ಹಾಸನ (Hassan) ಇಂದು ಕುತೂಹಲದ ಬೆಳವಣಿಗೆಗೆ ಸಾಕ್ಷಿಯಾಯ್ತು. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಸ್ವತ ಹಾಸನಕ್ಕೆ ಭೇಟಿ ನೀಡಿ ಕ್ಷೇತ್ರದ ಬಗ್ಗೆ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರ ಜೊತೆ ಚರ್ಚೆ ನಡೆಸಿದ್ದಾರೆ. ಹಾಸನ ಜೆಡಿಎಸ್ ನ (jds)ಭರ್ದ್ರಕೋಟೆ , ಜೆಡಿಎಸ್ ಅಭ್ಯರ್ಥಿಗೆ (jds candidate)ಇಲ್ಲಿ ಆತಂಕವೇ ಇಲ್ಲ , ನಿರಾತಂಕವಾಗಿ ಗೆಲ್ಲುವ ಕ್ಷೇತ್ರ ಎಂದೇ ಭಾವಿಸಲಾಗಿತ್ತು. ಆದ್ರೆ ಕಾಂಗ್ರೆಸ್ (congress) ಈ ಬಾರಿ ಎಲ್ಲಿ ಬೇರೇನೆ ಪ್ಲಾನ್ ಮಾಡಿದೆ. ಇದು ಜೆಡಿಎಸ್ (jds) ಪಾಲಿಗೆ ಕೊಂಚ ಕಳವಳಕಾರಿಯಾಗಿದೆ.

ಈ ಬಾರಿ ಹಾಸನ ಲೋಕಸಭಾ (Hassan constituency) ಕ್ಷೇತ್ರದಿಂದ ಕಾಂಗ್ರೆಸ್ ಕಣಕ್ಕಿಳಿಸಿರುವ ಅಭ್ಯರ್ಥಿ ಶ್ರೇಯಸ್ ಪಟೇಲ್(Shreyas patil). ಇದೇ ಕಾರಣಕ್ಕೆ ಈಗ ಪ್ರಜ್ವಲ್ ರೇವಣ್ಣ (Prajwal revanna) ಗೆಲುವು ಸುಲಭವಲ್ಲ ಎಂಬ ಅಭಿಪ್ರಾಯ ಕೇಳಿಬರ್ತಿದೆ. ಯಾಕಂದ್ರೆ ಶ್ರೇಯಸ್ ಪಟೇಲ್ (Shreya’s patil) ಕೂಡ ರಾಜಕೀಯ ಹಿನ್ನಲೆಯುಳ್ಳ ಕುಟುಂಬದವರೇ. ಮೇಲಾಗಿ ಶ್ರೇಯಸ್ ಪಟೇಲ್ ತಂದೆ ಇದೇ ಹಾಸನದಲ್ಲಿ ದೇವೇಗೌಡರ (HD Devegowda) ವಿರುದ್ಧ ಸ್ಪರ್ಧೆ ಮಾಡಿ ಗೆದ್ದಿರುವ ಇತಿಹಾಸವೂ ಇದೆ. ಈ ಎಲ್ಲಾ ಲೆಕ್ಕಾಚಾರ ಹಾಕ್ಕೊಂಡೇ ಕಾಂಗ್ರೆಸ್ ಶ್ರೇಯಸ್ ಪಟೇಲ್ (Shreya patil) ರನ್ನ ಈ ಬಾರಿ ಅಭ್ಯರ್ಥಿ ಮಾಡಿದೆ.

ಅಷ್ಟೇ ಅಲ್ಲ , ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಹೆಚ್.ಡಿ. ರೇವಣ್ಣ (HD revanna) ವಿರುದ್ಧ ಇದೇ ಶ್ರೇಯಸ್ ಪಟೇಲ್ ಸ್ಪರ್ಧೆ ಮಾಡಿದ್ದರು. ಸುಲಭವಾಗಿ ಗೆಲ್ಲಬಹುದಾದ ರೇವಣ್ಣ ಕೊನೆ ಕೊನೆಗೆ ಗೆದ್ದರೆ ಸಾಕು ಎಂಬಷ್ಟರ ಮಟ್ಟಿಗೆ ಪೈಪೋಟಿ ಕೊಟ್ಟಿದ್ರು ಶ್ರೇಯಸ್ ಪಟೇಲ್. ಕೊನೆಗೆ ತೀರಾ ಕಡಿಮೆ ಅಂತರದಿಂದ ರೇವಣ್ಣ ಕಷ್ಟಪಟ್ಟು ಗೆಲುವು ತಮ್ಮದಾಗಿಸಿಕೊಂಡಿದ್ರು. ಸೋ ಈ ಬಾರಿ ಸ್ಪರ್ಧೆ ಸುಲಭವಿಲ್ಲ

ಜೆಡಿಎಸ್ ಆಂತರಿಕ ಸರ್ವೆಗಳು (jds survey report) ಕೂಡ ಈ ಎಲ್ಲಾ ಅಂಶಗಳನ್ನ ಲೆಕ್ಕಾಚಾರ ಮಾಡಿ ಪ್ರಜ್ವಲ್ ಹಾದಿ ಸುಗಮವಿಲ್ಲ ಎಂಬ ರಿಪೋರ್ಟ್ (Report) ಕೊಟ್ಟಿದ್ದು , ಇದು ದಳಪತಿಗಳ ನಿದ್ದೆಗೆಡಿಸಿದೆ. ಸೋ ಖುದ್ದು ಕುನರಸ್ವಾಮಿ (Kumaraswamy) ಹಾಸನಕ್ಕೆ ಲಗ್ಗೆ ಇಟ್ಟು ಮತದಾರನ ನಾಡಿ ಮಿಡಿತ ಅರಿಯಲು ಮುಂದಾಗಿದ್ದಾರೆ.