ರೇಣುಕಾಸ್ವಾಮಿ (Renuka swamy) ಕೈಯಿಂದ ತಪ್ರೊಪ್ಪಿಗೆ ವಿಡಿಯೋ ಮಾಡಲು ಪ್ಲಾನ್ ಇತ್ತು ಎಂದು ಆರೋಪಿಗಳು ಪೊಲೀಸರ (police) ಮುಂದೆ ಬಾಯ್ದಿಟ್ಟಿದ್ದಾರೆ. ಕೊಲೆ ಮಾಡುವ ಉದ್ದೇಶ ಇರಲಿಲ್ಲ.ಆದ್ರೆ ಅಚಾತುರ್ಯ ನಡೆದುಹೋಗಿದೆ ಎಂದು ಆರೋಪಿಗಳು ಹೇಳಿದ್ದಾರೆ.
![](https://pratidhvani.com/wp-content/uploads/2024/06/1-2-1024x576.jpg)
ಮೆಸೇಜ್ ಮಾಡಿದ್ದು ಕಾಮೆಂಟ್ಸ್ ಮಾಡಿದ್ದು ಎಲ್ಲರಿಗೂ ಗೊತ್ತಾಗಿತ್ತು. ಹೀಗಾಗಿ ವಿಡಿಯೋ ಮಾಡಿಸಿ ಫೋಟೋ ಕಳಿಸಿದ್ದು ಮತ್ತು ಮೆಸೇಜ್ ಮಾಡಿ ಕಾಮೆಂಟ್ಸ್ (Comments) ಮಾಡಿದ್ದು ತಪ್ಪಾಗಿದೆ. ಇನ್ನು ಮುಂದೆ ಯಾವ ಹೆಣ್ಣಿಗೂ ಈ ರೀತಿ ಮಾಡುವುದಿಲ್ಲ ಎಂದು ಒಂದು ತಪ್ರೊಪ್ಪಿಗೆ ವಿಡಿಯೋ ಮಾಡಲು ಪ್ಲಾನ್ ಮಾಡಿದ್ವಿ.
ಆದ್ರೆ ಕರೆದುಕೊಂಡು ಬಂದ ಮೊದಲ ಹಂತದಲ್ಲೆ ಹೊಡೆದಿದ್ದು, ಆಮೇಲೆ ಮತ್ತಷ್ಟು ಹಲ್ಲೆ ಮಾಡಿದ್ವಿ. ಇದ್ರಿಂದ ಅವನು ಸತ್ತೇ ಹೋದ ಎಂದು ಆರೋಪಿಗಳು ವಿಚಾರಣೆ ವೇಳೆ ಹೇಳಿದ್ದಾರೆ.