ಮಾಜಿ ಸಚಿವ ಹೆಚ್ಡಿ ರೇವಣ್ಣ (HD revanna) ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿ, ಮೂರು ದಿನ ಕಳೆದರೂ ಕೂಡ ಪತ್ನಿ ಭವಾನಿಯನ್ನ (Bhavani) ಭೇಟಿ ಮಾಡಿಲ್ಲ. ಜೈಲಿನಿಂದ ನೇರವಾಗಿ ಪದ್ಮನಾಭ ನಗರದಲ್ಲಿರುವ ಎಚ್.ಡಿ.ದೇವೇಗೌಡರ (HD devegowda) ನಿವಾಸದಲ್ಲೇ ರೇವಣ್ಣ ಉಳಿದಿದ್ದಾರೆ.
ಕಿಡ್ನಾಪ್ ಕೇಸ್ನಲ್ಲಿ (Kidnap case) ರೇವಣ್ಣ ಜೈಲಿಗೆ ಹೋಗಲು ಭವಾನಿ ಪರೋಕ್ಷ ಕಾರಣ ಎಂಬ ಚರ್ಚೆ ಈಗಾಗಲೇ ನಡೆಯುತ್ತಿದೆ. ಅಲ್ಲದೇ ಮಗ ಜೈಲಿಗೆ ಹೋಗಲು ಸೊಸೆ ಕಾರಣ ಎಂದು ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು ಅಸಮಾಧಾನಗೊಂಡಿದ್ದು, ಈಗಾಗಲೇ ಸಂತ್ರಸ್ತೆ ಕಿಡ್ನಾಪ್ ಕೇಸ್ನಲ್ಲಿ ವಿಚಾರಣೆಗೆ ಹಾಜರಾಗುವಂತೆ ಭವಾನಿಗೆ ಎಸ್ಐಟಿ (SIT) ಎರಡು ನೋಟೀಸ್ ನೀಡಿತ್ತು.
ಸಧ್ಯಕ್ಕೆ ಏಕಾಂಗಿಯಾಗಿರುವ ಭವಾನಿ ರೇವಣ್ಣ,ಸಾಲಿಗ್ರಾಮ ಬಿಟ್ಟರೆ ಹೊಳೆನರಸೀಪುರದಲ್ಲಿ ಉಳಿದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಸನದ ಪೆನ್ಡ್ರೈವ್ (Pendrive)/ಪ್ರಕರಣ ಗೌಡರ ಕುಟುಂಬದಲ್ಲೂ ಕಲಹಕ್ಕೆ ಕಾರಣವಾಗಿದೆ.