![](https://pratidhvani.com/wp-content/uploads/2024/06/WhatsApp-Image-2024-06-29-at-18.40.30-1-838x1024.jpeg)
ನಾವು ಭಾರತ ಮಾತೆಯನ್ನು ಪೂಜಿಸುವ ಸಂಪ್ರದಾಯ ಇರುವ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಯಲ್ಲಿ ಮಹಿಳಾ ಪೀಡಕರು ಹೆಚ್ಚಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಬಟ್ಟೆ ಅಂಗಡಿಗೆ ನುಗ್ಗಿದ ಬಿಜೆಪಿ ಕಾರ್ಯಕರ್ತ ನವೀನ್ ಎಂಬಾತ, ವಿವಾಹಿತ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆ ಮಾಡೋ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
![](https://pratidhvani.com/wp-content/uploads/2024/06/WhatsApp-Image-2024-06-29-at-18.40.29-1.jpeg)
ಹಲ್ಲೆಗೊಳಗಾದ ಮಹಿಳೆ ನವೀನ್ಗೆ ₹7 ಲಕ್ಷ ರೂಪಾಯಿ ಸಾಲ ಕೊಟ್ಟಿದ್ರು ಎನ್ನಲಾಗಿದ್ದು, ಹಣ ವಾಪಸ್ ಕೊಡುವಂತೆ ಕೇಳಿದ್ದಕ್ಕೆ ರೊಚ್ಚಿಗೆದ್ದ ನವೀನ್ ಅಂಗಡಿಗೆ ಬಂದು ಮಹಿಳೆಗೆ ಅವಾಚ್ಯವಾಗಿ ಬೈದು, ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
![](https://pratidhvani.com/wp-content/uploads/2024/06/Untitled.png)
ಬಿಜೆಪಿ ಕಾರ್ಯಕರ್ತ ನವೀನ್ ಕನ್ಯಾಡಿ ಹಲ್ಲೆ ಮಾಡಿದ್ದು, ದೂರು ದಾಖಲಾಗಿದೆ. ಆದರೆ ನವೀನ್ ಕನ್ಯಾಡಿ ಸಾಕಷ್ಟು ಬಿಜೆಪಿ ನಾಯಕರಿಗೆ ಹತ್ತಿರದ ವ್ಯಕ್ತಿಯಾಗಿದ್ದು, ನ್ಯಾಯ ಸಿಗುತ್ತಾ ಅನ್ನೋ ಅನುಮಾನ ಕಾಡ್ತಿದೆ.
![](https://pratidhvani.com/wp-content/uploads/2024/06/WhatsApp-Image-2024-06-29-at-18.40.29-2-1024x574.jpeg)
ಸಾಲ ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಬಿಜೆಪಿ ಕಾರ್ಯಕರ್ತ ಅಟ್ಟಹಾಸ ತೋರಿಸಿರುವ ಪ್ರಕರಣದಲ್ಲಿ ಕಾನೂನು ತನ್ನ ಕೆಲಸ ಮಾಡಬೇಕಿದೆ. ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕಿದೆ. ಬಿಜೆಪಿ ನಾಯಕರ ಒತ್ತಡ ಮೆಟ್ಟಿ ನಿಲ್ಲುವ ಕೆಲಸ ಪೊಲೀಸ್ ಇಲಾಖೆಯಿಂದ ಆಗಬೇಕಿದೆ.
![](https://pratidhvani.com/wp-content/uploads/2024/06/WhatsApp-Image-2024-06-29-at-18.40.29-927x1024.jpeg)