ರಾಜ್ಯ ಸರ್ಕಾರಕ್ಕೆ(State Government) ಒಂದು ವರ್ಷದ ಸಂಭ್ರಮದಲ್ಲಿ ಚುನಾವಣಾ(Election) ನೀತಿ ಸಂಹಿತೆ ಇರುವ ಕಾರಣಕ್ಕೆ ಸಂಭ್ರಮಾಚರಣೆ ಕಾರ್ಯಕ್ರಮ ಮಾಡಲು ಆಗ್ತಿಲ್ಲ. ಈ ನಡುವೆ ಸರ್ಕಾರವನ್ನು ವಿರೋಧ ಪಕ್ಷಗಳು ತರಾಟೆಗೆ ತೆಗೆದುಕೊಳ್ಳುವ ಕೆಲಸ ಮಾಡಿದ್ದಾರೆ. ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ(JP Bhavana) ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ(HD Kumaraswamy) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಸರ್ಕಾರದ ವಿರುದ್ಧ ವಾಗ್ಬಾಣ ಹರಿಸಿದ್ದಾರೆ.
![](https://pratidhvani.com/wp-content/uploads/2024/05/hd-kumaraswamy-may-contest-ls-polls-if-modi-shah-want-him-to-says-ex-pm-deve-gowda-1024x576.webp)
ರಾಜ್ಯದಲ್ಲಿ ಆಡಳಿತ ನಡೆಸ್ತಿರುವ ಕಾಂಗ್ರೆಸ್ ಸರ್ಕಾರ ಒಂದು ವರ್ಷ ಪೂರೈಸಿರುವ ಸಂಭ್ರಮ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ರಾಜ್ಯದ ಜನತೆಯಲ್ಲಿ ದೊಡ್ಡ ಮಟ್ಟದ ಆಚರಣೆ(Celebration) ಮಾಡಲು ಆಗಲಿಲ್ಲ ಅಂತ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ ನನಗೆ ಆಶ್ಚರ್ಯ ಆಗ್ತಿದೆ. ಕಳೆದ ಒಂದು ವರ್ಷದಲ್ಲಿ ಈ ಸರ್ಕಾರ ಐಸಿಯುನಲ್ಲಿ ಇದ್ದಂತಹ ಸರ್ಕಾರ ಆಗಿದೆ. ಐದು ಗ್ಯಾರಂಟಿ ಹೊರತು ಪಡಿಸಿ ಈ ಸರ್ಕಾರದ ಸಾಧನೆ ಏನಿದೆ..? ಎಂದು ಪ್ರಶ್ನಿಸಿದ್ದಾರೆ. ಗ್ಯಾರಂಟಿ ಯೋಜನೆಗಳ(Guarantee Schemes) ಜಾಹಿರಾತು ನೀಡಿದ್ದೇ ದೊಡ್ಡ ಸಾಧನೆ ಎಂದಿರುವ ಹೆಚ್.ಡಿ ಕುಮಾರಸ್ವಾಮಿ, ಕೇಂದ್ರ ಸರ್ಕಾರದ(Central Government) ವಿರುದ್ಧ ಸಂಘರ್ಷ ಮಾಡಿದ್ದೂ ಕೂಡ ಸಾಧನೆ ಎಂದು ಕುಹಕವಾಡಿದ್ದಾರೆ.
![](https://pratidhvani.com/wp-content/uploads/2024/05/shutterstock_391127050.jpg)
ರಾಜ್ಯದಲ್ಲಿ ತೀವ್ರ ಬರ ಎದುರಾದ ಸಂದರ್ಭದಲ್ಲಿ ಸರ್ಕಾರ ಜನರ ಜೊತೆ ನಿಂತಿದ್ದು ಕಾಣಲಿಲ್ಲ. ಇವತ್ತು ಕೂಡ ಒಬ್ಬ ರೈತ ಆತ್ಮಹತ್ಯೆ(Farmer Suicide) ಮಾಡಿಕೊಂಡಿದ್ದಾರೆ. ಬರ ಪರಿಹಾರ ಹಣವನ್ನು ಬ್ಯಾಂಕ್ಗಳಲ್ಲಿ ಸಾಲಕ್ಕೆ ವಜಾ ಹಾಕಿಕೊಂಡಿದ್ದಾರೆ ಅನ್ನೋದನ್ನು ನಾನು ಟಿವಿ ವರದಿಯಲ್ಲಿ ನೋಡಿದೆ. ರೈತರಿಗೆ ಹಾಲಿನ ಪ್ರೋತ್ಸಾಹ ಧನ ನೀಡಿಲ್ಲ. ಎಷ್ಟು ಜನ ಮಂತ್ರಿಗಳು ಅಲ್ಲಿನ ಅಧಿಕಾರಿಗಳ ಜೊತೆ ಸಭೆ ಮಾಡಿ ಏನು ಸೂಚನೆ ಕೊಟ್ಟಿದ್ದಾರೆ..? ಅಧಿಕಾರಿಗಳು ನಿದ್ರಾವಸ್ಥೆಯಲ್ಲಿ ಇದ್ದಾರೆ ಎಂದು ಅಧಿಕಾರಿಗಳ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ರಾಜ್ಯಾದ ನೀರಾವರಿ ವ್ಯವಸ್ಥೆ(Irrigation System) ಏನಾಗಿದೆ..? ಬೆಂಗಳೂರಿನಲ್ಲಿ ಬ್ರ್ಯಾಂಡ್(Brand) ಬೆಂಗಳೂರು ಏನಾಗಿದೆ..? ಮಳೆ(Rain) ಬಂದಾಗ ಯಾವ ಭಾಗಕ್ಕೆ ಹೋದ್ರು ಮಳೆ ನೀರು ಮನೆಗೆ ನುಗ್ಗಿರುತ್ತದೆ ಎಂದು ಟೀಕಿಸಿದ್ದಾರೆ.
