ಮೈಸೂರು (mysuru) ಭಾಗದಲ್ಲಿ ಸಂಸದೆ ಸುಮಲತಾ (Sumalatha) ಪ್ರಚಾರ ವಿಚಾರಕ್ಕೆ ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ (HD kumaraswamy) ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸುಮಾಲತಾ ಅಂಬರೀಶ್ ಈಗ ಬಿಜೆಪಿ (BJP) ಪಕ್ಷ ಸೇರಿದ್ದಾರೆ. ಅವರು ಪಕ್ಷ ಹೇಳಿದ ಕಡೆಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ.
ಇನ್ನೂ ಮೂರು ದಿನಗಳ ಕಾಲ ಇದೆ. ನಮ್ಮಲ್ಲೂ ಬಂದು ಅವರು ಪ್ರಚಾರ ಮಾಡಬಹುದು. ಕೇವಲ ಹೇಳಿಕೆಗಳಿಂದಲೇ ಏನೂ ಆಗಲ್ಲ. ಹೇಳಿಕೆ ಕೊಡದೆಯೂ ಬೆಂಬಲ ಕೊಡಬಹುದು ಅಲ್ಪ ಎಂದು ಸುಮಾಲತಾ ಅಂಬರೀಶ್ ಪರ ಹೆಚ್.ಡಿ ಕುಮಾರಸ್ವಾಮಿ ಬ್ಯಾಟ್ ಬೀಸಿದ್ರು.

ಮಂಡ್ಯ (Mandya) ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ವಿಚಾರದಲ್ಲಿ ಸಂಸದೆ ಸುಮಲತಾ ನಡೆಯಿಂದ ಜೆಡಿಎಸ್ ನಾಯಕರು (IDS leaders) ಬೇಸರ ವ್ಯಕ್ತಪಡಿಸಿದ್ದಾರೆ. ಸುಮಲತಾ (sumalatha) ಬಿಜೆಪಿಗೆ (Bjp) ಸೇರ್ಪಡೆಯಾದ ಬಳಿಕ ಮೈತ್ರಿ ಅಭ್ಯರ್ಥಿ ಹೆಚ್ಡಿ ಕುಮಾರಸ್ವಾಮಿ ಪರ ಪ್ರಚಾರಕ್ಕೆ ಇಳೀತಾರೆ ಅಂತಾ ಜೆಡಿಎಸ್ ನಾಯಕರು ಭರವಸೆ ಇಟ್ಟಿದ್ದರು. ಆದ್ರೆ ಸುಮಲತಾ ಪ್ರಚಾರಕ್ಕೆ ಇಳಿದಿಲ್ಲ.
ಹೀಗಾಗಿ ಕುಮಾರಸ್ವಾಮಿ ಹಾಗೂ ಸುಮಲತಾ ನಡುವೆ ಇನ್ನೂ ವಿರೋಧ ಇದೆ ಅನ್ನೋ ಅನುಮಾನ ವ್ಯಕ್ತವಾಗಿದೆ. ಇನ್ನೂ ಸುಮಲತಾ ಪ್ರಚಾರಕ್ಕೆ ಬಾರದಿರೋ ವಿಚಾರವನ್ನ ಜೆಡಿಎಸ್ (jds) ನಾಯಕರು ರಾಜ್ಯ ಬಿಜೆಪಿ (BJP) ನಾಯಕರ ಗಮನಕ್ಕೆ ತಂದಿದ್ದಾರೆ.
ಸುಮಲತಾ ಗೈರು ಕುಮಾರಸ್ವಾಮಿಗೆ ನಷ್ಟವಾಗುತ್ತಾ ?! ಇನ್ನಾದ್ರೂ ಮಂಡ್ಯಕ್ಕೆ ಆಗಮಿಸ್ತಾರಾ ಸುಮಲತಾ ಎಂಬುದನ್ನ ಕಾದುನೋಡಬೇಕಿದೆ.