ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ ಹಿನ್ನೆಲೆ ಅಸಮಾಧಾನಗೊಂಡಿದ್ದಸಂಗಣ್ಣ ಕರಡಿ ಅವರು ಇದೀಗ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕರಡಿ ಸಂಗಣ್ಣ ಅವರು ತಮ್ಮ ಬೆಂಬಲಿಗರೊಂದಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಬುಧವಾರ ಕಾಂಗ್ರೆಸ್ ಸೇರಿದರು. ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಸಂಗಣ್ಣ ಕರಡಿ ಅವರಿಗೆ ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.ಸಚಿವ ಶಿವರಾಜ್ ತಂಗಡಗಿ, ಶಾಸಕ ಲಕ್ಷ್ಮಣ್ ಸವದಿ, ರಾಘವೇಂದ್ರ ಹಿಟ್ನಾಳ, ಬಸವರಾಜ ರಾಯರೆಡ್ಡಿ, ಸೇರಿ ಹಲವರು ಉಪಸ್ಥಿತರಿದ್ದರು.

ಕರಡಿ ಸಂಗಣ್ಣಗೆ ಟಿಕೆಟ್ ಮಿಸ್..
ಈ ಬಾರಿಯ ಲೋಕಸಭಾ ಎಲೆಕ್ಶನ್ ನಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ಮಿಸ್ ಆಗಿತ್ತು. ಇದ್ರಿಂದ ಬಿಜೆಪಿ ವರಿಷ್ಠರ ಮೇಲೆ ಮುನಿಸಿಕೊಂಡಿದ್ರು. ಇದೀಗ ಕಾಂಗ್ರೆಸ್ ಗೆ ಸೆಳೆಯೋದರಲ್ಲಿ ಆಪರೇಷನ್ ಸಕ್ಸಸ್ ಆಗಿದೆ.ಸುಮಾರು 14 ವರ್ಷಗಳ ಹಿಂದೆ ಆಗಿನ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಸವದಿ, ಪ್ರತಿಭಟನೆ ನಡೆಸುತ್ತಿದ್ದ ತನ್ನಲ್ಲಿಗೆ ಬಂದು ನಿಂಗೆ ಹೋರಾಟ ಬೇಕಾ? ಅಥವಾ ಅಭಿವೃದ್ಧಿಯಾ ಅಂತ ಕೇಳಿದ್ದರು. ಅಭಿವೃದ್ಧಿ ಎಂದಿದ್ದ ತನ್ನನ್ನು ಕಾಂಗ್ರೆಸ್ ನಿಂದ ಬಿಜೆಪಿಗೆ ಕರೆದುಕೊಂಡು ಹೋಗಿದ್ದರು. ಈಗ ಪುನಃ ಅವರಿಂದಾಗೇ ತಾನು ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸು ಬಂದಿರೋದು ಕಾಕತಾಳೀಯ ಎಂದು ಸಂಗಣ್ಣ ಹೇಳಿದ್ದಾರೆ. ಕೆಳಹಂತದ ರಾಜಕಾರಣದಿಂದ ಸಂಸತ್ ವರಗೆ ತಲುಪಿದ ತನಗೆ ಹೆಚ್ ಜಿ ರಾಮುಲು ಮತ್ತು ಎಸ್ ಎನ್ ಖಾದ್ರಿ ರಾಜಕೀಯ ಗುರುಗಳು ಅವರ ಮಾರ್ಗದರ್ಶನದಲ್ಲಿ ರಾಜಕೀಯ ಬದುಕು ರೂಪಿಸಕೊಂಡಿರುವೆ ಎಂದು ಕರಡಿ ಸಂಗಣ್ಣ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರ ಜೊತೆ ಕೆಲಸ ಮಾಡಿರುವ ಅನುಭವ ತನಗಿದೆ ಅಂತ ಕರಡಿ ಸಂಗಣ್ಣ ಹೇಳಿದ್ದಾರೆ.