![](https://pratidhvani.com/wp-content/uploads/2024/05/congress-rep-2024-03-9c771797ff88d4e20e11da09936b41c6-16x9-1-1024x576.webp)
ಈ ಸರ್ಕಾರ ಒಂದು ವರ್ಷದ ಅತ್ಯಮೂಲ್ಯ ದಿನಗಳನ್ನು ಕಳೆದಿದೆ. ಸರ್ಕಾರದಲ್ಲಿ 36 ಸಾವಿರ ಕಡತಗಳು ವಿಲೇವಾರಿ ಆಗಿವೆ. ಈಗ ರಾಜ್ಯದಲ್ಲಿ ಬರಗಾಲದ(Drought) ಸಮಸ್ಯೆ ಎದುರಿಸ್ತಿದ್ದರು. ನಾಲ್ಕೈದು ದಿನಗಳಲ್ಲಿ ಮಳೆಯಾಗಿದ್ದು ಶುಂಠಿ, ಬಾಳೆ, ಕಾಫಿ ಬೆಳೆದವರು ಏನಾಗಿದ್ದಾರೆ..? ಇದರ ಬಗ್ಗೆ ಯಾವ ಮಂತ್ರಿಗಾದರೂ ಏನಾದರೂ ಚಿಂತನೆ ಇದ್ಯಾ..? ಎಂದು ಗುಡುಗಿದ್ದಾರೆ. ಅದೇನೋ ಲೋಕಸಭೆ ಚುನಾವಣೆಯಲ್ಲಿ(Lokasabha Election) 22 ಸೀಟು ಗೆಲ್ತಿವಿ ಅಂತ ಕನಸು ಕಾಣ್ತಾ ಕೂತಿದ್ದಾರೆ. ಇಂತ ಪರಿಸ್ಥಿತಿಯಲ್ಲಿ ಸರ್ಕಾರ(Government) ಯಾವ ರೀತಿ ಕೆಲಸ ಮಾಡಬೇಕಿತ್ತು..? ಈ ಸರ್ಕಾರ ಬಂದ ಬಳಿಕ ಕಳೆದ ಒಂದು ವರ್ಷದ ಸಂಪೂರ್ಣವಾಗಿ ಅಭಿವೃದ್ಧಿ(Development) ಸ್ಥಗಿತವಾಗಿದೆ ಎಂದು ಟೀಕಿಸಿದ್ದಾರೆ.
![](https://pratidhvani.com/wp-content/uploads/2024/05/Bribery-and-Corruption-1-scaled-1-1024x687.jpg)
ನಾಡಿನ(Country) ಏಳಿಗೆಗೆ ಪೂರಕವಾದ ಒಂದೇ ಒಂದು ಕೆಲಸ ನಡೆದಿಲ್ಲ. ಕೇವಲ ವರ್ಗಾವಣೆ(Transfer) ಧಂದೆ ಅನ್ನೋದನ್ನು ಕೇಳೋ ಆಗಿಲ್ಲ. ಎಗ್ಗಿಲ್ಲದೆ ನಡೆದಿದೆ. ಕಾರ್ಪೋರೇಷನ್(Corporation) ಗುತ್ತಿಗರದಾರರು ಏನ್ ಹೇಳಿದ್ದಾರೆ..? ಭ್ರಷ್ಟಾಚಾರದ ಬಗ್ಗೆ ಎಂದು ಕೆಣಕಿರುವ ಮಾಜಿ ಸಿಎಂ ಕುಮಾರಸ್ವಾಮಿ(Kumaraswamy), ಸಿಎಸ್ಅರ್ ಫಂಡ್ ಹೊಸ ಕೋಡ್(Code) ಇಟ್ಕೊಂಡಿರುವುದು ಕೂಡ ಒಂದು ಸರ್ಕಾರದ ದೊಡ್ಡ ಸಾಧನೆ ಎಂದು ಲೇವಡಿ ಮಾಡಿದ್ದಾರೆ. ಇವತ್ತು ನಗರ ಪ್ರದಕ್ಷಿಣೆ ಮಾಡುವ ನಿರ್ಧಾರವನ್ನು ಟೀಕಿಸಿದ ಕುಮಾರಸ್ವಾಮಿ, ಕಳೆದ ಬಾರಿನೂ ಪ್ರದಕ್ಷಿಣೆ ಮಾಡಿ ನಗರದ ಜನತೆಗೆ ಏನು ಮಾಡಿದ್ರಿ..? ಈ ಸರ್ಕಾರದ ವೈಫಲ್ಯಗಳಿಂದ(Failures) ಜನರಿಗೆ ಬೇಸರವಾಗಿದೆ ಎಂದಿದ್ದಾರೆ.