• Home
  • About Us
  • ಕರ್ನಾಟಕ
Saturday, June 28, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ರಾಜಕೀಯ ಭ್ರಷ್ಟಾಚಾರವೂ ಬಂಡವಾಳಶಾಹಿಯೂ

Any Mind by Any Mind
March 18, 2024
in Top Story, ಅಂಕಣ
0
ರಾಜಕೀಯ ಭ್ರಷ್ಟಾಚಾರವೂ ಬಂಡವಾಳಶಾಹಿಯೂ
Share on WhatsAppShare on FacebookShare on Telegram


-ನಾ ದಿವಾಕರ

ADVERTISEMENT


ಬಂಡವಾಳಶಾಹಿ ಆರ್ಥಿಕತೆಯಲ್ಲಿ ಭ್ರಷ್ಟಾಚಾರವು ಆಳ್ವಿಕೆಯ ಪ್ರತಿಯೊಂದು ಹಂತವನ್ನೂ ಆವರಿಸಿರುತ್ತದೆ

ಸಾಮಾನ್ಯ ಪರಿಭಾಷೆಯಲ್ಲಿ ಭ್ರಷ್ಟಾಚಾರ ಎಂಬ ವಿದ್ಯಮಾನವನ್ನು ಆಳ್ವಿಕೆಯ ಕೇಂದ್ರಗಳು ಹಾಗೂ ಆಡಳಿತ ವ್ಯವಸ್ಥೆಯ ವಿವಿಧ ಸ್ತರಗಳಲ್ಲಿ ಅವಶ್ಯಕತೆಗಿಂತಲೂ ಹೆಚ್ಚಿನ ಹಣ ತೆರಬೇಕಾಗುವ ಪ್ರಕ್ರಿಯೆಯೊಂದಿಗೆ ನೋಡಲಾಗುತ್ತದೆ. ಜನಸಾಮಾನ್ಯರ ನಿತ್ಯ ಜೀವನದ ವ್ಯವಹಾರಗಳಲ್ಲಿ ಲಂಚಗುಳಿತನ ಎನ್ನಲಾಗುವ ಈ ಪ್ರಕ್ರಿಯೆಯನ್ನು ಉನ್ನತ ಮಟ್ಟದ ಆಡಳಿತದಲ್ಲಿ ಸ್ವಜನಪಕ್ಷಪಾತದ ನೆಲೆಯಲ್ಲೂ ಕಾಣಲಾಗುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಸಾಮಾನ್ಯ ಜನರು ಅವರ ವೈಯುಕ್ತಿಕ ಕೆಲಸಗಳನ್ನು ಪೂರೈಸಿಕೊಳ್ಳುವ ಸಲುವಾಗಿ ಸಂಬಂಧ ಪಟ್ಟ ಕಚೇರಿ ಗುಮಾಸ್ತರಿಗೆ/ಅಧಿಕಾರಿಗಳಿಗೆ ಕೈಬೆಚ್ಚಗೆ ಮಾಡುವುದರಿಂದ ಹಿಡಿದು, ಉನ್ನತ ಅಧಿಕಾರಿಗಳ ಗೃಹೋಪಯೋಗಿ ವಸ್ತುಗಳನ್ನು ಪೂರೈಸುವವರೆಗೂ ವ್ಯಾಪಿಸುವ ಈ ಭ್ರಷ್ಟ ಪರಂಪರೆ ಇಂದು ಸುದ್ದಿಯೇ ಆಗದಷ್ಟು ಮಟ್ಟಿಗೆ ಸಹಜ ಪ್ರಕ್ರಿಯೆ ಆಗಿಹೋಗಿದೆ.

ಹಣಕಾಸು ಭ್ರಷ್ಟಾಚಾರವನ್ನು ಆಡಳಿತ ವ್ಯವಸ್ಥೆಯ ಹಾಗೂ ಆಳ್ವಿಕೆಯ ಒಂದು ವಿದ್ಯಮಾನದ ರೂಪದಲ್ಲಿ ನೋಡಿದಾಗ, ಕೆಳಸ್ತರದಲ್ಲಿ ನಮಗೆ ಕಾಣುವ ಅಕ್ರಮ ವ್ಯವಹಾರಗಳು ನಗಣ್ಯ ಎನಿಸುವಷ್ಟು ಮಟ್ಟಿಗೆ ಭ್ರಷ್ಟಾಚಾರ ಒಂದು ಪರಂಪರೆಯಾಗಿ ನಮ್ಮ ನಡುವೆ ಬೇರು ಬಿಟ್ಟಿರುವುದು ಕಂಡುಬರುತ್ತದೆ. ಈಗ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿರುವ ಚುನಾವಣಾ ಬಾಂಡ್‌ ಎಂಬ ರಾಜಕೀಯ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ನೋಡಿದಾಗ, ಅಧಿಕಾರ ರಾಜಕಾರಣ, ರಾಜಕೀಯ ಕೇಂದ್ರಗಳ ಅತಿಯಾದ ಕೇಂದ್ರೀಕೃತ ನಿಯಂತ್ರಣ ಹಾಗೂ ಆಳ್ವಿಕೆಯ ನೆಲೆಗಳಲ್ಲಿ ನಿಯಂತ್ರಿಸಲ್ಪಡುವ ಆರ್ಥಿಕ ಚಟುವಟಿಕೆಗಳ ಸುತ್ತಲಿನ ಮಾರುಕಟ್ಟೆ ಹಿತಾಸಕ್ತಿಗಳು, ಈ ಮೂರೂ ಆಯಾಮಗಳು ನಮಗೆ ಗೋಚರಿಸುತ್ತವೆ.

