ಬೆಳಗಾವಿ(Belagavi )ಜಿಲ್ಲೆ ಅಥಣಿ ತಾಲೂಕಿನ ಪಿಕೆ ನಾಗನೂರಿನಲ್ಲಿ ಮಾಜಿ ಉಪಮುಖ್ಯಮಂತ್ರಿಗಳ ಅಥಣಿ ತಾಲೂಕಿನ ಶಾಸಕರು ಹಾಗೂ ಕಾಂಗ್ರೆಸ್ (congress) ಮುಖಂಡರು ಲಕ್ಷ್ಮಣ್ ಸವದಿ (Lakshmana savadi) ತಮ್ಮ ಹಕ್ಕನ್ನು ಚಲಾಯಿಸಿದರು .
ಇಂದು ನಾನು ಮತದಾನ ಮಾಡಿದ್ದೇನೆ , ಎಲ್ಲರೂ ಮತದಾನ ಮಾಡಿ ತಮ್ಮ ಸಂವಿಧಾನ ಬದ್ಧ ಹಕ್ಕನ್ನು ಚಲಾಯಿಸಬೇಕು ಎಂದು ಮನವಿ ಮಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ (congress) ಪಕ್ಷ ಕನಿಷ್ಠ 20 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಹೇಳಿದ್ರು .
ಸಾಲಿನಲ್ಲಿ ನಿಂತು ಭಾಗ ಸಂಖ್ಯೆ 204 ರಲ್ಲಿ ಸವದಿ ಮತ ಚಲಾವಣೆ ಚಲಾಯಿಸಿದರು. ಪ್ರಪಂಚದಲ್ಲಿ ಭಾರತ (India) ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶ. ಭಾರತದ ಚುನಾವಣಾ ವ್ಯವಸ್ಥೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಬಣ್ಣಿಸಿದರು.
ಮೊದಲ ಬಾರಿಗೆ ಮತದಾನದ ಹಕ್ಕು ಪಡೆದಿರುವ ಯುವ ಸಮೂಹ ಮತ್ತು ಯುವ ಪಡೆ ಮತದಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತಪದೇ ಮತದಾನ ಮಾಡುವಂತೆ ಯುವ ಮತದಾರರಿಗೆ ಕರೆ ನೀಡಿದರು.