ಸಾರ್ವತ್ರಿಕ ಲೋಕಸಭಾ ಎಲೆಕ್ಷನ್ ಮುಕ್ತಾಯವಾಗಿದೆ. ಇನ್ನೇನಿದ್ರೂ ಜೂ.4 ರ ಫಲಿತಾಂಶದ ಮೇಲೆ ಎಲ್ಲರ ದೃಷ್ಟಿನೆಟ್ಟಿದೆ. ಇದ್ರ ಮದ್ಯೆ ಇಂಡಿಯಾ ಒಕ್ಕೂಟದ ನಾಯಕರ ಸಭೆ ನಡೆದಿದೆ.ಚುನಾವಣೆ ಪೂರ್ವ ಮಹತ್ವದ ಮಾತುಕತೆ ನಡೆಸಲಾಗಿದೆ.
ದೆಹಲಿಯ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ ನಡೆದಿದ್ದು, ರಾಹುಲ್ಗಾಂಧಿ,ಸೋನಿಯಾ ಗಾಂಧಿ,ಮಲ್ಲಿಕಾರ್ಜುನ ಖರ್ಗೆ
ಪ್ರಿಯಾಂಕ ಗಾಂಧಿ,ಅಖಿಲೇಶ್ ಯಾದವ್ , ರಾಮ್ ಗೋಪಾಲ್ಯಾದವ್,ಶರದ್ ಪವಾರ್, ಜಿತೇಂದ್ರ ಅವದ್,ಅರವಿಂದ ಕೇಜ್ರೀವಾಲ್
ಭಗವಂತ್ ಮಾನ್,ಸಂಜಯ್ ಸಿಂಗ್,ರಾಘವ್ ಚಡ್ಡಾ ,ಡಿಎಂಕೆಯ ಬಾಲು,ತೇಜಸ್ವಿ ಯಾದವ್ ಸಂಜಯ್ ಯಾದವ್,ಚಂಪಾಯ್ ಸೊರೆನ್ ಫಾರೂಕ್ಅಬ್ದುಲ್ಲಾ, ಡಿ.ರಾಜಾ,ಸೀತಾರಾಂ ಯೆಚೂರಿ
ಶಿವಸೇನೆಯ ದೇಸಾಯಿ, ದಿಪಾಂಕರ್ ಭಟ್ಟಾಚಾರ್ಯ ಮುಕೇಶ್ ಸಹಾನಿ ಸೇರಿ ಹಲವರು ಭಾಗಿಯಾಗಿದ್ರು. ಚುನಾವಣಾ ಫಲಿತಾಂಶದ ಬಗ್ಗೆ ಗಂಭೀರ ಚರ್ಚೆ ನಡೆಸಲಾಯ್ತು.
ಎಲೆಕ್ಷನ್ ಮುಗಿದ ಬಳಿಕ ಬಿಡುಗಡೆಯಾಗಿರುವ ಸಮೀಕ್ಷೆಗಳ ಬಗ್ಗೆಯೂ ನಾಯಕರು ಮಾತುಕತೆ ನಡೆಸಲಾಗಿದೆ