ಆಳ್ವಿಕೆಯಲ್ಲಿ ಬಂಡವಾಳದ ಅಸ್ತಿತ್ವ

ಸುಪ್ರೀಂಕೋರ್ಟ್‌ ಆದೇಶದ ಫಲವಾಗಿ ಬಹಿರಂಗವಾಗಿರುವ ಚುನಾವಣಾ ಬಾಂಡ್‌ ಎಂಬ‍ ಭ್ರಷ್ಟಾಚಾರದ ಮಾದರಿ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ಉದ್ಯಮಿಗಳು ರಾಜಕೀಯ ಪಕ್ಷಗಳಿಗೆ ರಹಸ್ಯವಾಗಿ ದೇಣಿಗೆಯ ರೂಪದಲ್ಲಿ ನೀಡಿದ್ದ ಕೋಟ್ಯಂತರ ರೂಗಳು ಇಂದು ಸಾರ್ವಜನಿಕ ಲೆಕ್ಕಪರಿಶೋಧನೆಗೆ ಒಳಪಡುತ್ತಿದೆ. ಈ ದೇಣಿಗೆಗಳು ಒಂದು ರೀತಿಯಲ್ಲಿ ರಾಜಕೀಯ ದಕ್ಷಿಣೆಗಳಾಗಿದ್ದು, ಯಾವುದೋ ಒಂದು ಔದ್ಯಮಿಕ ಲಾಭಕ್ಕಾಗಿ ನೀಡಿದ ದಾಕ್ಷೀಣ್ಯದ ಉಡುಗೊರೆಯಾಗಿ ಕಾಣತೊಡಗಿವೆ. ಆದರೆ ಭಾರತದ ರಾಜಕೀಯ ಇತಿಹಾಸವನ್ನು ಬಲ್ಲವರಿಗೆ ಈ ಬಾಂಡ್‌ಗಳು ಹೆಚ್ಚಿನ ಕುತೂಹಲ ಮೂಡಿಸಬೇಕಿಲ್ಲ. ಉದ್ಯಮಿಗಳ ಮೂಲಕ ಪಡೆದ ಹಣವನ್ನೇ ತಮ್ಮ ಚುನಾವಣಾ ವೆಚ್ಚಗಳಿಗಾಗಿ ಬಳಸುವ ರಾಜಕೀಯ ಪರಂಪರೆಗೆ ಕನಿಷ್ಠ 60 ವರ್ಷಗಳ ಚರಿತ್ರೆಯಾದರೂ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ.

ಭಾರತ ಪ್ರಜಾಪ್ರಭುತ್ವವನ್ನೇ ತನ್ನ ಆಳ್ವಿಕೆಯ ತತ್ವವನ್ನಾಗಿ ಆಯ್ಕೆ ಮಾಡಿಕೊಂಡಿದ್ದರೂ, ಸಮಾಜದ ಉನ್ನತಿ, ಪ್ರಗತಿ ಹಾಗೂ ಜನತೆಯ ಮುನ್ನಡೆಗಾಗಿ ಅನುಸರಿಸುತ್ತಿರುವುದು ಬಂಡವಾಳಶಾಹಿ ಆರ್ಥಿಕತೆಯನ್ನು. ಮೊದಲ ಆರು ದಶಕಗಳಲ್ಲಿ ಪಳೆಯುಳಿಕೆಗಳಲ್ಲಿ ಉಳಿದುಕೊಂಡು ಬಂದಿದ್ದ ಸಮಾಜವಾದದ ಆಶಯಗಳನ್ನೂ ಬದಿಗೊತ್ತಿ ಭಾರತ ಕಳೆದ ಹತ್ತು ವರ್ಷಗಳಲ್ಲಿ ನವ ಉದಾರವಾದಿ ಬಂಡವಾಳಶಾಹಿ ಆರ್ಥಿಕತೆಯನ್ನು ಬಹಳ ನಿಷ್ಠೆಯಿಂದ ಅನುಸರಿಸುತ್ತಿದೆ. ಸ್ಥಳೀಯ ಹಾಗೂ ವಿದೇಶಿ ಬಂಡವಾಳದ ಹರಿವು, ಆಯಕಟ್ಟಿನ ಕ್ಷೇತ್ರಗಳಲ್ಲಿ ಈ ಬಂಡವಾಳದ ಹೂಡಿಕೆ ಮತ್ತು ಅದರಿಂದ ಗಳಿಸಬಹುದಾದ ಔದ್ಯಮಿಕ ಲಾಭ ಇವು ಇಡೀ ಅರ್ಥವ್ಯವಸ್ಥೆಯ ದಿಕ್ಕನ್ನು ನಿರ್ವಚಿಸುತ್ತದೆ. ದೇಶದ ಶೇ 65ರಷ್ಟು ಜನರು ಅವಲಂಬಿಸುವ ಕೃಷಿ ಕ್ಷೇತ್ರವನ್ನೂ ಒಳಗೊಂಡಂತೆ, ಶಿಕ್ಷಣ, ಆರೋಗ್ಯ, ಯೋಗಕ್ಷೇಮ ಇನ್ನಿತರ ಸಾಮಾಜಿಕ ವಲಯಗಳನ್ನೂ ವ್ಯಾಪಿಸುವ ಮೂಲಕ ಬಂಡವಾಳವು ಸಾಮಾಜಿಕ ಪ್ರಗತಿ ಮತ್ತು ಆರ್ಥಿಕ ಅಭಿವೃದ್ಧಿಯನ್ನು ತನ್ನದೇ ಆದ ಭೌತಿಕ ನೆಲೆಯಲ್ಲಿ ನಿರ್ವಚಿಸುತ್ತದೆ.

