿದ್ರೆ, ಡಿಫೆಕ್ಟಿವ್ ನಂಬರ್ ಪ್ಲೇಟ್ (Defective number plate) ಅಡಿ ಕೇಸ್ ದಾಖಲಿಸಲು ನಿರ್ಧಾರಿಸಲಾಗಿದೆ.
ಈ ಪ್ರಕರಣ ಬೆಳಕಿಗೆ ಬಂದ ಮೊದಲಿನಲ್ಲಿ ಒಂದಷ್ಟು ದರ್ಶನ್ ಅಭಿಮಾನಿಗಳು, ತಮ್ಮ ವಾಹನದ ಮೇಲೆ ಅಂಟಿಸಿದ್ದ ಡಿ ಬಾಸ್ (D boss) ಎಂಬ ಸ್ಟಿಕ್ಕರ್ಗಳನ್ನ ತೆಗೆದು ಹಾಕುವ ವೀಡಿಯೋ ವೈರಲ್ (Video viral) ಆಗಿತ್ತು. ಇದೀಗ ಮತ್ತಷ್ಟು ಅಭಿಮಾನಿಗಳು ಖೈದಿ ನಂಬರ್ ಹಾಕಿಸುವ ವೀಡಿಯೋಗಳು ಹೆಚ್ಚಾಗಿ ಹರಿದಾಡುತ್ತಿದ್ದು, ಪೋಲಿಸರು ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ.