ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renuka swamy murder case) ಮತ್ತೊಮ್ಮೆ ಮೂರನೇ ಬಾರಿಗೆ ಆರೋಪಿ ದರ್ಶನ್ ನ (Actor darshan) ಕೋರ್ಟ್ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ. ಈ ಬೆನ್ನಲ್ಲೇ ಇಲ್ಲಿವರೆಗೆ ಎಷ್ಟು ಕೇಸ್ ಆಗಿದೆ, ಎಲ್ಲೆಲ್ಲಿ ಕೇಸ್ ಆಗಿದೆ, ಯಾವ್ಯಾವ ಸೆಕ್ಷನ್ ಅಡಿ ಕೇಸ್ ಆಗಿದೆ ಎಂಬ ಮಾಹಿತಿಯನ್ನು ಕೆದಕಿ ಕೋರ್ಟ್ ಗೆ ಸಲ್ಲಿಕೆ ಮಾಡಿದ್ದಾರೆ.
ದರ್ಶನ್ ವಿರುದ್ಧ ದಾಖಲಾಗಿರೋ ಮೂರು ಕೇಸ್ ಗಳ ಬಗ್ಗೆ ಈ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಈ ಪೈಕಿ 2011 ರಲ್ಲಿ ಪತ್ನಿ ಮೇಲೆ ಹಲ್ಲೆ ಮಾಡಿರೋ ಕೇಸ್ ಕೂಡ ಉಲ್ಲೇಖಿಸಿರೋ ಪೊಲೀಸರು, ಪತ್ನಿ ಮೇಲೆ ಹಲ್ಲೆ ಮಾಡಿ ಸಿಗರೇಟ್ ನಿಂದ ಸುಟ್ಟಿದ್ದ ಆರೋಪದ ಮೇಲೆ ವಿಜಯನಗರ ಠಾಣೆಯಲ್ಲಿ (Vijayanagr police station) ದಾಖಲಾಗಿದ್ದ ಕೇಸ್ ಡಿಟೇಲ್ಸ್ ನೀಡಿದ್ದಾರೆ.
ಇನ್ನು ಟಿ ನರಸೀಪುರದಲ್ಲಿ (T narasipura) ದಾಖಲಾಗಿದ್ದ ಕೇಸ್ ಬಗ್ಗೆ ಕೂಡ ಉಲ್ಲೇಖ ಮಾಡಲಾಗಿದ್ದು, ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಡಿ (Wild life protection act) ದಾಖಲಾಗಿದ್ದ ಕೇಸ್ ಇದಾಗಿದೆ. ನಂತರ ಆರ್ ಆರ್ ನಗರದಲ್ಲಿ (RR Nagar) ದಾಖಲಾಗಿದ್ದ ಮಹಿಳೆ ಮೇಲೆ ನಾಯಿ ಹಲ್ಲೆ ಮಾಡಿದ್ದ ಕೇಸ್ ಕೂಡ ಉಲ್ಲೇಖ ಆಗಿದೆ.
ಇನ್ನು ಅಮಿತಾ ಜಿಂದಾಲ್ ಎಂಬುವರು ನೀಡಿದ್ದ ದೂರಿನ ಕೇಸ್ ಕೂಡ ಈ ಪಟ್ಟಿಯಲ್ಲಿದ್ದು, ದರ್ಶನ್ ವಿರುದ್ಧ ಕೊಲೆ ಬೆದರಿಕೆ ಕೇಸ್ ದಾಖಲಾಗಿತ್ತು. ಒಟ್ಟು ಈ ಮೂರು ಕೇಸ್ ಗಳ ಬಗ್ಗೆ ಕೋರ್ಟ್ ಗೆ ಮಾಹಿತಿ ನೀಡಲಾಗಿದೆ.