ಈ ನಿರ್ವಚನೆಗೆ ಪೂರಕವಾಗಿಯೇ ಚುನಾಯಿತ ಸರ್ಕಾರಗಳೂ ತಮ್ಮ ಆರ್ಥಿಕ ನೀತಿಗಳನ್ನು, ಹಣಕಾಸು ಯೋಜನೆಗಳನ್ನು ರೂಪಿಸುತ್ತವೆ. ಔದ್ಯೋಗಿಕ ಯುಗದಿಂದ ಡಿಜಿಟಲ್‌ ಯುಗದವರೆಗೂ ಬಂಡವಾಳಶಾಹಿಯ ಚಲನೆಯನ್ನು ಗಮನಿಸಿದಾಗ, ಎಲ್ಲ ಕಾಲಘಟ್ಟಗಳಲ್ಲೂ ಆಳ್ವಿಕೆಯ ಕೇಂದ್ರಗಳಲ್ಲಿ ರೂಪಿಸಲ್ಪಡುವ ನೀತಿಗಳು ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯ ವಿಸ್ತರಣೆಗೆ ಪೂರಕವಾಗಿಯೇ ನಿರ್ದೇಶಿಸಲ್ಪಡುವುದನ್ನು ಗಮನಿಸಬಹುದು. ವರ್ತಮಾನ ಭಾರತ ನಿರ್ದೇಶಕ ತತ್ವಗಳಿಗೆ ಪೂರಕವಾಗಿಯೇ ತನ್ನ ಆರ್ಥಿಕ ನೀತಿಗಳನ್ನು, ಮಾರುಕಟ್ಟೆ ಸೂತ್ರಗಳನ್ನು ರೂಪಿಸುತ್ತಿದೆ. ಗ್ರಾಮೀಣ ರಸ್ತೆಯಿಂದ ಕಡಲ ಸಾರಿಗೆಯವರೆಗೂ, ಪ್ರಾಥಮಿಕ ಶಿಕ್ಷಣದಿಂದ ಅತ್ಯುನ್ನತ ಶೈಕ್ಷಣಿಕ ವಲಯದವರೆಗೂ ವಿಸ್ತರಿಸುವ ಬಂಡವಾಳದ ಹಿಡಿತ, ಕಾರ್ಮಿಕ-ಕೃಷಿ-ಔದ್ಯೋಗಿಕ ಕಾನೂನುಗಳ ಮರುನಿರ್ವಚನೆಗೆ ಕಾರಣವಾಗುತ್ತಿರುವುದನ್ನು ಕಳೆದ ಹತ್ತು ವರ್ಷಗಳಲ್ಲಿ ಗಮನಿಸಿದ್ದೇವೆ.

ಇದಕ್ಕೆ ಪೂರಕವಾಗಿಯೇ ಆಳ್ವಿಕೆ ಮತ್ತು ಆಡಳಿತದ ನೆಲೆಗಳಲ್ಲಿ ಅಧಿಕಾರ ಕೇಂದ್ರೀಕರಣವೂ ಹೆಚ್ಚಾಗುವುದು ಸಹಜ ಪ್ರಕ್ರಿಯೆ. ಬಲಿಷ್ಠ ನಾಯಕ, ದೃಢ ನಿಶ್ಚಯದ ನೀತಿ ನಿರೂಪಣೆ/ನಿರ್ವಹಣೆ, ಸದೃಢ-ಬಹುಮತದ ಸರ್ಕಾರ ಈ ಎಲ್ಲ ರಾಜಕೀಯ ಪರಿಕಲ್ಪನೆಗಳಿಗೂ ಬಂಡವಾಳಶಾಹಿಯ ಹಿತಾಸಕ್ತಿಗಳೇ ಕಾರಣವಾಗಿರುತ್ತದೆ. ಬಂಡವಾಳವನ್ನು ಪೂರೈಸುವ ಔದ್ಯಮಿಕ ವಲಯದ ಪ್ರಗತಿ ಹಾಗೂ ಲಾಭದಾಯಕ ವಹಿವಾಟುಗಳಿಗೆ ಅನುಕೂಲವಾಗುವಂತಹ ನೀತಿ/ಯೋಜನೆಗಳನ್ನು ರೂಪಿಸುವ ಜವಾಬ್ದಾರಿ ಚುನಾಯಿತ ಸರ್ಕಾರಗಳ ಮೇಲಿರುತ್ತದೆ. ಬಂಡವಾಳಶಾಹಿ ಆರ್ಥಿಕತೆಯು ತಳಮಟ್ಟದ ಜನಸಂಖ್ಯೆಯ ನಿತ್ಯ ಜೀವನದ ಸಮಸ್ಯೆಗಳನ್ನು ಪೂರೈಸುವುದಕ್ಕಿಂತಲೂ ಹೆಚ್ಚಾಗಿ, ತಳಸಮುದಾಯಗಳಲ್ಲಿ ಅಸಮಾನತೆಯಿಂದ ಸೃಷ್ಟಿಯಾಗುವ ದುಡಿಮೆಯ ಜೀವನಗಳನ್ನು ಇನ್ನೂ ಫಲಪ್ರದವಾಗಿ-ಲಾಭದಾಯಕವಾಗಿ ಬಳಸಿಕೊಳ್ಳಲು ಹವಣಿಸುತ್ತದೆ.

