ಬೆಂಗಳೂರಿನಲ್ಲಿ ಜೋಡಿ ಮರ್ಡರ್.. ಕಾರಣ ಮಾತ್ರ ಶಾಕಿಂಗ್.. ಬೆಂಗಳೂರಿನಲ್ಲಿ ಜೋಡಿ ಕೊಲೆ ನಡೆದಿದೆ. ಬನಶಂಕರಿಯ ಸಾರಕ್ಕಿ ಮಾರ್ಕೆಟ್ ಬಳಿಯ ಪಾರ್ಕ್ನಲ್ಲಿ ಹತ್ಯೆ ನಡೆದಿದೆ. ಸುರೇಶ್, ಅನುಷಾ ಕೊಲೆಗೀಡಾದ ಯುವಕ ಮತ್ತು ಯುವತಿ. ಗೊರಗುಂಟೆಪಾಳ್ಯ ಮೂಲದ ಸುರೇಶ್ ಹಾಗು ಸಾರಕ್ಕಿಯ ಶಾಕಾಂಬರಿ ನಗರ ನಿವಾಸಿ ಅನುಷಾ ಕೊಲೆ ಆಗಿದೆ. ಸುರೇಶ್ ಮತ್ತು ಅನುಷಾ ಇಬ್ಬರು ಪರಿಚಿತರಾಗಿದ್ದು, ಅನುಷಾ ಜೊತೆ ಸಂಬಂಧ ಹೊಂದಿದ್ದ ಸುರೇಶ್. ಅನುಷಾಗೆ ಸಂಬಂಧ ಮುಂದುವರಿಸುವುದು ಇಷ್ಟ ಇರಲಿಲ್ಲ ಎನ್ನಲಾಗಿದ್ದು, ಇಂದು ಭೇಟಿಯಾಗಿ ಸಂಪರ್ಕ ಕಡಿತ ಮಾಡಿಕೊಳ್ಳುವ ತೀರ್ಮಾನ ತಿಳಿಸಿದ್ದಳು. ಆದರೆ ಅನುಷಾ ಕೈ ತಪ್ಪಿ ಹೋಗ್ತಾಳೆ ಎಂದು ಕೋಪಗೊಂಡಿದ್ದ ಸುರೇಶ್, ಚಾಕುವಿನಿಂದ ಇರಿದಿದ್ದಾನೆ. ಸುರೇಶ್ ಚಾಕು ಹಾಕುತಿದ್ದಾಗ ಬೇಡ ಬೇಡ ಎಂದು ಅನುಷಾ ತಾಯಿ ಗೀತಾ ತಡೆದಿದ್ದಾರೆ.

ಅನುಷಾ ತಾಯಿ ಅಡ್ಡ ಬಂದರೂ ನಿಲ್ಲಿಸದೆ ಚಾಕು ಇರಿದಿದ್ದ ಆರೋಪಿ ಸುರೇಶ್. ಆ ವೇಳೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿದ ಅನುಷಾ ತಾಯಿ. ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಕೊಲೆ ನಡೆದ ಬಳಿಕ ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಜಗಲಾಸ್ಗರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆ ಬಳಿಕ ಮಾತನಾಡಿ ಜೆ ಪಿ ನಗರ ಸಾರಕ್ಕಿ ಪಾರ್ಕ್ ಬಳಿ ಇಬ್ಬರ ಕೊಲೆಯಾಗಿದೆ. ಅನುಷಾ ಅವರನ್ನ ಸುರೇಶ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕೊಲೆ ತಪ್ಪಿಸೋಕೆ ಬಂದ ಅನುಷಾ ತಾಯಿ ಸುರೇಶ್ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದಾರೆ ಎಂದಿದ್ದಾರೆ. ಸುರೇಶ್ ಇವೆಂಟ್ ಮ್ಯಾನೇಜ್ಮೆಂಟ್ನಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರಿಗೂ ಐದು ವರ್ಷಗಳ ಹಿಂದೆ ಪರಿಚಯವಾಗಿತ್ತು. ಸುರೇಶ್ಗೆ ಮದುವೆ ಕೂಡ ಆಗಿತ್ತು. ಆದರೂ ಸುರೇಶ್ ಅನುಷಾಳ ಸಂಬಂಧ ಬಿಡದೆ ಇರಲು ನಿರ್ಧಾರ ಮಾಡಿದ್ದು ಕೊಲೆಯಲ್ಲಿ ಅಂತ್ಯವಾಗಿದೆ.