ಈ ಪ್ರಕ್ರಿಯೆಯಲ್ಲೇ ದುಡಿಯುವ ಜೀವಗಳನ್ನು, ದುಡಿಮೆಯಿಲ್ಲದ ಯುವ ಸಮೂಹವನ್ನು Commodification ಪ್ರಕ್ರಿಯೆಗೆ ಒಳಪಡಿಸುವ ಒಂದು ಆಳ್ವಿಕೆಯ ಚೌಕಟ್ಟನ್ನೂ ಬಂಡವಾಳಶಾಹಿಯು ನಿರ್ಮಿಸುತ್ತದೆ. ಕಟ್ಟಡ ಕಾರ್ಮಿಕನಿಂದ ಅತ್ಯುನ್ನತ ಮಾಹಿತಿ ತಂತ್ರಜ್ಞಾನ ಸಾಫ್ಟ್‌ವೇರ್‌ ಉದ್ಯೋಗಿಯವರೆಗೂ, ಕೃಷಿಕರು-ಕೃಷಿ ಕಾರ್ಮಿಕರನ್ನೂ ಸೇರಿದಂತೆ, ಸಮಾಜದ ಇಡೀ ದುಡಿಯುವ ಜೀವಗಳನ್ನು, ನಿರುದ್ಯೋಗಿಗಳನ್ನು ಮಾರುಕಟ್ಟೆ ಸರಕುಗಳಂತೆ ಬಳಸುವ ಕಾರ್ಯಕಂತ್ರಗಳನ್ನು ರೂಪಿಸಲಾಗುತ್ತದೆ. ಈ commodification ಪ್ರಕ್ರಿಯೆಗೆ ಒಳಗಾದ ಯುವ ಸಮೂಹದ ಮುಂದೆ ಉದ್ಯೋಗ ಆಯ್ಕೆಯ ಪ್ರಶ್ನೆಯಾಗುವುದಿಲ್ಲ ಬದಲಾಗಿ ಅನಿವಾರ್ಯತೆಯ ಪ್ರಶ್ನೆಯಾಗುತ್ತದೆ. ಹಾಗಾಗಿಯೇ ಎಂ.ಟೆಕ್‌ ಪದವೀಧರರೂ ಅಗ್ನಿವೀರರಾಗಲು, ಪೌರಕಾರ್ಮಿಕರಾಗಲು, ಓಲಾ-ಊಬರ್-ಸ್ವಿಗಿ-ಜಮೋಟೋ ಮುಂತಾದ ಗಿಗ್‌ ಕಾರ್ಮಿಕರಾಗಲು ಸಿದ್ಧರಾಗುವುದನ್ನು ಕಾಣಬಹುದು. ಈ ದುಡಿಯುವ ವರ್ಗಗಳಲ್ಲಿ ಸಹಜವಾಗಿಯೇ ಇರಬಹುದಾದ ಭವಿಷ್ಯದ ಆತಂಕ, ಹತಾಶೆ, ಅಸಮಾಧಾನ ಹಾಗೂ ಆಕ್ರೋಶಗಳನ್ನು ನಿಯಂತ್ರಿಸುವುದು ಅಧಿಕಾರ ರಾಜಕಾರಣದ ಆದ್ಯತೆಯಾಗುತ್ತದೆ.

ಸುಸ್ಥಿರ ಸರ್ಕಾರ ಸುರಕ್ಷಿತ ಭ್ರಷ್ಟಾಚಾರ

ಈ ಆದ್ಯತೆಯ ಪರಿಣಾಮವೇ ಬಲಿಷ್ಠ ಆಳ್ವಿಕೆ ಅಥವಾ ಸುಸ್ಥಿರ ಸರ್ಕಾರ ಎಂಬ ಪರಿಕಲ್ಪನೆ. ಪ್ರಜಾಸತ್ತಾತ್ಮಕ ಚುನಾವಣೆಗಳ ಮೂಲಕವೇ ಆಯ್ಕೆಯಾಗುವ ಸರ್ಕಾರಗಳೂ ಸಹ ಹೆಚ್ಚು ಕೇಂದ್ರೀಕರಣವನ್ನು ಅಪೇಕ್ಷಿಸುತ್ತವೆ ಹಾಗೆಯೇ ಪ್ರಜಾಪ್ರಭುತ್ವವನ್ನು ಮೇಳೈಸುವ ರಾಜಕೀಯ ಪಕ್ಷಗಳೂ ಸಹ (ಎಡಪಕ್ಷಗಳನ್ನೂ ಸೇರಿದಂತೆ) ತಮ್ಮ ಪಕ್ಷಗಳೊಳಗೆ ಆಂತರಿಕ ಪ್ರಜಾಪ್ರಭುತ್ವವನ್ನು ಕಡೆಗಣಿಸುತ್ತಲೇ ಇರುತ್ತವೆ. ಇಂತಹ ಕೇಂದ್ರೀಕೃತಗೊಂಡ, ಅಲುಗಾಡಿಸಲಾಗದ , ಸರ್ಕಾರಗಳು ಮಾತ್ರವೇ ಬಂಡವಾಳಶಾಹಿಗೆ ಅವಶ್ಯವಾದ ಆರ್ಥಿಕ ನೀತಿಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಾಧ್ಯ. ನವ ಉದಾರವಾದ ಮತ್ತು ಹಣಕಾಸು ಬಂಡವಾಳವು ತನ್ನ 21ನೆಯ ಶತಮಾನದ ಬಂಡವಾಳಶಾಹಿ ನಡಿಗೆಯಲ್ಲಿ ಸಮ್ಮಿಶ್ರ ಸರ್ಕಾರಗಳ ಬದಲು ಏಕಪಕ್ಷದ ಆಧಿಪತ್ಯವಿರುವ, ಸ್ಪಷ್ಟ ಬಹುಮತದ ಸರ್ಕಾರವನ್ನೇ ಅಪೇಕ್ಷಿಸುವುದನ್ನು ಈ ದೃಷ್ಟಿಯಿಂದಲೇ ನೋಡಬೇಕಾಗುತ್ತದೆ. ಕಳೆದ ಎರಡು ದಶಕಗಳಲ್ಲಿ ಬಹುತೇಕ ರಾಜ್ಯಗಳಲ್ಲಿ ಒಂದು ಪಕ್ಷದ ಆಳ್ವಿಕೆ ಚುನಾಯಿತವಾಗಿರುವುದನ್ನು ಗಮನಿಸಬಹುದು. ಎರಡೆರಡು ಅವಧಿಯ ಯುಪಿಎ ಮತ್ತು ಎನ್‌ಡಿಎ ಆಳ್ವಿಕೆಯಲ್ಲಿ ಈ ಸೂಕ್ಷ್ಮತೆಗಳನ್ನು ಗುರುತಿಸಬಹುದು.

ರಾಜಕೀಯ ಭ್ರಷ್ಟಾಚಾರದ ಮೂಲ ಇಲ್ಲಿ ಅಡಗಿದೆ. ಬಂಡವಾಳಶಾಹಿಯು ಪೂರೈಸಲಾಗದ ತಳಸಮಾಜದ ಬೇಕುಬೇಡಗಳನ್ನು ಸರಿದೂಗಿಸುವ ಸಲುವಾಗಿಯೇ, ಸರ್ಕಾರಗಳು ಗ್ಯಾರಂಟಿ ಯೋಜನೆಗಳಂತಹ ಜನಪಯೋಗಿ ಆಡಳಿತ ನೀತಿಗಳಿಗೆ ಮೊರೆಹೋಗುತ್ತವೆ. ತಳಸಮಾಜದಲ್ಲಿ ಉಂಟಾಗಬಹುದಾದ ಹತಾಶೆ ಮತ್ತು ಆಕ್ರೋಶವನ್ನು ನಿಯಂತ್ರಿಸಲು ಈ ಜನಕಲ್ಯಾಣ ನೀತಿಗಳು ನೆರವಾಗುತ್ತವೆ. ಮತ್ತೊಂದು ಬದಿಯಲ್ಲಿ ಕಾರ್ಪೋರೇಟ್‌ ಮಾರುಕಟ್ಟೆಯನ್ನು ಉತ್ತೇಜಿಸುವ ಬೃಹದಾರ್ಥಿಕ ನೀತಿಗಳನ್ನೂ ಯಾವುದೇ ಅಡೆತಡೆಯಿಲ್ಲದೆ ಜಾರಿಗೊಳಿಸಲಾಗುತ್ತದೆ. ಪ್ರಾಥಮಿಕ ಹಂತದಲ್ಲಿ ಸರ್ಕಾರಿ ಶಾಲೆಗಳ ಉಚಿತ ಶಿಕ್ಷಣ, ಸಮವಸ್ತ್ರ, ಬಿಸಿಯೂಟ ಇತ್ಯಾದಿಗಳನ್ನು ಪೂರೈಸುತ್ತಲೇ ಇಡೀ ಶಿಕ್ಷಣ ವ್ಯವಸ್ಥೆಯನ್ನು ಶೈಕ್ಷಣಿಕ ಪಠ್ಯಕ್ರಮವನ್ನು ಕಾರ್ಪೋರೇಟೀಕರಣಗೊಳಿಸುವ ಪ್ರಕ್ರಿಯೆಯಲ್ಲಿ ಈ ದ್ವಂದ್ವವನ್ನು ಸ್ಪಷ್ಟವಾಗಿ ಗುರುತಿಸಬಹುದು. ಉದ್ಯೋಗ ಕ್ಷೇತ್ರದಲ್ಲೂ ನರೇಗಾದಂತಹ (MGNREGA) ಉದಾತ್ತ ಯೋಜನೆಗಳ ಮೂಲಕ ಕೆಳಸ್ತರದಲ್ಲಿ ಜೀವನೋಪಾಯದ ಮಾರ್ಗಗಳನ್ನು ಒದಗಿಸುತ್ತಲೇ ರೈಲ್ವೆ, ವಿಮಾನ-ಕಡಲಸಾರಿಗೆ, ಗಣಿಗಾರಿಕೆ ಹಾಗೂ ಉತ್ಪಾದನಾ ವಲಯಗಳನ್ನು ಕಾರ್ಪೋರೇಟ್‌ ಹಿಡಿತಕ್ಕೆ ಒಪ್ಪಿಸುವ ಆರ್ಥಿಕ ನೀತಿಯಲ್ಲಿ ಇದರ ಮತ್ತೊಂದು ಆಯಾಮವನ್ನು ಕಾಣಬಹುದು.

ಈ ದ್ವಂದ್ವ ನೀತಿಯನ್ನು ನಿಭಾಯಿಸುತ್ತಾ, ಪ್ರಜಾಪ್ರಭುತ್ವದ ಸೋಗಿನಲ್ಲಿ, ತಳಸಮಾಜದ ಜನತೆಯ ಬದುಕುವ ಹಕ್ಕುಗಳನ್ನೇ ಕಸಿದುಕೊಳ್ಳುವಂತಹ ನೀತಿಗಳನ್ನು ಜಾರಿಗೊಳಿಸಲು ಬಹುಮತದ ಸರ್ಕಾರ ಅತ್ಯವಶ್ಯ. ಒಂದು ಪ್ರಬಲ ರಾಜಕೀಯ ಶಕ್ತಿ ಅನಿವಾರ್ಯ. ಬಲಿಷ್ಠ ನಾಯಕ ಅಥವಾ ರಾಜಕೀಯ ಪಕ್ಷ ಅಗತ್ಯ. ಇಂತಹ ರಾಜಕೀಯ ವ್ಯವಸ್ಥೆಯನ್ನು ಪೋಷಿಸಿ, ಬೆಳೆಸುವ ಸಲುವಾಗಿಯೇ ಕಾರ್ಪೋರೇಟ್‌ ಉದ್ದಿಮೆಗಳು ತಮ್ಮ ಲಾಭದ ಒಂದು ಭಾಗವನ್ನು ರಾಜಕೀಯ ದೇಣಿಗೆಯ ರೂಪದಲ್ಲಿ ವಿವಿಧ ರಾಜಕೀಯ ಪಕ್ಷಗಳಿಗೆ ನೀಡುತ್ತವೆ. ಈ ದೇಣಿಗೆ ಕೇವಲ ಚುನಾವಣಾ ವೆಚ್ಚಗಳನ್ನು ಸರಿದೂಗಿಸುವ ಸಲುವಾಗಿ ನೀಡುವುದಿಲ್ಲ, ಮುಂದಿನ ಹಲವು ವರ್ಷಗಳ ಕಾಲ ಪಕ್ಷದ ಮೂಲ ಸಂರಚನೆಯನ್ನು ಕಾಪಾಡುವ ಸಲುವಾಗಿ ನೀಡಲಾಗುತ್ತದೆ. ಚುನಾವಣಾ ಬಾಂಡ್‌ಗಳ ಸುತ್ತ ನಡೆಯುತ್ತಿರುವ ಚರ್ಚೆಗಳಲ್ಲಿ, ಕಾರ್ಪೋರೇಟ್‌ಗಳಿಂದ ದೇಣಿಗೆಯನ್ನು ನಿರಾಕರಿಸಿರುವ ಒಂದು ಪ್ರಸಂಗವಾದರೂ ಕಾಣಲು ಸಾಧ್ಯವೇ ? ಇದು ಅಧಿಕಾರ ರಾಜಕಾರಣ ಮತ್ತು ಬಂಡವಾಳ ಮಾರುಕಟ್ಟೆಯ ಅವಿನಾಭಾವ ಸಂಬಂಧದ ಒಂದು ಸಂಕೇತ ಅಲ್ಲವೇ ?

ಕಾರ್ಪೋರೇಟ್‌ ಹಿತಾಸಕ್ತಿಯ ವಿಸ್ತರಣೆ

ತಮ್ಮ ಮಾರುಕಟ್ಟೆಯ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಲು, ಲಾಭಾಂಶವನ್ನು ಹೆಚ್ಚಿಸಿಕೊಳ್ಳಲು ಹಾಗೂ ಔದ್ಯಮಿಕ ಸಾಮ್ರಾಜ್ಯವನ್ನು ವಿಸ್ತರಿಸುವ ಸಲುವಾಗಿ ಕಾರ್ಪೋರೇಟ್‌ ಉದ್ದಿಮೆಗಳಿಗೆ ಕಾಮಗಾರಿಗಳು ದೊರೆಯಬೇಕು. ಕೈಗಾರಿಕೆ, ಗಣಿಗಾರಿಕೆ, ಆರೋಗ್ಯ ಕಾಳಜಿ, ಕೃಷಿ ಉತ್ಪಾದನೆ-ಸಂಸ್ಕರಣೆ-ವಿತರಣೆ-ಸಂಗ್ರಹಣೆ, ಶೈಕ್ಷಣಿಕ ಉನ್ನತಿ ಹಾಗೂ ಆಧುನಿಕ ಜನಜೀವನಕ್ಕೆ ಅಗತ್ಯವಾದ ಮೂಲ ಸೌಕರ್ಯಗಳ ಅಭಿವೃದ್ಧಿ ಇವೆಲ್ಲವನ್ನೂ ಮುನ್ನಡೆಸಲು ಬಂಡವಾಳ ಹೂಡಿಕೆ ಮಾಡುವ ಬಂಡವಾಳಿಗರಿಗೆ ಗುತ್ತಿಗೆ ನೀಡುವ ಅಧಿಕಾರ ಆಡಳಿತಾರೂಢ ಸರ್ಕಾರಗಳಿಗೆ ಮಾತ್ರ ಇರುತ್ತದೆ. ಅದರೊಳಗಿನ ಅಧಿಕಾರಶಾಹಿಗೆ ಇರುತ್ತದೆ. ಕಾರ್ಪೋರೇಟ್‌ ಉದ್ದಿಮೆಗಳು ಈ ಅಧಿಕಾರ/ಆಡಳಿತ ಕೇಂದ್ರಗಳನ್ನು ಸಂತೃಪ್ತಿಪಡಿಸುತ್ತಲೇ ಸಮಾನಾಂತರವಾಗಿ ಮತ್ತೊಂದು ಬದಿಯಲ್ಲಿ ತಮ್ಮ ಲಾಭದ ಒಂದು ಪಾಲನ್ನು ಸಮಾಜದ ಉನ್ನತಿಗಾಗಿ ವಿನಿಯೋಗಿಸಲು ಕಾರ್ಪೋರೇಟ್‌ ಉದ್ದಿಮೆಗಳು Corporate Social Responsibility (CSR) ಎಂಬ ಉದಾತ್ತ ಯೋಜನೆಯನ್ನು ಅವಲಂಬಿಸುತ್ತವೆ.

ಅಧಿಕಾರ ರಾಜಕಾರಣದ ಮೇಲೆ ತನ್ನ ನಿಯಂತ್ರಣವನ್ನು ಕಾಪಾಡಿಕೊಳ್ಳುವ ಸಲುವಾಗಿ ಕಾರ್ಪೋರೇಟ್‌ ಬಂಡವಾಳವು ಅನುಸರಿಸುವ ಈ ತಂತ್ರಗಳಿಗೆ ಚುನಾವಣಾ ಬಾಂಡ್‌ನಂತಹ ಯೋಜನೆ ಸುಲಭ ಮಾರ್ಗವಾಗುತ್ತದೆ. ಈ ಯೋಜನೆಯಲ್ಲಿ ಅನುಸರಿಸಲಾದ ನಿಯಮಗಳು ಅಸಾಂವಿಧಾನಿಕವಾಗಿದ್ದು, ಜನತೆಯ ಮಾಹಿತಿ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂಬ ಕಾರಣಕ್ಕೆ ಸುಪ್ರೀಂಕೋರ್ಟ್‌ ಈ ಯೋಜನೆಯನ್ನು ಅಸಿಂಧುಗೊಳಿಸಿದೆ. ಆದರೆ ರಾಜಕೀಯ ಪಕ್ಷಗಳಿಗೆ ಕಾರ್ಪೋರೇಟ್‌ ಉದ್ಯಮದಿಂದ ಅವ್ಯಾಹತವಾಗಿ ಹರಿದುಬರುವ ಕೋಟ್ಯಂತರ ರೂಗಳ ಹಣಕಾಸು ನೆರವಿನ ಸಿಂಧುತ್ವವನ್ನು ಇನ್ನೂ ಪ್ರಶ್ನಿಸಲಾಗಿಲ್ಲ. ಯಾವ ಪಕ್ಷ ಹೆಚ್ಚು ದೇಣಿಗೆ ಪಡೆದಿದೆ, ದೇಣಿಗೆ ನೀಡಿದ ಉದ್ದಿಮೆಗಳಲ್ಲಿ ಫಲಾನುಭವಿಗಳ ಪ್ರಮಾಣ ಎಷ್ಟಿದೆ, ಯಾವ ಕಾರ್ಪೋರೇಟ್‌ ಉದ್ದಿಮೆ ಹೆಚ್ಚಿನ ಲಾಭ ಕಳೆದಿದೆ ಈ ಪ್ರಶ್ನೆಗಳ ಸುತ್ತಲೂ ಚರ್ಚೆಗಳು ನಡೆಯುತ್ತಿದೆ. ಆದರೆ ಕಾರ್ಪೋರೇಟ್‌ ಉದ್ಯಮಿಗಳಿಂದ ದೇಣಿಗೆ ಪಡೆಯುವ ಒಂದು ಪರಂಪರೆಯ ಔಚಿತ್ಯವನ್ನು ನಾವು ಈಗಲೂ ಪ್ರಶ್ನಿಸುತ್ತಿಲ್ಲ.

ಇದನ್ನು ಪ್ರಶ್ನಿಸದೆ ಹೋದರೆ ರಾಜಕೀಯ ಭ್ರಷ್ಟಾಚಾರವನ್ನು ಹೋಗಲಾಡಿಸುವ ಪ್ರಯತ್ನಗಳೆಲ್ಲವೂ ನಿರರ್ಥಕವಾಗುತ್ತದೆ. ಚುನಾವಣಾ ಬಾಂಡ್‌ ಯೋಜನೆಗೆ ಮುನ್ನವೂ ಈ ಪದ್ಧತಿ ಜಾರಿಯಲ್ಲಿತ್ತು. ಬಿಜೆಪಿ ಅದನ್ನು ಅಧಿಕೃತಗೊಳಿಸುವ ಸಾಂವಿಧಾನಿಕ ಮಾರ್ಗವನ್ನು ಆಯ್ಕೆ ಮಾಡಿಕೊಂಡು ಕೈಸುಟ್ಟುಕೊಂಡಿದೆಯಷ್ಟೆ. ಈ ರಾಜಕೀಯ ಭ್ರಷ್ಟಾಚಾರ ಕೊನೆಗೊಳ್ಳಬೇಕಾದರೆ ಪ್ರತಿಯೊಂದು ಪಕ್ಷದಲ್ಲೂ ಆಂತರಿಕ ಪ್ರಜಾಪ್ರಭುತ್ವ ಬಲಗೊಳ್ಳಬೇಕು. ಕೇಂದ್ರೀಯ ನಾಯಕತ್ವ ಅಥವಾ ಸ್ಟೈಲಾಗಿ ಹೇಳುವುದಾದರೆ High command culturȩ ಬಲವಾದಷ್ಟೂ ಹಣಕಾಸು ನಿರ್ವಹಣೆಯ ಸೂತ್ರಗಳೂ ಕೇಂದ್ರೀಕೃತವಾಗುತ್ತಲೇ ಹೋಗುತ್ತವೆ. ಹಾಗಾಗಿಯೇ ಎಲ್ಲ ಪಕ್ಷಗಳಲ್ಲೂ ಟಿಕೆಟ್‌ ಹಂಚಿಕೆ ಎನ್ನುವುದು ಮೇಲಿನಿಂದ ಹೇರಲ್ಪಡುವ ಪ್ರಕ್ರಿಯೆ ಆಗಿದೆಯೇ ಹೊರತು, ತಳಮಟ್ಟದ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಾಗಿಲ್ಲ. ಧ್ವನಿ ಕಳೆದುಕೊಂಡ ಕೆಳಸ್ತರದ ಕಾರ್ಯಕರ್ತರಿಗೆ ಕೇವಲ ಆಯ್ಕೆ ಮಾಡಲಾದ ನಾಯಕನನ್ನು ಗೆಲ್ಲಿಸುವ ಜವಾಬ್ದಾರಿ ಮಾತ್ರ ಇರುತ್ತದೆ.

ಈ ಟಿಕೆಟ್‌ ಹಂಚಿಕೆ ಮತ್ತು ತತ್ಸಂಬಂಧಿ ಆಯ್ಕೆ ಪ್ರಕ್ರಿಯೆಯಲ್ಲೂ ಬಂಡವಾಳ-ಬಂಡವಾಳಿಗ ಹಾಗೂ ಕಾರ್ಪೋರೇಟ್‌ ಮಾರುಕಟ್ಟೆ ಹಿತಾಸಕ್ತಿಗಳು ಪ್ರಧಾನವಾಗುತ್ತದೆ. ಚುನಾವಣೆಯಲ್ಲಿ ಪಕ್ಷಕ್ಕೆ ಹೊರೆಯಾಗದೇ, ಅಧಿಕಾರಕ್ಕೆ ಬಂದರೆ ಪಕ್ಷಕ್ಕೆ ಲಾಭ ತಂದುಕೊಡುವ ಅಭ್ಯರ್ಥಿ ಅಪೇಕ್ಷಣೀಯವಾಗುತ್ತಾನೆ. ಸಹಜವಾಗಿಯೇ ಅಂತಹ ಅಭ್ಯರ್ಥಿ ಕಾರ್ಪೋರೇಟ್‌ ಮಾರುಕಟ್ಟೆ ಮತ್ತು ಉದ್ಯಮವನ್ನು ಒರಗುಹಲಗೆಯನ್ನಾಗಿ ಬಳಸಿಕೊಂಡು ಜನಪ್ರತಿನಿಧಿಯಾಗುತ್ತಾನೆ. ನಂತರ ಇದೇ ಮಾರುಕಟ್ಟೆಯೇ ಆತನಿಗೆ ಚಿಮ್ಮುಹಲಗೆಯಾಗಿ ಪರಿಣಮಿಸಿ, ಆಳ್ವಿಕೆಯ ಅವಧಿಯಲ್ಲೇ ಕೋಟ್ಯಧಿಪತಿಯಾಗಲು ನೆರವಾಗುತ್ತದೆ. ದೇಶದ ಶಾಸನಸಭೆಗಳಲ್ಲಿ ಕೋಟ್ಯಧೀಶರ ಸಂಖ್ಯೆ ಹೆಚ್ಚಾಗಿರುವುದಕ್ಕೂ, ನವ ಉದಾರವಾದಿ ಕಾರ್ಪೋರೇಟ್‌ ಆರ್ಥಿಕತೆಗೂ ನಡುವೆ ಇರುವ ಸೂಕ್ಷ್ಮ ಸಂಬಂಧಗಳನ್ನು ಇಲ್ಲಿ ಗ್ರಹಿಸಬಹುದು.

ಹಾಗಾಗಿ ಚುನಾವಣಾ ಬಾಂಡ್‌ಗಳಿಂದಾಚೆಗೂ ಕಾಣಬಹುದಾದ ರಾಜಕೀಯ ಭ್ರಷ್ಟಾಚಾರವನ್ನು ನೋಡುವಾಗ ನಮ್ಮ ದೃಷ್ಟಿ ಪ್ರಜಾಪ್ರಭುತ್ವದ ಬೇರುಗಳ ಮೇಲಿರಬೇಕಾಗುತ್ತದೆ. ಆಂತರಿಕ ಪ್ರಜಾಪ್ರಭುತ್ವವನ್ನು ಅನುಸರಿಸದ ರಾಜಕೀಯ ಪಕ್ಷಗಳಿಗೆ ಈ ನಿಟ್ಟಿನಲ್ಲಿ ಆಲೋಚನೆ ಮಾಡುವ ನೈತಿಕತೆಯೂ ಇಲ್ಲದಿರುವುದು ವರ್ತಮಾನ ಭಾರತದ ದೊಡ್ಡ ದುರಂತ. ಮತದಾನ ಸಾರ್ವಭೌಮ ಜನತೆಯ ಸಾಂವಿಧಾನಿಕ ಹಕ್ಕು. ಚುನಾವಣೆ ಇದೇ ಜನತೆಯ ಸಾಂವಿಧಾನಿಕ ಅಸ್ತ್ರ. ಇವೆರಡನ್ನೂ ಕಲುಷಿತಗೊಳಿಸುತ್ತಿರುವ ಬಂಡವಾಳಶಾಹಿ ಮಾರುಕಟ್ಟೆಯ ಭ್ರಷ್ಟ ಪರಂಪರೆಯ ವಿರುದ್ಧ ನಾವು ಹೋರಾಡಬೇಕಿದೆ. ಯಾವ ಪಕ್ಷಗಳು ಈ ನಿಟ್ಟಿನಲ್ಲಿ ಆಲೋಚನೆ ಮಾಡುತ್ತಿವೆ ? ಉತ್ತರ ಶೋಧಿಸೋಣ.

Previous Post

ಈಶ್ವರಪ್ಪ ಅಸಮಾಧಾನಕ್ಕೆ ಮುಲಾಮು ಹಚ್ತಾರಾ ನಮೋ ?! ಇಂದು ಶಿವಮೊಗ್ಗದಲ್ಲಿ ಮೋದಿ ಹವಾ ! 

Next Post

ಬಿಜೆಪಿಗೆ ಗುಡ್ ಬೈ ಹೇಳ್ತಾರಾ ಡಿ.ವಿ.ಸದಾನಂದಗೌಡ ?! ಮತ್ತೊಬ ಮಾಜಿ ಸಿಎಂಗೆ ಡಿಕೆಶಿ ಗಾಳ ?! 

Related Posts

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ
Top Story

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

by ಪ್ರತಿಧ್ವನಿ
June 28, 2025
0

----ನಾ ದಿವಾಕರ---- ಡಿಜಿಟಲ್‌ ಯುಗದಲ್ಲೂ ಅಮಾನವೀಯ ಸಾಂಪ್ರದಾಯಿಕತೆ ಜೀವಂತವಾಗಿರುವುದು ದುರಂತ 2047ರ ವೇಳೆಗೆ ಪೂರ್ಣ ವಿಕಾಸದ ಕನಸು ಕಾಣುತ್ತಿರುವ ಡಿಜಿಟಲ್‌ ಭಾರತ ತಾನು ಪರಿಭಾವಿಸಿಕೊಂಡಿರುವ ʼಪ್ರಗತಿ-ಆಧುನಿಕತೆ-ನಾಗರಿಕತೆʼಯ ಪರಿಕಲ್ಪನೆಗಳನ್ನು...

Read moreDetails

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

June 27, 2025

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

June 27, 2025
Next Post
ಬಿಜೆಪಿಗೆ ಗುಡ್ ಬೈ ಹೇಳ್ತಾರಾ ಡಿ.ವಿ.ಸದಾನಂದಗೌಡ ?! ಮತ್ತೊಬ ಮಾಜಿ ಸಿಎಂಗೆ ಡಿಕೆಶಿ ಗಾಳ ?! 

ಬಿಜೆಪಿಗೆ ಗುಡ್ ಬೈ ಹೇಳ್ತಾರಾ ಡಿ.ವಿ.ಸದಾನಂದಗೌಡ ?! ಮತ್ತೊಬ ಮಾಜಿ ಸಿಎಂಗೆ ಡಿಕೆಶಿ ಗಾಳ ?! 

Please login to join discussion

Recent News

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ
Top Story

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

by ಪ್ರತಿಧ್ವನಿ
June 28, 2025
Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
Top Story

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
June 27, 2025
Top Story

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

by ಪ್ರತಿಧ್ವನಿ
June 27, 2025
Top Story

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

by ಪ್ರತಿಧ್ವನಿ
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

June 28, 2025

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada